ಮನೆಯ ಮುಂದೆ ಪೆಂಡಾಲ್ಗಳು, ಗಿರ ಗಿರನೆ ತಿರುಗುವ ರುಬ್ಬುವ ಯಂತ್ರಗಳ ಸದ್ದು, ಹುಲ್ಲು ತಿನ್ನುತ್ತಾ ಮೇ ಮೇ ಎನ್ನುವ ಕುರಿಗಳು, ಮನೆಗಳಲ್ಲಿ ಬೀಗರು-ಬಂಧುಗಳ ಕಲರವ !
ಲೂಟಿಯ ಎಟಿಎಂ, ಪ್ರತ್ಯೇಕ ರಾಷ್ಟ್ರದ ಮಾತು
ಶಿವಮೊಗ್ಗ : ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಹಣ ಲೂಟಿ ಮಾಡುವ ಎಟಿಎಂ ಮಾಡಿಕೊಂಡಿದೆ, ಅಭಿವೃದ್ಧಿ ಕಾರ್ಯಗಳಿಗೂ ಹಣವಿಲ್ಲದೆ ಬರೀ ಲೂಟಿಯಲ್ಲಿ ತೊಡಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ನೆಲ-ಜಲ, ನಾಡು-ನುಡಿ, ಸಂಸ್ಕೃತಿಗೆ ಪ್ರೋತ್ಸಾಹ ಅಗತ್ಯ
ಹರಿಹರ : ನಾಡು, ನುಡಿ, ನೆಲ, ಜಲ, ಸಂಸ್ಕೃತಿಯನ್ನು ಎಲ್ಲರೂ ಪ್ರೋತ್ಸಾಹಿಸಿ ದಾಗ ಮಾತ್ರ ಕನ್ನಡ ಹೆಮ್ಮರವಾಗಿ ಬೆಳೆಯು ವುದಕ್ಕೆ ಸಹಕಾರಿಯಾಗುತ್ತದೆ ಎಂದು ಬಾಪೂಜಿ ಸಂಸ್ಥೆಯ ನಿರ್ದೇಶಕರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.
ಕನ್ನಡದ ಹಿರಿಮೆ ಹೆಚ್ಚಾಗಲು ಕಿಚ್ಚು – ಅಭಿಮಾನ ಮುಖ್ಯ
ಹರಿಹರ : ನಾಡಿನ ಜನತೆಯಲ್ಲಿ ಕನ್ನಡದ ಕಿಚ್ಚು ಹಾಗೂ ಅಭಿಮಾನ ಹೆಚ್ಚಾದರೆ ಕನ್ನಡದ ಹಿರಿಮೆ ಕೂಡ ಹೆಚ್ಚಾಗುತ್ತದೆ ಎಂದು ತಹಶೀಲ್ದಾರ್ ಗುರುಬಸವರಾಜ್ ಹೇಳಿದರು.
ಗಮನಸೆಳೆದ ಶ್ರೀನಿವಾಸ ಕಲ್ಯಾಣ ವೈಭವ
ತಿರುಪತಿ ತಿಮ್ಮಪ್ಪನ ದೇಗುಲದ ವೈಭವ ಇಂದು ದೇವನಗರಿ ಯಲ್ಲೂ ಅನವಾರಣಗೊಂಡಿತ್ತು. ಸುಂದರ ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಸಂಭ್ರಮ ಕಂಡು ಬಂದಿದ್ದು ವಿಶೇಷವೇ ಸರಿ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆ ಯಲ್ಲಿ ಭಕ್ತರು ಆಗಮಿಸಿದ್ದರು.
ಕನ್ನಡಿಗರೂ ಪತ್ರಿಕೆ, ಪುಸ್ತಕಗಳಿಗೆ ಹಣ ಖರ್ಚು ಮಾಡಬೇಕು
ಹರಿಹರ : ಕೇರಳದವರಂತೆ ಕನ್ನಡಿಗರೂ ದಿನ ಪತ್ರಿಕೆ ಹಾಗೂ ಪುಸ್ತಕಗಳಿಗೆ ಹಣ ಖರ್ಚು ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಬೆಂಗಳೂರು ಸಂಸ್ಕೃತ ವಿ.ವಿ. ಮಾಜಿ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಅಭಿಪ್ರಾಯಪಟ್ಟರು.
ಹಾವೇರಿ ಜಿಲ್ಲಾ ಜೆಡಿಎಸ್ ವಿವಿಧ ವಿಭಾಗಗಳ ಅಧ್ಯಕ್ಷರ ಆಯ್ಕೆ
ರಾಣೇಬೆನ್ನೂರು : ಹಾವೇರಿ ಜಿಲ್ಲಾ ಜಾತ್ಯತೀತ ಜನತಾದಳದ ವಿವಿಧ ವಿಭಾಗಗಳ ಅಧ್ಯಕ್ಷರು ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ ಗೌಡ ಶಿವಣ್ಣನವರ ತಿಳಿಸಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ
ಭಾರತ ಸರ್ಕಾರದಿಂದ ದೆಹಲಿ ಪೆೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೆೊಲೀಸ್ ಪಡೆಗಳ ಸಬ್ಇನ್ಸ್ಪೆಕ್ಟರ್ ವಿವಿಧ ಹಂತದ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳು ಅರ್ಹರಿದ್ದಾರೆ.
