ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ನಡೆಸುವ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ಪ್ರಕರಣಗಳ ವಿಲೇವಾರಿಗೆ ನೀಡಿದ ಸಹಕಾರವನ್ನು ಜಿಲ್ಲಾ ವಕೀಲರ ಸಂಘ ತಮಗೂ ನೀಡಬೇಕೆಂದು ಶ್ರೀಮತಿ ವೇಲಾ ದಾಮೋದರ ಖೋಡೆ ಅವರು ಮನವಿ ಮಾಡಿದರು.

ಎಂಸಿಸಿ `ಬಿ’ ಬ್ಲಾಕನ್ನು ಮಾದರಿ ವಾರ್ಡನ್ನಾಗಿಸಿದ ಗಡಿಗುಡಾಳ್ ಮಂಜುನಾಥ್
ಜನಸೇವೆಯ ಜನಪ್ರತಿನಿಧಿ ಪಡೆದ ನಾವೇ ಧನ್ಯರು. ಎಂಸಿಸಿ `ಬಿ' ಬ್ಲಾಕನ್ನೂ ಮಾದರಿ ವಾರ್ಡ್ ಆಗಿಸುವಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಅವರ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಲಿಂಗಾರೆಡ್ಡಿ ಹೇಳಿದರು.

ಇಂದಿನಿಂದ `ಕೌಶಲ್ಯ’ ಉಚಿತ ಉದ್ಯೋಗಾಧಾರಿತ ತರಬೇತಿ ಆಯ್ಕೆ ಪ್ರಕ್ರಿಯೆ
'ಕೌಶಲ್ಯ' ಕ್ಯಾಂಪಸ್ನಿಂದ ಕಾರ್ಪೊರೇಟ್ ವರೆಗೂ ಎನ್ನುವ ಧ್ಯೇಯದೊಂದಿಗೆ ಉಚಿತ ಉದ್ಯೋಗಾಧಾರಿತ 60 ದಿನಗಳ ತರಬೇತಿ ಶಿಬಿರವನ್ನು ನಗರದ ಬಿಐಇಟಿ ಕಾಲೇಜು ಆವರಣದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ

ಬ್ಯಾಂಕ್ ದರೋಡೆಗೆ ಬಂದಿದ್ದವರಿಗೆ ಗುಂಡೇಟು
ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ದರೋಡೆಗೆ ಬಂದಿದ್ದ ಉತ್ತರ ಪ್ರದೇಶದ ದರೋಡೆಕೋರರ ತಂಡದ ಮೇಲೆ ಪೊಲೀಸರು ಗುಂಡು ಹಾರಿಸಿ, ನಾಲ್ವರನ್ನು ಸೆರೆ ಹಿಡಿದಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ನಡೆದಿದ್ದ ಕೋಟ್ಯಾಂತರ ರೂ. ಮೌಲ್ಯದ ದರೋಡೆ ಪ್ರಕರಣಗಳು ಬಯಲಿಗೆ ಬಂದಿವೆ.

ಸ್ತ್ರೀ ಸಮಾನತೆ ಹಕ್ಕು ಶೀಘ್ರ ಸಿಗಲಿ
ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದ್ದಾಳೆ. ಸಾಹಿತ್ಯ, ಶಿಕ್ಷಣ, ರಾಜಕೀಯ, ವೈದ್ಯಕೀಯ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದ್ದಾಳೆ. ಆದಾಗ್ಯೂ ಸ್ತ್ರೀ ಸಮಾನತೆ ಹೋರಾಟ ನಡೆಯುತ್ತಲೇ ಇದ್ದು, ಆದಷ್ಟು ಶೀಘ್ರ ಹೋರಾಟಕ್ಕೆ ಫಲ ದೊರೆಯಲಿ
ನಾಲಾ ತೊಟ್ಟಿಲು ದುರಸ್ತಿಗೆ ರೈತ ಒಕ್ಕೂಟದ ಒತ್ತಾಯ
ಭದ್ರಾ ಅಣೆಕಟ್ಟೆಯ ಆನವೇರಿ ವಿಭಾಗದ ನಾಲಾ ತೊಟ್ಟಿಲು ಮೊನ್ನೆ ರಾತ್ರಿ ಒಡೆದಿದ್ದು, ಸರ್ಕಾರ ಈ ಕೂಡಲೇ ತುರ್ತಾಗಿ ದುರಸ್ತಿಗೊಳಿಸಲು ಮುಂದಾಗಬೇಕೆಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್. ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಎ.ಎಂ. ಮಂಜುನಾಥ್ ಆಗ್ರಹಿಸಿದ್ದಾರೆ.
