ವಾರ ಭವಿಷ್ಯ – ದಿನಾಂಕ : 04.06.2023 ರಿಂದ 10.06.2023

ವಾರ ಭವಿಷ್ಯ – ದಿನಾಂಕ : 04.06.2023 ರಿಂದ 10.06.2023

ಮೇಷ (ಅಶ್ವಿನಿ, ಭರಣಿ, ಕೃತ್ತಿಕಾ)
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

ವೃತ್ತಿ ಅಥವಾ ಕೆಲಸದ ನಿಮಿತ್ತ ದೂರದ ಊರುಗಳಿಗೆ ಪ್ರಯಾಣ ಮಾಡಲೇ ಬೇಕಾದ ಅನಿವಾರ್ಯತೆಯುಂಟಾಗಲಿದೆ. ಅರ್ಚಕ ಅಥವಾ ವೈದಿಕ ವೃತ್ತಿಯಲ್ಲಿರು ವವರಿಗೆ ಹೆಚ್ಚಿನ ಸಂಪಾದನೆಯಾಗಲಿದೆ. ಪ್ರಾಪ್ತ ವಯಸ್ಕರಾದ ಯುವಕರ ಬದುಕಿನ ಬಗ್ಗೆ ಚಿಂತೆಯಾಗಲಿದೆ. ಸರ್ಕಾರದಿಂದ ಬರಬೇಕಾಗಿರುವ ಧನ ಸಹಾಯವು ವಸ್ತುಗಳ ರೂಪದಲ್ಲಿ ದೊರೆಯಲಿದೆ.ಆರಕ್ಷರ ಕರ್ತವ್ಯದಲ್ಲಿ ಉಂಟಾಗ ಬಹುದಾದ ಲೋಪದೋಷಗಳಿಂದಾಗಿ ಮೇಲಾಧಿಕಾರಿಗಳಿಂದ ನಿಂದಾವಾಕ್ಯಗಳನ್ನು ಕೇಳಬೇಕಾದೀತು. ಭಾನು-ಸೋಮ-ಮಂಗಳ-ಶುಭ ದಿನಗಳು.

ವೃಷಭ (ಕೃತ್ತಿಕಾ, 2,3,4, ರೋಹಿಣಿ, ಮೃಗ 1,2)
(ಇ.ಉ.ಎ.ಒ.ವ.ವಿ.ವು.ವೆ.ವೋ)

ಕಟ್ಟಡಗಳ ನಿರ್ಮಾಣ ಕೆಲಸವನ್ನು ವಹಿಸಿಕೊಂಡಿರುವ ಗುತ್ತಿಗೆ ದಾರರು, ಹೇಳಿದ ಸಮಯದಲ್ಲಿ ಮಾಡಿ ಮುಗಿಸುವುದು ಮೇಲು. ಇಲ್ಲವಾದಲ್ಲಿ ಭಾರೀ ದಂಡವನ್ನು ತೆರಬೇಕಾದೀತು.ಆದಾಯದಲ್ಲಿ ಹೆಚ್ಚಳ ಕಂಡು ಬರಲಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಪದೋನ್ನತಿಯಾಗಲಿದ್ದು ಜೊತೆಗೆ ವೇತನದಲ್ಲಿ ಹೆಚ್ಚಳವಾಗಲಿದೆ. ಮಡದಿ-ಮಕ್ಕಳೊಂದಿಗೆ ನೆಮ್ಮದಿಯಾಗಿ ಕಾಲಕಳೆ ಯುವ ಯೋಗ ನಿಮ್ಮದಾಗಲಿದೆ. ವಿದ್ಯಾರ್ಥಿಗಳು ತುಸು ಉಡಾಫೆ ತೋರಿದರೂ ಅಧ್ಯಯನದಲ್ಲಿ ಹಿಂದೆ ಬೀಳುವ ಸಂಭವವಿದೆ. ಗುರು-ಶುಕ್ರ-ಶನಿ-ಶುಭ ದಿನಗಳು.