ಸಂಶೋಧನಾ ಸ್ಥಾನಗಳಿಗೆ ಅರ್ಜಿ ಆಹ್ವಾನ
ದಾವಣಗೆರೆ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಲ್ಲಿ ಸಂಶೋಧನಾ ಸ್ಥಾನಗಳಿಗೆ ಆಹ್ವಾನಿಸಲಾಗಿರುವ ಅರ್ಜಿಗಳ ಅವಧಿಯನ್ನು ಮಾ. 25 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಬಾಲಕನ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ 20 ವರ್ಷ ಜೈಲು ಶಿಕ್ಷೆ
ಬಾಲಕನ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್.ಟಿ.ಎಸ್.ಸಿ-1 ನ್ಯಾಯಾಲಯ 20ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ.ಗಳ ದಂಡ ವಿಧಿಸಿದೆ. ನಗರದ ನಿವಾಸಿ ಆಂಜನೇಯ ಅಲಿಯಾಸ್ ಅನು ಶಿಕ್ಷೆಗೊಳಗಾದವ.
ಹರಿಹರದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದು
ಹರಿಹರದ ಸಿದ್ದೇಶ್ವರ್ ಪ್ಯಾಲೇಸ್ ಸಭಾಂಗಣದಲ್ಲಿ ಜಿಲ್ಲಾ ಮತ್ತು ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆಯುತ್ತಿರುವ 13ನೇ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಇಂದು ಬೆಳಗ್ಗೆ 9 ಗಂಟೆಗೆ ಶ್ರೀನಿಧಿ ಕೆ. ಗಿರಿಜಾಂಬ ಅವರಿಂದ ವೀಣಾವಾದನ ಹಾಗೂ ಗಾನ ಲಹರಿ ವಿದ್ಯಾಲಯದಿಂದ ಸುಗಮ ಸಂಗೀತ ಆಯೋಜಿಸಲಾಗಿದೆ.
ಶುಭದಾ ತಂಡದಿಂದ ವೀಣಾ ವಾದನ
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮೊನ್ನೆ ಏರ್ಪಾಡಾಗಿದ್ದ ಶ್ರೀ ರಾಘವೇಂದ್ರ ಸ್ವಾಮಿಗಳ ಸಪ್ತಾಹದ ಸಂದರ್ಭದಲ್ಲಿ ವಿದುಷಿ ಶುಭದಾ ಮತ್ತು ತಂಡದಿಂದ ವೀಣಾ ವಾದನ ನಡೆಯಿತು.
ನಗರದಲ್ಲಿ ಇಂದು – ನಾಳೆ ಕೃಷಿ ಮಾರುಕಟ್ಟೆ ಬಂದ್
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಯ ಜಾತ್ರೆಯ ಅಂಗವಾಗಿ ಇಂದು ಮತ್ತು ನಾಳೆ ಕೃಷಿ ಉತ್ಪನ್ನಗಳ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಲಾಗಿದೆ. ವರ್ತಕರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸದೇ ಇರುವುದರಿಂದ ರೈತರು ಕೃಷಿ ಉತ್ಪನ್ನವನ್ನು ಮಾರುಕಟ್ಟೆಗೆ ತರಬಾರದೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.
ನನ್ನ ಗೆಲುವಿಗೆ ಮೋದಿ ಆಶೀರ್ವಾದ ಮಾಡಿದ್ದಾರೆ
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ನಡೆದ ಲೋಕಸಭಾ ಚುನಾವಣಾ ಪ್ರಚಾರ ಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲೇ ತೆರೆದ ವಾಹನದಲ್ಲಿ ಹೋಗಿದ್ದು ನನ್ನ ಪುಣ್ಯ. ಈ ಮೂಲಕ ಅವರು ನನ್ನ ಗೆಲುವಿಗೆ ಆಶೀರ್ವಾದ ಮಾಡಿದ್ದಾರೆ
ಚುನಾವಣಾ ಅಕ್ರಮಗಳ ಕಣ್ಗಾವಲಿಗೆ, ಜಿಲ್ಲೆಯಲ್ಲಿ 32 ಚೆಕ್ ಪೋಸ್ಟ್ಗಳ ಸ್ಥಾಪನೆ
ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕವಾಗಿ ಹಾಗೂ ಮುಕ್ತ, ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲೆಯ ಗಡಿಭಾಗ ಸೇರಿದಂತೆ, ದಾವಣಗೆರೆ ಜಿಲ್ಲೆಯಲ್ಲಿ 32 ಕಡೆ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ
ದೇವಿ ಜಾತ್ರೆ ನೇರ ಪ್ರಸಾರ
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಇಂದಿನಿಂದ ಆರಂಭವಾಗಿದ್ದು, ಜಾತ್ರಾ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಸ್ಥಳೀಯ ವಿಕ್ಟರಿ ಡಿಜಿಟಲ್ ಚಾನಲ್ (ನಂಬರ್ 150)ನಲ್ಲಿ ವೀಕ್ಷಿಸಬಹುದಾಗಿದೆ.