ಪ.ಜಾತಿ – ಪಂಗಡಗಳ ಕುಂದು-ಕೊರತೆ ಸಭೆ ಕರೆಯಲು ಒತ್ತಾಯ
ನಗರದ ಸರ್ ಎಂ.ವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ದಿನಾಂಕ 22ರ ಸಂಜೆ 4ಕ್ಕೆ ಸರ್.ಎಂ.ವಿ ವೈಭವ-2024 ವಾರ್ಷಿಕೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಕರುಣಾ ಜೀವ ಟ್ರಸ್ಟ್ : ನಗರದಲ್ಲಿ ಇಂದು ಮಜ್ಜಿಗೆ ವಿತರಣೆ
ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಶ್ರೀಮತಿ ಶಕುಂತಲಾ ಪ್ರೊ. ಜೆ.ಪರಮೇಶ್ವರಪ್ಪ ಇವರು ಇಂದಿನ ದಾನಿಗಳಗಿದ್ದಾರೆ.
ನಗರದಲ್ಲಿಂದು ಪುನೀತ್ 50ನೇ ವರ್ಷದ ಹುಟ್ಟು ಹಬ್ಬ ಆಚರಣೆ
ಪುನೀತ್ ರಾಜ್ಕುಮಾರ್ ಅವರ 50ನೇ ವರ್ಷದ ಜನ್ಮ ದಿನದ ಪ್ರಯುಕ್ತ ಇಂದು ಬೆಳಿಗ್ಗೆ 11.30ಕ್ಕೆ ನಿಟ್ಟುವಳ್ಳಿಯ ಶ್ರೀ ಚಾಮುಂಡೇಶ್ವರಿ ಚಿತ್ರಮಂದಿರದ ಮುಂಭಾಗದಲ್ಲಿ ಹುಟ್ಟು ಹಬ್ಬವನ್ನು ಆಚರಿಸಲಾಗುವುದು.
ನಗರದಲ್ಲಿ ಇಂದು ರಾಷ್ಟ್ರೀಯ ವೃತ್ತಿ ರಂಗೋತ್ಸವ ಸಮಾರೋಪ
ವೃತ್ತಿ ರಂಗಭೂಮಿ ರಂಗಾಯಣ ವತಿಯಿಂದ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವೃತ್ತಿ ರಂಗೋತ್ಸವದಲ್ಲಿ ಇಂದು ಸಂಜೆ 6.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಪಿಎಲ್ಡಿ ಬ್ಯಾಂಕಿಗೆ ನಿರ್ದೇಶಕರ ಆಯ್ಕೆ
ದಾವಣಗೆರೆ ಪಿಎಲ್ಡಿ ಬ್ಯಾಂಕ್ಗೆ ಫೆಬ್ರವರಿ 8ರಂದು ನಡೆದ ಚುನಾವಣೆಯಲ್ಲಿ ಎ.ಎಂ. ಮಂಜುನಾಥ್, ಕೆ.ಎಸ್. ವಸಂತ ಕುಮಾರ್, ಹೆಚ್.ಆರ್. ಅಶೋಕ್ ಅವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಭಾರತೀಯ ಸೇನೆಯ ಅಗ್ನಿ ವೀರ್ ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನ
ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ನಗರದಲ್ಲಿ ಇಂದು ನೂತನ ಜಿಲ್ಲಾ ಜಡ್ಜ್ಗೆ ಸ್ವಾಗತ ಸಮಾರಂಭ
ನೂತನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೇಲಾ ದಾಮೋದರ ಕೋಡೆ ನ್ಯಾಯಾಧೀಶರಿಗೆ ಜಿಲ್ಲಾ ವಕೀಲರ ಸಂಘದ ವತಿಯಿಂದ ಇಂದು ಬೆಳಿಗ್ಗೆ 10.30ಕ್ಕೆ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿದೆ.
ನಗರದಲ್ಲಿ ಇಂದು ಮಜ್ಜಿಗೆ ವಿತರಣೆ
ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಸಿ.ಎಸ್.ಭರತ್ ಸಿ.ವಿ.ಡಿ. ಟ್ರಸ್ಟ್, ದಾವಣಗೆರೆ ಇವರು ಇಂದಿನ ದಾನಿಗಳಗಿದ್ದಾರೆ.
