16ನೇ ವಾರ್ಡ್‌ನಲ್ಲಿ ಬಿಜೆಪಿ ಗೆಲುವಿಗೆ ಸಭೆ

16ನೇ ವಾರ್ಡ್‌ನಲ್ಲಿ ಬಿಜೆಪಿ ಗೆಲುವಿಗೆ ಸಭೆ

ದಾವಣಗೆರೆ, ಏ. 26 – ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನಗರ ಪಾಲಿಕೆಯ 16ನೇ ವಾರ್ಡ್‌ನಲ್ಲಿ ಬೂತ್ ಪ್ರಮುಖರ ಸಭೆ ನಡೆಸಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ  ಪರವಾಗಿ ಮನೆ – ಮನೆಗೆ ತೆರಳಿ ನರೇಂದ್ರ ಮೋದಿ ಜೀ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಸಾಧನೆಗಳ ಕರಪತ್ರ ನೀಡಿ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ವಾರ್ಡ್ ಮುಖಂಡ – ವಕೀಲರ ಸಹಕಾರ ಸಂಘದ ಅಧ್ಯಕ್ಷ ಹೆಚ್‌.ದಿವಾಕರ್, ಕಾಂತರಾಜ್, ಗೌರಮ್ಮ ಪಾಟೀಲ್, ಬಿಜೆಪಿ ಮುಖಂಡ ರಾಜು ತೋಟಪ್ಪನವರ್, ಎನ್.ಹೆಚ್. ಹಾಲೇಶ್, ವಾಟರ್ ಮಂಜುನಾಥ್, ಯುವ ಮೋರ್ಚಾದ ಟಿ.ಎನ್.ಕಿರಣ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!