ವಿವಿಧ ಅಕಾಡೆಮಿಗಳಿಗೆ ನೇಮಕ ಕಲಾವಿದ ಮಹಲಿಂಗಪ್ಪ ಸಂತಸ
ವಿವಿಧ ಅಕಾಡೆಮಿಗಳಿಗೆ ಕರ್ನಾಟಕ ಸರ್ಕಾರದಿಂದ ನೇಮಕಗೊಂಡಿರುವ ಸದಸ್ಯರುಗಳಿಗೆ ಹಿರಿಯ ಚಿತ್ರ ಕಲಾವಿದರೂ ಆದ ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಮಹಲಿಂಗಪ್ಪ ಎ. ಆಭಿನಂದನೆ ಸಲ್ಲಿಸಿರುತ್ತಾರೆ.
ನಗರದಲ್ಲಿ ಜಾತ್ರೆ : ಮದ್ಯ ಮಾರಾಟ ನಿಷೇಧ
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಹಾಗೂ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಎರಡು ದೇವಸ್ಥಾನಗಳ 500 ಮೀಟರ್ ವ್ಯಾಪ್ತಿಯಲ್ಲಿ ನಾಳೆ ದಿನಾಂಕ 19 ರ ಬೆಳಿಗ್ಗೆ 6 ರಿಂದ ನಾಡಿದ್ದು ದಿನಾಂಕ 20 ರ ಮಧ್ಯರಾತ್ರಿ 12 ರವರೆಗೆ ಮದ್ಯ ಮಾರಾಟ ನಿಷೇಧ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಆದೇಶಿಸಿದ್ದಾರೆ.
ತಾರೇಹಳ್ಳಿಯಲ್ಲಿ ನಾಳೆ ರಂಗನಾಥ ಸ್ವಾಮಿ ರಥೋತ್ಸವ
ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಮಹಾರಥೋತ್ಸವವು ನಾಳೆ ಬುಧವಾರ ಸಂಜೆ 6.30ಕ್ಕೆ ನಡೆಯಲಿದೆ. ರಥೋತ್ಸವದ ಪ್ರಯುಕ್ತ ಇಂದು ಗರುಡ ವಾಹನ ಉತ್ಸವ, ನಾಳೆ ಗುರುವಾರ ಅನ್ನ ಸಂತರ್ಪಣೆ, ದಿನಾಂಕ 22ರ ಶುಕ್ರವಾರ ಓಕುಳಿ ಉತ್ಸವ ಜರುಗಲಿದೆ.
ನಂದಿಗುಡಿಯಲ್ಲಿ ಇಂದು ರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವ
ಮಲೇಬೆನ್ನೂರು ಸಮೀಪದ ನಂದಿ ಗುಡಿ ಗ್ರಾಮದ ಶ್ರೀ ಬಸವೇಶ್ವರ ದೇವರ ರಥೋತ್ಸವ ಇಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.
ಎಸ್.ಎಸ್. ಕೇರ್ ಟ್ರಸ್ಟ್ನಿಂದ ಜನತೆಗೆ ಟ್ಯಾಂಕರ್ನಲ್ಲಿ ಉಚಿತ ನೀರು ಪೂರೈಕೆ
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಾಗೂ ಬೇಸಿಗೆ ಹಿನ್ನೆಲೆಯಲ್ಲಿ ಎಸ್.ಎಸ್.ಕೇರ್ ಟ್ರಸ್ಟ್ನಿಂದ ಜನತೆಗೆ ಟ್ಯಾಂಕರ್ ಮೂಲಕ ಉಚಿತ ನೀರು ಪೂರೈಕೆ ಮಾಡಲಾಗುವುದು ಎಂದು ಟ್ರಸ್ಟ್ನ ಮುಖ್ಯಸ್ಥರೂ, ಶಾಸಕರೂ ಆದ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ನಗರದಲ್ಲಿ ರಸ್ತೆ ಬದಿ ನಿಂತಿದ್ದ ಕಾರ್ಗೆ ಬೆಂಕಿ
ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ಎದುರು ನಿಲ್ಲಿಸಿದ್ದ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ಕಾರು ಬಹುತೇಕ ಸುಟ್ಟು ಕರಕಲಾದ ಘಟನೆ ಸೋಮವಾರ ಮಧ್ಯಾಹ್ನ 1.20ರ ವೇಳೆ ನಡೆದಿದೆ.
