ಹಾಸ್ಟೆಲ್ ವಿದ್ಯಾರ್ಥಿನಿಯರನ್ನು ಚುಡಾಯಿಸಿದವರ ಮೇಲೆ ಕ್ರಮ

ರಾಣೇಬೆನ್ನೂರು, ಏ. 26 – ಕಾಲೇಜಿನಿಂದ ದೇವರಾಜ ಅರಸ್‌ ಮೆಟ್ರಿಕ್ ಪೂರ್ವ ಮತ್ತು ನಂತರದ ಹಾಸ್ಟೆಲ್‌ಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು  ಚುಡಾಯಿಸುತ್ತಿದ್ದ ಉಮೇಶ ಅಜ್ಜೋಡಿಮಠ ಮತ್ತು ಕಿರಣ ಡೊಂಬರ ಎನ್ನುವ ಇಬ್ಬರು ಯುವಕರನ್ನು ದೂರು ಬಂದ 24 ಗಂಟೆ ಒಳಗಾಗಿ ಪತ್ತೆ ಹಚ್ಚಿ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದ ನಗರ ಎಸ್.ಐ .ಗಡ್ಡೆಪ್ಪ ಗುಂಜಟಗಿ ತಿಳಿಸಿದ್ದಾರೆ.

error: Content is protected !!