ಸಾಣೇಹಳ್ಳಿಯಲ್ಲಿ ನಾಳೆ ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವ

ಸಾಣೇಹಳ್ಳಿಯಲ್ಲಿ ನಾಳೆ  ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವ

ಸಾಣೇಹಳ್ಳಿಯಲ್ಲಿ ನಾಳೆ ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವ - Janathavaniಸಾಣೇಹಳ್ಳಿ, ಏ. 26-  ಇಲ್ಲಿನ ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವ ಸಮಿತಿ ಯವರು ಪ್ರತಿವರ್ಷದಂತೆ ನಾಡಿದ್ದು ದಿನಾಂಕ 28 ರಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ರಥೋತ್ಸವವನ್ನು ಆಯೋಜಿಸಿದ್ದಾರೆ. 

ಸಾಣೇಹಳ್ಳಿ ಪುಟ್ಟ ಗ್ರಾಮವಾದರೂ ಇಲ್ಲಿ ವರ್ಷದುದ್ದಕ್ಕೂ ಸಾಹಿತ್ಯ, ಸಂಗೀತ, ಕಲೆ, ಕೃಷಿ, ಧರ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯು ತ್ತಿರುತ್ತವೆ. ಸಾಣೇಹಳ್ಳಿಗೆ ಒಂದು ಘನತೆ ಬರುವಂತೆ ಮಾಡಿದವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಅವರು 1977ರಲ್ಲಿ ಸಾಣೇ ಹಳ್ಳಿ ಮಠಕ್ಕೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳನ್ನು ಪಟ್ಟಾಧ್ಯಕ್ಷರನ್ನಾಗಿ ಮಾಡಿದರು.

ಕುಗ್ರಾಮವಾಗಿ, ಅನಾಮಧೇಯ ಹಳ್ಳಿಯಾ ಗಿದ್ದ ಸಾಣೇಹಳ್ಳಿ ಅಂದಿನಿಂದಲೇ ಚೈತನ್ಯ ಪಡೆದು ಕೊಂಡು ಸಾಂಸ್ಕೃತಿಕ ಹಳ್ಳಿಯಾಗಿ ಹೆಸರುವಾಸಿ ಯಾಗಿದೆ. ತಮ್ಮ ಬದುಕಿಗೆ ಬೆಳಕು ನೀಡಿದ ಗುರುವಿನ ಹೆಸರಿನಲ್ಲಿ ರಥೋತ್ಸವ ಮಾಡಬೇಕು ಎನ್ನುವ ಆಶಯವನ್ನು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಗ್ರಾಮಸ್ಥರೆದುರು ವ್ಯಕ್ತಪಡಿಸಿದ್ದರು. `ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ’ ಎನ್ನುವಂತಾಯ್ತು. ಅವರ ಆಶಯವನ್ನು ಗ್ರಾಮಸ್ಥರು ನೆರವೇರಿಸಿದರು. ಸುಂದರವಾದ ರಥ ನಿರ್ಮಾಣವಾಯ್ತು. ಅದಕ್ಕೆ `ಶ್ರೀ ಶಿವಕುಮಾರ ರಥ’ ಎಂದೇ ನಾಮಕರಣ ಮಾಡಲಾಯಿತು.

ಕಳೆದ ಹತ್ತಾರು ವರ್ಷಗಳಿಂದ ಈ ರಥೋತ್ಸವ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಜನ್ಮ ತಾಳಿದ ದಿನ ಏಪ್ರಿಲ್ 28ರಂದೇ ನಡೆಯು ವುದು. ಪ್ರತಿವರ್ಷ ತಾಲ್ಲೂಕಿನ ಬೇರೆ ಬೇರೆ ಗ್ರಾಮ ಗಳ ಭಕ್ತರು ರಥೋತ್ಸವದ ಜವಾಬ್ದಾರಿ ನಿರ್ವಹಿ ಸುವರು. ರಥೋತ್ಸದ ಸಂದರ್ಭದಲ್ಲಿ ಪುಸ್ತಕಗಳ ಹರಾಜು ನಡೆಯುವುದು. ನಂತರ ಗುರುಗಳಿಗೆ ಪ್ರಿಯ ವಾದ ವಚನ ಗೀತೆ, ನಾಟಕದ ಮೂಲಕ ಗುರುಗಳ ಸ್ಮರಣೆ ಅರ್ಥಪೂರ್ಣವಾಗಿ ನಡೆಯುವುದು.  

ನಾಡಿದ್ದು ದಿನಾಂಕ 28ರ ಸಂಜೆ 4 ಗಂಟೆಗೆ ರಥೋತ್ಸವ   ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಮ್ಮುಖದಲ್ಲಿ ನಡೆಯುವುದು. ನಂತರ ಸಾರ್ವಜನಿಕ ಸಭೆ ಸಂಜೆ 5.30ಕ್ಕೆ ನಡೆಯಲಿದೆ. ಹೊಳಲ್ಕೆರೆಯ ಮಾಜಿ ಶಾಸಕ ಪಿ. ರಮೇಶ್ ಗುರುವಂದನಾ ನುಡಿಗಳನ್ನಾಡುವರು. ಶಿವಸಂಚಾರ ಕಲಾವಿದರು ವಚನ ಗೀತೆಗಳನ್ನು ಹಾಡುವರು. ಗಾನ ಸಿದ್ಧಗಂಗಾ ಸಂಗೀತ ವಿದ್ಯಾಲಯ ಬೆಂಗಳೂರಿನ ಶ್ರೀಮತಿ ಗೀತಾ ಭತ್ತದ್ ಹಾಗೂ ತಂಡದವರಿಂದ ಸಂಗೀತ ಸುಧೆ ಕಾರ್ಯಕ್ರಮ ಏರ್ಪಡಿಸಲಾಗಿದೆ. 

ಶ್ರೀ ಶಿವಕುಮಾರ ಕಲಾ ಸಂಘದ ಹಿರಿಯ ಕಲಾವಿದರಿಂದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ರಚಿಸಿದ, ವೈ. ಡಿ. ಬದಾಮಿ ನಿರ್ದೇಶನದ `ಮರಣವೇ ಮಹಾನವಮಿ’ ನಾಟಕ ಪ್ರದರ್ಶನಗೊಳ್ಳಲಿದೆ.

error: Content is protected !!