ನಗರದ ಸಹ್ಯಾದ್ರಿ ಚಿಟ್ಸ್ ಗೆ ರಾಜ್ಯ ಪ್ರಶಸ್ತಿ
ನಗರದ ಸಹ್ಯಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಪ್ರೈಡ್ ಇಂಡಿಯಾ ಅವಾರ್ಡ್ಸ್ ಸಂಸ್ಥೆಯು ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಎಕ್ಸಲೆನ್ಸ್ ಬಿಸಿನೆಸ್ ಅವಾರ್ಡ್ಸ್ ನಲ್ಲಿ 2024ನೇ ಸಾಲಿನ ಮೋಸ್ಟ್ ಟ್ರಸ್ಟೆಡ್ ಚಿಟ್ ಫಂಡ್ ಕಂಪನಿ ಪ್ರಶಸ್ತಿ ನೀಡಿದೆ.
ಶ್ರೀ ದುಗ್ಗಮ್ಮ ಜಾತ್ರೆ : ವಾಸವಿ ಸಂಘದಿಂದ ಮಜ್ಜಿಗೆ
ಶ್ರೀ ದುರ್ಗಾಂಬಿಕ ದೇವಿ ಜಾತ್ರೆಯ ಪ್ರಯುಕ್ತ ಇಂದಿನಿಂದ ಇದೇ ದಿನಾಂಕ 24ರ ಭಾನುವಾರದವರೆಗೆ (ಬುಧವಾರ ಹೊರತುಪಡಿಸಿ) ಬೆಳಿಗ್ಗೆ 11 ಗಂಟೆಯಿಂದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸಾ ರ್ವಜನಿಕರಿಗೆ ಮಜ್ಜಿಗೆ ವಿತರಿಸಲಾಗುವುದು
ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ರೂ. 3.89 ಲಕ್ಷ ನಗದು ವಶ
ಲೋಕಿಕೆರೆ ಚೆಕ್ ಪೋಸ್ಟ್ನಲ್ಲಿ ಮುಖ್ಯಸ್ಥರಾದ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಎಸ್.ಎಸ್.ಟಿ. ತಂಡದಿಂದ 3,89,780/- ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.
ಅಂಚೆ : ಡಾಕ್ ಅದಾಲತ್
ಸಾರ್ವಜನಿಕರ ಮತ್ತು ಅಂಚೆ ಗ್ರಾಹಕರ ಅಂಚೆ ಸೇವೆಗಳಿಗೆ ಸಂಬಂಧಿಸಿದ ದೂರು ಮತ್ತು ಸಲಹೆಗಳನ್ನು ಪಡೆಯಲು ಇದೇ ದಿನಾಂಕ 20 ರಂದು ಸಂಜೆ 4 ಗಂಟೆಗೆ ದಾವಣಗೆರೆ ಅಂಚೆ ಅಧೀಕ್ಷಕರ ಕಚೇರಿ, ಪ್ರಧಾನ ಅಂಚೆ ಕಚೇರಿಯ ಮೊದಲನೇ ಮಹಡಿ, ಗಡಿಯಾರ ಕಂಬದ ಹತ್ತಿರ ಮಂಡಿಪೇಟೆ ಇಲ್ಲಿ ಡಾಕ್ ಅದಾಲತ್ ನಡೆಸಲಾಗುವುದು
ಶ್ಯಾಬನೂರಿನಲ್ಲಿ ಇಂದು ರಥೋತ್ಸವ
ದಾವಣಗೆರೆ - ಶ್ಯಾಬ ನೂರಿನ ಶ್ರೀ ಆಂಜನೇಯ ಸ್ವಾಮಿ ರಥೋ ತ್ಸವವು ಇಂದು ಮಧ್ಯರಾತ್ರಿ 12 ಗಂಟೆಗೆ ಜರುಗಲಿದೆ. ನಾಳೆ ಬುಧವಾರ ಬೆಲ್ಲದ ಬಂಡಿ ಉತ್ಸವ, ದಿನಾಂಕ 21ರ ಗುರುವಾರ ಓಕುಳಿ ಕಾರ್ಯಕ್ರಮ ನಡೆಯಲಿದೆ.
ಸಿಇಟಿ, ನೀಟ್ : ಎಬಿವಿಪಿ ತರಬೇತಿ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ದೃಶ್ಯಕಲಾ ಮಹಾವಿದ್ಯಾಲಯದ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಇದೇ ದಿನಾಂಕ 28 ರಿಂದ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ಪ್ರಾರಂಭವಾಗಲಿದೆ.
