ಹನುಮ ಜನ್ಮೋತ್ಸವ: ನಗರದಲ್ಲಿ ಇಂದು ಶೋಭಾಯಾತ್ರೆ

ಹನುಮ ಜನ್ಮೋತ್ಸವ: ನಗರದಲ್ಲಿ ಇಂದು ಶೋಭಾಯಾತ್ರೆ

ದಾವಣಗೆರೆ, ಏ.26-ಶ್ರೀ ಹನುಮ ಜನ್ಮೋತ್ಸವ ಸಮಿತಿ ವತಿಯಿಂದ ಶ್ರೀ ಹನುಮ ಜನ್ಮೋತ್ಸವ ಪ್ರಯುಕ್ತ 3ನೇ ವರ್ಷದ ಶೋಭಾಯಾತ್ರೆಯನ್ನು ನಾಳೆ ದಿನಾಂಕ 27ರ ಶನಿವಾರ ಹಮ್ಮಿಕೊಳ್ಳಲಾಗಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಮಿತಿಯ ಸದಸ್ಯ ಎಂ.ಶ್ರೀಕಾಂತ್, ಅಂದು ಸಂಜೆ 4.30ರಿಂದ ನಿಜಲಿಂಗಪ್ಪ ಬಡಾವಣೆಯ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಶೋಭಾ ಯಾತ್ರೆ ಆರಂಭವಾಗಲಿದ್ದು, ಪಿ.ಜೆ.  ಬಡಾವಣೆಯ ಖಮಿತ್ಕರ್ ಶ್ರೀರಾಮ ಮಂದಿರದಲ್ಲಿ ಮುಕ್ತಾಯಗೊ ಳ್ಳಲಿದೆ ಎಂದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸತ್ಯಪ್ರಕಾಶ್ ಶೋಭಾಯಾತ್ರೆಗೆ ಚಾಲನೆ ನೀಡ ಲಿದ್ದು, ನಂತರ ನಡೆಯುವ ಸಭಾ ಕಾರ್ಯಕ್ರಮ ದಲ್ಲಿ ಯರಗುಂಟೆಯ ಶ್ರೀ ಪರಮೇಶ್ವರ ಮಹಾ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವರಾಜ್ ಕೆ.ಎಸ್., ಮಲ್ಲೇಶ್ ಎನ್. ಪೂಜಾರ್ ಇದ್ದರು.

error: Content is protected !!