ಮಿಥುನ (3,4, ಆರಿದ್ರಾ, ಪುನರ್ವಸು 1,2,3
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ಮಾತಿನ ಮೋಡಿಯಿಂದ ಜನರನ್ನು ನಂಬಿಸುವ ಕಲೆ ನಿಮಗೆ ಕರಗತವಾಗಿದ್ದು, ಎಲ್ಲರನ್ನೂ ಆಕರ್ಷಿಸುವಿರಿ. ಆದರೆ ಇದು ಸದಾಕಾಲ ನಡೆಯು ವುದಿಲ್ಲ ಎಂಬುದು ನೆನಪಿರಲಿ. ಸೋದರಿಯೊಂದಿಗೆ ಆಸ್ತಿ ನಿಮಿತ್ತ ಉಂಟಾಗಬಹು ದಾದ ಮನಸ್ತಾಪವನ್ನು ಮಾತುಕತೆ ಮುಖಾಂತರ ಬಗೆಹರಿಸಿಕೊಳ್ಳಿ. ಉನ್ನತಾಧ್ಯ ಯನಕ್ಕೆ ಉತ್ತಮ ವಿಷಯಗಳನ್ನು ಸಂಶೋಧಕರು ಆಯ್ಕೆ ಮಾಡುವುದು ಉತ್ತಮ. ರಾಜಕಾರಣಿಗಳಿಗೆ ಪಕ್ಷದಲ್ಲಿ ಸ್ಥಾನಮಾನ ಹೆಚ್ಚಲಿದೆ. ಆದಾಯ ಸಾಧಾರಣ ವಾಗಿದ್ದು, ಉಳಿತಾಯ ಕಷ್ಟವಾಗಲಿದೆ. ಭಾನು-ಬುಧ-ಗುರು-ಶುಭ ದಿನಗಳು.

ಕರ್ಕಾಟಕ (ಪುನ 4, ಪುಷ್ಯ, ಆಶ್ಲೇಷ)
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ಮನೆಯ ಸದಸ್ಯರು ಮಿತಿಮೀರಿ ಮಾಡುವ ಖರ್ಚುಗಳಿಂದಾಗಿ ಆದಾಯ ಉತ್ತಮವಾಗಿದ್ದರೂ ಸಾಲದೇ ಹೋಗಬಹುದು. ಆಸ್ತಿ ಖರೀದಿ ವಿಚಾರದಲ್ಲಿ ಅವಸರಬೇಡ. ಮಕ್ಕಳ ವಿಚಾರದಲ್ಲಿ ಅನಾವಶ್ಯಕ ಚಿಂತೆಬೇಡ. ಸರ್ಕಾರಿ ಉನ್ನತಾಧಿಕಾರಿಗಳು ಆಡಳಿತಾತ್ಮಕವಾಗಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳದೇ ವಿಧಿಯಿಲ್ಲ. ದೇವಾಲಯದ ನಿರ್ಮಾಣ ಕಾರ್ಯಕ್ಕೆ ನಿಮ್ಮ ದೇಣಿಗೆ ಸಲ್ಲಲಿದೆ. ಸಾಮಾಜಿಕವಾಗಿ ಸ್ಥಾನಮಾನ ಹೆಚ್ಚಿಸಿಕೊಳ್ಳುವ ನಿಮ್ಮ ಪ್ರಯತ್ನಕ್ಕೆ ಯಶಸ್ಸು ದೊರೆಯಲಿದೆ. ಸೋಮ-ಗುರು-ಶುಕ್ರ-ಶುಭ ದಿನಗಳು.

ಸಿಂಹ ( ಮಘ, ಪುಬ್ಬ, ಉತ್ತರ 1)
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ನಿಮ್ಮ ಖಾಸಗಿ ಬದುಕಿನಲ್ಲಿ ಮಹತ್ತರ ಬದಲಾವಣೆಯಾಗಲಿದ್ದು ಇದರಿಂದ ಬಹುದಿನದ ಬಯಕೆಗಳಲ್ಲಿ ಬಹುಪಾಲು ನೆರವೇರಲಿವೆ. ಗಹನವಾದ ವಿಚಾರಗಳಲ್ಲಿ ನೀವೇ ಸ್ವಂತ ನಿರ್ಧಾರ ಕೈಗೊಳ್ಳದೇ, ಅನುಭವಿಗಳಾದ ಹಿರಿಯರ ಸಲಹೆಗಳನ್ನು ಪಡೆಯುವುದು ಮೇಲು. ಸಿನಿಮಾ ಕಲಾವಿದರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿದ್ದು, ಸಂಪಾದನೆ ಹೆಚ್ಚಲಿದೆ. ಸಂಬಂಧಿಗಳೊಂದಿಗೆ ಅನುಬಂಧವು ಗಟ್ಟಿಯಾಗಿರಲಿ. ಸಂಪಾದನೆ ಖರ್ಚಿಗೆ ಅನುಗುಣವಾಗಿರು ವುದರಿಂದ, ಉಳಿತಾಯದ ಚಿಂತೆ ಬೇಡ. ಗುರುಗಳ ಸೇವೆ ಮಾಡಿ. ಭಾನು-ಮಂಗಳ-ಗುರು-ಶುಭ ದಿನಗಳು.