ಕರ್ನಾಟಕ ರಾಜ್ಯ ವಕ್ಫ್ ಪರಿಷತ್ ಸದಸ್ಯರಾಗಿ ಘನಿ ತಾಹೇರ್ ನೇಮಕ
ಕರ್ನಾಟಕ ರಾಜ್ಯ ವಕ್ಫ್ ಪರಿ ಷತ್ ಸದಸ್ಯರನ್ನಾಗಿ ನಗರದ ಅಬ್ದುಲ್ ಘನಿ ತಾಹೇರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಶಿವರಾತ್ರಿ ಜಾಗರಣೆಯಲ್ಲಿ `ಮೋಜು – ಮಸ್ತಿ’ ಬೇಸರದ ಸಂಗತಿ
ಹೊನ್ನಾಳಿ : ಪ್ರತಿಯೊಂದು ಹಬ್ಬಗಳ ಆಚರಣೆ ಹಿನ್ನೆಲೆಯನ್ನು ಸರಿಯಾಗಿ ತಿಳಿದುಕೊಂಡು ಹಬ್ಬಗಳನ್ನು ಸಂಪ್ರದಾಯಬದ್ಧವಾಗಿ ಆಚರಣೆ ಮಾಡಬೇಕು ಎಂದು ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಗ್ರಾಮೀಣ ಭಾಗಗಳಲ್ಲಿ ಉಳಿದಿದೆ
ಹರಪನಹಳ್ಳಿ : ಗ್ರಾಮೀಣ ಭಾಗಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿದಿದೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಜಿ. ಪ್ರಕಾಶ್ ಹೇಳಿದರು.
ಕೆರೆ-ಕಟ್ಟೆಗಳು ಹಳ್ಳಿಯ ಜನ – ಜಾನುವಾರುಗಳಿಗೆ ಜೀವ ನಾಡಿ
`ನಮ್ಮೂರು ನಮ್ಮ ಕೆರೆ' ಅಭಿವೃದ್ಧಿ ಕಾರ್ಯಕ್ರಮ ದಡಿಯಲ್ಲಿ ಪುರ್ನಶ್ಚೇತನಗೊಳಿಸಿರುವ ಕರಿಯಮ್ಮ ದೇವಿ ಕೆರೆ ಹಸ್ತಾಂತರ ಹಾಗೂ ನಾಮಫಲಕ ಅನಾವರಣ ಕಾರ್ಯಕ್ರಮವು ಸೋಮವಾರ ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದ ಮಹಾರಾಜ್ ದಿವ್ಯ ಸಾನ್ನಿಧ್ಯದಲ್ಲಿ ಜರುಗಿತು.
ಪರಿಸರ ಪೂರಕ ಕಾರ್ಯಕ್ರಮಗಳಿಗೆ ಉಚಿತ ಸಲಹೆ
ಈ ಜಿಲ್ಲೆಯ ಋಣ ನನ್ನ ಮೇಲಿದೆ, ಪರಿಸರ ಪೂರಕ ಕಾರ್ಯಕ್ರಮಗಳನ್ನು ರೂಪಿಸಿದರೆ ಉಚಿತ ಸಲಹೆ ಮತ್ತು ಸೇವೆ ಮಾಡಲು ಸಿದ್ಧವೆಂದು ನಿವೃತ್ತ ಜಿಲ್ಲಾಧಿಕಾರಿಯೂ ಆದ ಪರಿಸರ ಪ್ರೇಮಿ ಕೆ. ಅಮರನಾರಾಯಣ ಕರೆ ನೀಡಿದರು.
ವಚನಾಮೃತ ಬಳಗದಲ್ಲಿ ಮಹಿಳಾ ದಿನಾಚರಣೆ
ವಚನಾಮೃತ ಬಳಗದ ವತಿಯಿಂದ ಶುಕ್ರವಾರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಚಿತ್ರಕಿ ಶಿವಕುಮಾರ್ರಿಂದ ವಚನ ಗಾಯನ
ಮಹಾಶಿವರಾತ್ರಿ ಪ್ರಯುಕ್ತ ಬಳ್ಳಾರಿ ಸಿದ್ದಮ್ಮ ಪಾರ್ಕ್ನಲ್ಲಿ ಚಿತ್ರಕಿ ಶಿವಕುಮಾರ್ ಅವರು ಬಸವಣ್ಣ ಹಾಗೂ ಶಿವಯೋಗಿ ಸಿದ್ಧರಾಮೇಶ್ವರರ ವಚನಗಳನ್ನು ಹಾಡಿದರು.
ಹರಿಹರ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರ ಅದ್ಧೂರಿ ಮೆರವಣಿಗೆ
ಹರಿಹರ : ನಗರದ ಸಿದ್ದೇಶ್ವರ್ ಪ್ಯಾಲೇಸ್ ಸಭಾಂಗಣದಲ್ಲಿ ನಡೆದ 13 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ತಹಶೀಲ್ದಾರ್ ಗುರುಬಸವರಾಜ್ ಚಾಲನೆ ನೀಡಿದರು.
ಗ್ರಾಮದೇವತೆ ಹಬ್ಬಕ್ಕೆ ಮಲೇಬೆನ್ನೂರು ಸಜ್ಜು
ಮಲೇಬೆನ್ನೂರು : ಪಟ್ಟಣದಲ್ಲಿ 5 ವರ್ಷಗಳ ಬಳಿತ ಮತ್ತೆ ಗ್ರಾಮದೇವತೆಗಳಾದ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ ಮತ್ತು ಹಟ್ಟಿ ದುರ್ಗಾಂಬಿಕಾದೇವಿ ಜಾತ್ರೆ ಮಂಗಳವಾರ ಮತ್ತು ಬುಧವಾರ ವೈಭವದೊಂದಿಗೆ ಜರುಗಲಿದೆ.
ಹರಪನಹಳ್ಳಿಯಲ್ಲಿ ಲೋಕ ಅದಾಲತ್ ಮೂಲಕ 1311 ಪ್ರಕರಣ ಇತ್ಯರ್ಥ
ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜೀ ಸಂಧಾನದಡಿ ಹರಪನಹಳ್ಳಿಯ ಉಭಯ ನ್ಯಾಯಾಲಯಗಳಲ್ಲಿ ಶನಿವಾರದಂದು ನ್ಯಾಯಾಧೀಶರಾದ ಎಂ. ಭಾರತಿ ಮತ್ತು ಫಕ್ಕೀರವ್ವ ಕೆಳಗೇರಿ ಅವರ ನೇತೃತ್ವದಲ್ಲಿ 1604 ಪ್ರಕರಣಗಳ ಪೈಕಿ 1311 ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.
ಕಟ್ಟುಪಾಡಿನಲ್ಲಿ ಬದುಕದೇ, ಸ್ವತಂತ್ರವಾಗಿ ಬದುಕಿ
ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಬಾಪೂಜಿ ವಿದ್ಯಾ ಸಂಸ್ಥೆಯಿಂದ ಈಚೆಗೆ ಅಂತರರಾಷ್ಟೀಯ ಮಹಿಳಾ ದಿನ ಆಚರಿಸಲಾಯಿತು. ಮಹಿಳೆಯರು ಕಟ್ಟುಪಾಡಿನಲ್ಲಿ ಬದುಕದೇ ಬೃಹತ್ ಆಲದ ಮರದಂತೆ ಸ್ವತಂತ್ರರಾಗಿ ಬದುಕಬೇಕು
ಸಹಸ್ರ ಕಳಶ ಕ್ಷೀರಾಭಿಷೇಕ
ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮೊನ್ನೆ ನಡೆದ ಶ್ರೀ ರಾಘವೇಂದ್ರ ಸ್ವಾಮಿಗಳವರ ಸಪ್ತಾಹದಲ್ಲಿ ರಾಯರ ವರ್ಧಂತಿ ಅಂಗವಾಗಿ ಮೃತ್ತಿಕಾ ವೃಂದಾವನಕ್ಕೆ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ಮತ್ತು ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದಂಗಳವರು ಸಹಸ್ರ ಕಳಶ ಕ್ಷೀರಾಭಿಷೇಕ ನೆರವೇರಿಸಿದರು.
ಮಾನವೀಯತೆ ಮೆರೆದ ಡಾ. ರವಿಕುಮಾರ್
ಸಮೀಪದ ಗೋಣಿವಾಡದ ಸೋಮೇಶ್ವರ ಸಂಸ್ಥೆಯ ಬಳಿ ಬಿಸಿಲಿನ ಬೇಗೆಯಿಂದ ಬಳಲಿ ರಸ್ತೆ ಬದಿ ನಿಸ್ತೇಜರಾಗಿದ್ದ ಮಹಿಳೆಗೆ ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ. ಸಂಜೀವಿನಿಯಾಗಿದ್ದಾರೆ
ಪ್ರಧಾನಿ ಮೋದಿ ಸಾಧನೆ ಮನೆ-ಮನೆಗೆ ತಿಳಿಸಿ
ಹರಪನಹಳ್ಳಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಗಳನ್ನು ಬಿಜೆಪಿ ಕಾರ್ಯಕರ್ತರು ಮನೆ–ಮನೆಗೆ ತಿಳಿಸುವ ಮೂಲಕ ಪಕ್ಷಕ್ಕೆ ಬಲ ತುಂಬಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
ರಾಜಕೀಯದಲ್ಲಿ ಒಂದೇ ಪಕ್ಷದಲ್ಲಿ ದೃಢವಾಗಿದ್ದರೆ ಗೌರವ : ಶಾಸಕ ದೇವೇಂದ್ರಪ್ಪ
ಜಗಳೂರು : ರಾಜಕೀಯದಲ್ಲಿ ಪಕ್ಷ ಎಂಬುದು ತಾಯಿಯಿದ್ದಂತೆ. ದೃಢವಾಗಿ ಒಂದೇ ಪಕ್ಷಕ್ಕೆ ಸೀಮಿತವಾಗಿದ್ದರೆ ಕಾರ್ಯಕರ್ತ ರಿಗೆ, ಮುಖಂಡರಿಗೆ ಉನ್ನತ ಸ್ಥಾನ ಸಿಗುವುದು ಖಚಿತ, ಘನತೆ ಗೌರವ ಹೆಚ್ಚಿಸುತ್ತದೆ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.