ಕನ್ಯಾ (ಉತ್ತರಾ 2,3,4, ಹಸ್ತಾ, ಚಿತ್ತಾ 1,2)
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ಬೇರೆಯವರ ಮಾತಿನಂತೆ ನಡೆದುಕೊಳ್ಳುತ್ತಿರುವ ಯುವಕರನ್ನು ಹಿತವಾದ ಮಾತುಗಳಿಂದ ಸರಿದಾರಿಗೆ ತರುವಲ್ಲಿ ವಿಫಲರಾಗುವಿರಿ. ಮಡದಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ, ಆದರೂ ಸೂಕ್ತ ವೈದ್ಯರ ಸಂಪರ್ಕದಲ್ಲಿರುವುದು ಮೇಲು. ವಿದ್ಯಾವಂತನಾದ ಮಗನಿಗೆ ಉತ್ತಮ ವೇತನದ ಕೆಲಸ ಖಾಸಗಿ ಕಂಪನಿಯೊಂದರಲ್ಲಿ ದೊರೆಯಲಿದೆ. ಅವಿವಾಹಿತರ ವಿವಾಹದ ವಿಚಾರವು ಕಾಣದ ಕೈಯೊಂದರ ಕರಾಮತ್ತಿನಿಂದಾಗಿ ಅನಿರ್ದಿಷ್ಟಕಾಲ ಮುಂದೆ ಹೋಗಬಹುದು. ಮಂಗಳ-ಬುಧ-ಶುಕ್ರ-ಶುಭ ದಿನಗಳು.

ತುಲಾ (ಚಿತ್ತಾ 3,4, ಸ್ವಾತಿ, ವಿಶಾಖ 1,2,3)
(ರ.ರಿ.ರು.ರೆ.ರೊ.ತ.ತಿ.ತು.ತೆ.)

ಭಾರೀ ಕೈಗಾರಿಕೋದ್ಯಮಿಗಳು ಕಂಪನಿಯ ಪಾಲುದಾರ ರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯುವುದು ಉತ್ತಮ. ಮಕ್ಕಳ ವಿದ್ಯಾಭ್ಯಾಸದಲ್ಲಿ ತುಸು ಹಿನ್ನಡೆ ಕಂಡುಬರಲಿದೆ. ಕೊಟ್ಟ ಸಾಲವನ್ನು ಆದಷ್ಟುಬೇಗ ಮರಳಿ ಪಡೆಯುವುದು ಮೇಲು. ಇಲ್ಲವಾದಲ್ಲಿ ಪಂಗನಾಮ ಬಿದ್ದೀತು. ಸಮಾಜ ಸೇವೆಯಲ್ಲಿರುವವರು ಅದಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳನ್ನು ಸರಿಯಾಗಿ ಮತ್ತು ಕ್ರಮಬದ್ಧವಾಗಿ ಕಾಪಾಡುವುದು ಉತ್ತಮ. ಸಂತಾನಾಪೇಕ್ಷಿಗಳಿಗೆ ಶುಭ ಸಮಾ ಚಾರವೊಂದು ಇಷ್ಟರಲ್ಲೇ ಕೇಳಿಬರಲಿದೆ. ಸೋಮ-ಶುಕ್ರ-ಶನಿ-ಶುಭ ದಿನಗಳು.