ಮಲೇಬೆನ್ನೂರಿನಲ್ಲಿ ಫ್ಲೆಕ್ಸ್ ತೆರವು ಗೊಳಿಸಲು ಅಡ್ಡಿ : ರಸ್ತೆ ತಡೆ
ಮಲೇಬೆನ್ನೂರು : ಪಟ್ಟಣದಲ್ಲಿ ಗ್ರಾಮದೇವತೆ ಹಬ್ಬಕ್ಕೆ ಸ್ವಾಗತ ಕೋರಿ ಹಾಕಿದ್ದ ಫೆಕ್ಸ್ಗಳನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ಯುವಕರ ಗುಂಪೊಂದು ರಸ್ತೆ ತಡೆ ನಡೆಸಿದ ಘಟನೆ ಭಾನುವಾರ ನಡೆಯಿತು.
ಎನ್ಯು ಆಸ್ಪತ್ರೆಯಿಂದ ಯಶಸ್ವಿ 10 ಕಿಡ್ನಿ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆ
ಶಿವಮೊಗ್ಗದ ಎನ್ಯು ಆಸ್ಪತ್ರೆಯು 10 ಕಿಡ್ನಿ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆಯಲ್ಲಿ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ. ಪ್ರವೀಣ್ ಮಾಳವದೆ (ಅಸೋಸಿಯೇಟ್ ಮೆಡಿಕಲ್ ಡೈರೆಕ್ಟರ್ ಅಂಡ್ ಟ್ರಾನ್ಸ್ ಪ್ಲಾಂಟ್ ಫಿಸಿಷಿಯನ್) ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೊನ್ನಾಳಿ : ಬಿ.ಎಸ್.ವೈ. ನೇತೃತ್ವದಲ್ಲಿ ಜಿಲ್ಲೆಯ ಸಮಸ್ಯೆ ಶೀಘ್ರ ಇತ್ಯರ್ಥ
ಹೊನ್ನಾಳಿ : ವಿಪಕ್ಷ ನಾಯಕ ಆರ್.ಅಶೋಕ್, ಜಿಲ್ಲಾ ಉಸ್ತುವಾರಿಗಳು ಮತ್ತು ಸಮಾಜದ ಮುಖಂಡರಾದ ಭೈರತಿ ಬಸವರಾಜ್ ಮತ್ತಿತರೆ ಪ್ರಮುಖರು ಈ ಹಿಂದೆ ಪಕ್ಷಕ್ಕಾಗಿ ದುಡಿದಿದ್ದೀರಿ ಮತ್ತೆ ತಾವು ಪಕ್ಷಕ್ಕೆ ಮರಳಬೇಕೆಂದು ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಶುಕ್ರವಾರ ದಾವಣಗೆರೆ ಕಾರ್ಯಕ್ರಮದಲ್ಲಿ ಬಿಜೆಪಿಗೆ ಮರಳಿದ್ದಾಗಿ ಜಿ.ಪಂ. ಮಾಜಿ ಸದಸ್ಯ ಎಂ.ಆರ್.ಮಹೇಶ್ ತಿಳಿಸಿದರು.
ಕುಂಬಾರ ಅಭಿವೃದ್ಧಿ ಮಂಡಳಿ ಉನ್ನತಿಗೆ ಯೋಜನೆ ರೂಪಿಸಲು ಒತ್ತಾಯ
ಹರಿಹರ : ಕುಂಬಾರ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರು ಮತ್ತು ಅನುದಾನ ನೀಡುವ ಮೂಲಕ ಸಮುದಾಯದ ಉನ್ನತಿಗೆ ಕಾರ್ಯಕ್ರಮ ರೂಪಿಸಬೇಕೆಂದು ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಡಾ. ರವಿ ಕುಂಬಾರ್ ಹೇಳಿದರು.
ಲೋಕ ಅದಾಲತ್ನಲ್ಲಿ ಮತ್ತೆ ಒಂದಾದ ಜೋಡಿಗಳು
ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸಂಜೆ 5 ಕ್ಕೆ ಶ್ರೀ ಡಾ. ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದ ಆವ ರಣದಲ್ಲಿ 150ನೇ ಸೈಕಲ್ ವಿತರಣೆ ಅಂಗವಾಗಿ ಇಂದು 50 ಸೈಕ ಲ್ಗಳ ವಿತರಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.
ಇಲ್ಲಿ ಸರಗ ಹರಿಯುವುದಿಲ್ಲ: ಕೋಣದ ಬಲಿ ಇಲ್ಲ, ಅತ್ತಿಗೆರೆಯಲ್ಲಿ ಸಾತ್ವಿಕತೆ ಮೆರೆವ ದುರುಗಮ್ಮನ ಜಾತ್ರೆ
ಮಾರಮ್ಮ, ದುರುಗಮ್ಮನ ಜಾತ್ರೆಗಳೆಂದರೆ, ಕುರಿ, ಕೋಳಿ, ಕೋಣ ಬಲಿಯದೇ ಕಾರುಬಾರು. ಊರ ಗಡಿ ಸುತ್ತಲೂ ಸರಗ ಚೆಲ್ಲಿ ಭಕ್ತಿ ಪ್ರದರ್ಶಿಸುವುದು ಸಾಮಾನ್ಯ. ಇದಕ್ಕೆ ಅಪವಾದ ಎಂಬಂತೆ ತಾಲ್ಲೂಕಿನ ಅತ್ತಿಗೆರೆಯಲ್ಲಿ ಸಾರ್ವಜನಿಕ ಪ್ರಾಣಿ ಬಲಿ ನಡೆಸದೇ, ಮಾಂಸಹಾರದ ಎಡೆ ಹಾಕದೇ ಸಾತ್ವಿಕವಾಗಿ ಹಬ್ಬ ನಡೆಸುವುದು ವಿಶೇಷ.
ಮಾಯಕೊಂಡ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ 60 ಕೋಟಿ ರೂ. ಅನುದಾನ ಮಂಜೂರು
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹಾಳಾದ ರಸ್ತೆಗಳ ಅಭಿವೃದ್ಧಿ ಮತ್ತು ಶಾಲೆ, ಕಾಲೇಜು, ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಅಂದಾಜು 60 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಉಕ್ಕಡಗಾತ್ರಿಯಲ್ಲಿ ವೈಭವದ ಬೆಳ್ಳಿ ರಥೋತ್ಸವ, ಪಾಲಿಕೋತ್ಸವ
ಮಲೇಬೆನ್ನೂರು : ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ನಡೆಯುತ್ತಿರುವ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಜಾತ್ರೆ ಅಂಗವಾಗಿ ಶನಿವಾರ ಬೆಳಗ್ಗೆ ಅಜ್ಜಯ್ಯನ ಬೆಳ್ಳಿ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಶಿಕ್ಷಣದ ಜೊತೆಗೆ ಆರೋಗ್ಯವೂ ಮುಖ್ಯ
ನಗರದ ಆರ್.ಜಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಎನ್.ಎಸ್.ಎಸ್ ಘಟಕ-1, ವಾಸನ್ ಕಣ್ಣಿನ ಆಸ್ಪತ್ರೆ, ಡಾ. ಜಯೇಶ್ ದಂತ ವೈದ್ಯರು, ಚರ್ಮ ರೋಗ ತಜ್ಞ ಡಾ. ಭಕ್ತವತ್ಸಲ ಅವರುಗಳ ಸಹಯೋಗದಲ್ಲಿ ದಂತ, ಚರ್ಮ, ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಆರ್.ಜಿ. ಕಾಲೇಜಿನಲ್ಲಿ ಇಂದು ನಡೆಸಲಾಯಿತು.
ಲೋಕಸಭೆ ಗೆಲುವಿಗೆ ಕಾರ್ಯಕರ್ತರು ಸಂಘಟಿತರಾಗಬೇಕು
ರಾಣೇಬೆನ್ನೂರು : ಕಾರ್ಯ ಕರ್ತರು ಸಂಘಟಿತರಾಗಿ ಲೋಕಸಭೆ ಚುನಾವಣೆ ಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಭಾರೀ ಅಂತರದ ಗೆಲುವು ಸಾಧಿಸುವುದರೊಂದಿಗೆ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಅರುಣಕುಮಾರ್ ಪೂಜಾರ್ ಮನವಿ ಮಾಡಿದರು.
ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವಕ್ಕೆ ಸಂಭ್ರಮದ ತೆರೆ
ಗುರು ರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿಯ ಸಂಸ್ಮರಣೆಗಾಗಿ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ 31 ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಭಾನುವಾರ ಸಂಭ್ರಮದ ತೆರೆ ಕಂಡಿತು.
ಮಲೇಬೆನ್ನೂರಿನಲ್ಲಿ 19ರಂದು ಅಮ್ಮನ ಹಬ್ಬ
ಮಲೇಬೆನ್ನೂರು : ಪಟ್ಟಣದ ಗ್ರಾಮದೇವತೆಗಳಾದ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ ಮತ್ತು ಹಟ್ಟಿ ದುರ್ಗಾಂಬಿಕೆ ಅಮ್ಮನವರ ಜಾತ್ರಾ ಮಹೋತ್ಸವವನ್ನು (ಅಮ್ಮನ ಹಬ್ಬ) ನಾಳೆ ದಿನಾಂಕ 16 ರಿಂದ 22 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿಯ ಭರಮಳ್ಳಿ ಭರಮಗೌಡ್ರು ತಿಳಿಸಿದರು.
ಪಾನಿಪೂರಿ ಸೇವಿಸಿ ಮಕ್ಕಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು
ಮಲೇಬೆನ್ನೂರು : ಪಾನಿಪೂರಿ ಸೇವನೆ ಮಾಡಿದ್ದರು ಎನ್ನಲಾದ 19 ಮಕ್ಕಳು ವಾಂತಿ-ಬೇಧಿಯಿಂದ ಅಸ್ವಸ್ಥಗೊಂಡ ಘಟನೆ ಗುರುವಾರ ತಡರಾತ್ರಿ ಮಲೇಬೆನ್ನೂರಿನಲ್ಲಿ ನಡೆದಿದೆ.