ವೃಶ್ಚಿಕ (ವಿಶಾಖ 4, ಅನೂ, ಜೇಷ್ಠ)
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)

ರಾಜಕೀಯ ವ್ಯಕ್ತಿಗಳು ತಮ್ಮ ಹಿಂದಿನ ವೈಫಲ್ಯಗಳನ್ನು ಮರೆತು ಮುನ್ನಡೆಯುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರವಾಗಲಿದೆ. ಸಂಘ-ಸಂಸ್ಥೆಗಳಲ್ಲಿ ತೊಡಗಿಕೊಂಡವರಿಗೆ ಉನ್ನತ ಹುದ್ದೆ ದೊರೆಯಲಿದೆ. ಎಲ್ಲರನ್ನೂ ಮತ್ತು ಎಲ್ಲವನ್ನೂ ಸಂಶಯದ ದೃಷ್ಟಿಯಿಂದ ನೋಡುವುದನ್ನು ಮೊದಲು ಬಿಡಿ. ಹಿರಿಯರೊಂದಿಗಿದ್ದ ಮನಸ್ತಾಪ ದೂರವಾಗಿ ಅವರನ್ನು ಸನ್ಮಾನಿಸುವಿರಿ. ವೃತ್ತಿ ಹಾಗೂ ಪ್ರವೃತ್ತಿ ಎರಡರಿಂದಲೂ ಸಂಪಾದನೆ ಹೆಚ್ಚಲಿದೆ. ಅಧ್ಯಾಪಕ ವರ್ಗದವರಿಗೆ ಸರ್ಕಾರದಿಂದ ಸನ್ಮಾನವಾಗಲಿದೆ. ಭಾನು-ಮಂಗಳ-ಬುಧ-ಶುಭದಿನಗಳು.

ಧನಸ್ಸು (ಮೂಲ, ಪೂರ್ವಾಷಾಢ, ಉತ್ತರಾಷಾಢ)
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ಗೃಹಿಣಿಯರು ಮನೆಯ ಎಲ್ಲಾ ಸದಸ್ಯರನ್ನು ಅನುಸರಿಸುತ್ತಾ, ಹಿರಿಯರ ಮೆಚ್ಚಿಗೆ ಪಡೆಯುವರು. ವೈಯಕ್ತಿಕ ಗುಟ್ಟನ್ನು ಅನಾಪ್ತರೊಂದಿಗೆ ಹಂಚಿಕೊಳ್ಳ ಬೇಡಿ. ತರಕಾರಿ  ಬೆಳೆಗಾರರಿಗೆ  ಉತ್ತಮವಲ್ಲದಿದ್ದರೂ, ಸಮಾಧಾನಕರ ಲಾಭ ದೊರೆಯಲಿದೆ. ಉದ್ಯಮಿಗಳಿಗೆ ಬಹಳ ಕಾಲದಿಂದ ನಿರೀಕ್ಷಿತ ಯೋಜನೆಗಳಿಗೆ ಸರ್ಕಾರದಿಂದ ಒಪ್ಪಿಗೆ ದೊರೆಯಲಿದೆ. ಯಾರಿಂದಲೇ ಆಗಲಿ ಅತಿಯಾದ ನಿರೀಕ್ಷೆಬೇಡ. ಆತ್ಮವಿಶ್ವಾಸದೊಂದಿಗೆ ಮುನ್ನಡೆಯಿರಿ. ಗುರು ಚರಿತ್ರೆ ಪಠಿಸಿ. ಬುಧ-ಗುರು-ಶನಿ-ಶುಭ ದಿನಗಳು.

ಮಕರ (ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2)
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ಆದಾಯ ತೆರಿಗೆ ಅಧಿಕಾರಿಗಳಿಗೆ ಮಂತ್ರಿಮಹೋದಯರಿಂದ ಬಲವತ್ತರವಾದ ಒತ್ತಡ ಬರಲಿದೆ. ಮೊದಲ ದರ್ಜೆ ಸಿವಿಲ್ ಗುತ್ತಿಗೆದಾರರಿಗೆ ಬಾಕಿ ಹಣ ಕೈಸೇರುವುದು ಮಾತ್ರವಲ್ಲದೇ, ಹಲವು ಉತ್ತಮ ಅವಕಾಶಗಳು ದೊರೆಯಲಿವೆ. ಗುಪ್ತಚರ ಇಲಾಖಾ ನೌಕರರು ಮಹತ್ತರವಾದ ಪ್ರಸಂಗವನ್ನು ಭೇದಿಸಿ, ಸರ್ಕಾರದಿಂದ ಮಾತ್ರವಲ್ಲದೇ ಸಾರ್ವಜನಿಕರಿಂದ ಗೌರವ ಪಡೆಯುವರು. ಸಂಶೋಧನಾ ರಂಗದಲ್ಲಿ ತೊಡಗಿಕೊಂಡವರು ತಮ್ಮ ಸಂಶೋಧನಾ ವಿಷಯದ ಅರಿವಿರುವುದು ಬಲುಮುಖ್ಯ. ಸೋಮ-ಶುಕ್ರ-ಶನಿ-ಶುಭ ದಿನಗಳು.

ಕುಂಭ (ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3)
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)

ಆಸ್ತಿ ಅಥವಾ ಹೊಸಮನೆ ಕಟ್ಟುವ ಮೊದಲು ಅದಕ್ಕೆ ಬೇಕಾಗಿರುವ ಹಣಕಾಸಿನ ವ್ಯವಸ್ಥೆಯನ್ನು ಮೊದಲೇ ಮಾಡಿಕೊಳ್ಳುವುದು ಮೇಲು. ಇಲ್ಲವಾದಲ್ಲಿ ಕೊಟ್ಟ ಮುಂಗಡ ಹಣಕ್ಕೆ ಸಂಚಕಾರ ಬರಬಹುದು. ಶಾಸ್ತ್ರೀಯ ವಿದ್ವಾಂಸರಿಗೆ ಮಠಮಾನ್ಯಗಳಿಂದ ಗೌರವ ಸಂದಲಿದೆ. ಕೆಲವೊಮ್ಮೆ ಯುವಕರಾಡುವ ಮಾತುಗಳು ಅತಿಯಾಗಿ, ಯಾರೂ ನಂಬದೇ ಹೊಗಬಹುದು.ರೈತಾಪಿ ಜನರಿಗೆ ಬಿಡುವಿಲ್ಲದ ಕೆಲಸವಾಗಲಿದೆ. ಹೈನುಗಾರಿಕೆ ಹೆಚ್ಚಿನ ಲಾಭವನ್ನು ತರದೇ ಹೋದರೂ ನಷ್ಟವನ್ನಂತೂ ಖಂಡಿತಾ ಮಾಡುವುದಿಲ್ಲ. ಸೋಮ-ಗುರು-ಶನಿ-ಶುಭ ದಿನಗಳು.

ಮೀನ (ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ)
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.) 

ಖಾಸಗಿ ಕಂಪನಿಯಲ್ಲಿ ದುಡಿಯುವ ಮಹಿಳೆಯರಿಗೆ ಮುಂಬಡ್ತಿಯೊಂದಿಗೆ ವೇತನದಲ್ಲಿ ಹೆಚ್ಚಳವಾದರೂ, ಹೆಚ್ಚಿನ ಜವಾಬ್ದಾರಿಯನ್ನು ಹೊರುವುದು ಅನಿವಾರ್ಯವಾಗಲಿದೆ. ಈ ಹಿಂದೆ ಶಿಥಿಲವಾಗಿದ್ದ ಹಳೆ ಮನೆಯನ್ನು ನವೀಕರಿಸಲು ಹಿರಿಯರು ಈಗ ಒಪ್ಪಿಗೆ ಕೊಡುವರು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿಯೇ ಇರುವುದರಿಂದ ದೈನಂದಿನ ಜೀವನದ ಬಗ್ಗೆ ಚಿಂತೆಬೇಡ. ದಿನಸಿ ಹಾಗೂ ಮಸಾಲೆ ಸಾಮಾನುಗಳ ಸಗಟು ಮಾರಾಟಗಾರರಿಗೆ ಉತ್ತಮ ವಹಿವಾಟು ನಡೆಯಲಿದೆ. ಹೊಸ ವಾಹನ ಖರೀದಿಯನ್ನು ಎಚ್ಚರದಿಂದ ಮಾಡಿ. ಭಾನು-ಬುಧ-ಗುರು-ಶುಭ ದಿನಗಳು.


ಜಯತೀರ್ಥಾಚಾರ್ ವಡೇರ್
ದಾವಣಗೆರೆ.
[email protected]