ರಾಣೇಬೆನ್ನೂರು ನಗರಸಭೆ ಸಾಮಾನ್ಯ ಸಭೆಗೆ ಹೈಕೋರ್ಟ್ ತಡೆಯಾಜ್ಞೆ
ರಾಣೇಬೆನ್ನೂರು : ಇಂದು ಸಂಜೆ 4 ಗಂಟೆಗೆ ನಡೆಯಬೇಕಿದ್ದ ಇಲ್ಲಿನ ನಗರಸಭೆಯ ಮುಂದೂಡಿದ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಧಾರವಾಡ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿದ್ದ ರಿಂದ ಸಭೆಯನ್ನು ರದ್ದುಗೊಳಿಸಲಾಗಿದೆ
ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಬಸ್
ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯಲ್ಲಿ ಇಂದಿನಿಂದ ಮೂರು ದಿನ ನಡೆಯುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ಭಕ್ತಾಧಿಗಳ ಅನುಕೂಲಕ್ಕಾಗಿ 65 ಬಸ್ಗಳು ಕಾರ್ಯಚರಣೆ ಮಾಡಲಿವೆ
ನಗರದಲ್ಲಿ ಇಂದಿನಿಂದ ವೃತ್ತಿ ರಂಗೋತ್ಸವ
ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ವಿಚಾರ ಸಂಕಿರಣ, ರಂಗ ಸಂವಾದ, ರಂಗ ಗೌರವ, ರಂಗ ಗೀತೆಗಳ ಗಾಯನ, ನಾಟಕಗಳ ಪ್ರದರ್ಶನ, ರಂಗ ದಾಖಲೆಗಳ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಕುರಿತ ರಾಷ್ಟ್ರೀಯ ವೃತ್ತಿ ರಂಗೋತ್ಸವ-2025 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ನಗರದಲ್ಲಿ ಇಂದು
ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ಸರಕು ಮತ್ತು ಸೇವಾ ತೆರಿಗೆ ಮತ್ತು ಆದಾಯ ತೆರಿಗೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮವು ಚಾರ್ಟರ್ಡ್ ಅಕೌಂಟೆಂಟ್ಸ್ ಭವನದಲ್ಲಿ ಇಂದು ನಡೆಯಲಿದೆ.
ನಗರದಲ್ಲಿ ಇಂದು ಸಂಗೀತ ಪ್ರಭ
ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಜೆ 6 ಗಂಟೆಗೆ ಶ್ರೀರಾಮಚಂದ್ರ ಹಡಪದ, ಹರ್ಷ ರಂಜಿನಿ, ಸ್ಪರ್ಷ ಆರ್.ಕೆ. ಇವರಿಂದ ಸಂಗೀತ ಪ್ರಭ ಕಾರ್ಯಕ್ರಮ ನಡೆಯಲಿದೆ
ನಗರದಲ್ಲಿ ಇಂದು ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಇವರ ಸಹಯೋಗದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಐ.ಟಿ.ಐ ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ತಾರೇಹಳ್ಳಿಯಲ್ಲಿ ಇಂದು ಓಕಳಿ
ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದ ಶ್ರೀ ರಂಗನಾಥ ಸ್ವಾಮಿ ರಥೋತ್ಸವದ ಪ್ರಯುಕ್ತ ಇಂದು ಓಕಳಿ ಉತ್ಸವ ನಡೆಯಲಿದೆ.
ನಗರದಲ್ಲಿ ಇಂದು ಕುರಿ ಸಾಕಾಣಿಕೆ ತರಬೇತಿ
ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಇಂದು ನಡೆಯಲಿದೆ.
ನಗರದಲ್ಲಿ ಇಂದು ಬುತ್ತಿ ಪೂಜೆ
ಸಾರ್ವಜನಿಕ ರುದ್ರಭೂಮಿ ರಸ್ತೆಯಲ್ಲಿರುವ ಚೌಡೇಶ್ವರಿ ನಗರದ ಬೋಳಚಟ್ಟಿ ಶ್ರೀ ಚೌಡೇಶ್ವರಿ ದೇವಿ, ಕಾಲಭೈರವ ಶ್ರೀ ಭೂತನಾಥೇಶ್ವರ ಸ್ವಾಮಿ ದೇವಸ್ಥಾನದಲ್ಲಿ, ಎಡೆ ಜಾತ್ರೆ ಪ್ರಯುಕ್ತ ಇಂದು ಬೆಳಿಗ್ಗೆ ಬುತ್ತಿ ಪೂಜೆ ನಡೆಯಲಿದೆ.
ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಯುತ್ತಿರುವ ರುಡ್ಸೆಟ್ ಸಂಸ್ಥೆ ವತಿಯಿಂದ ಮೊಬೈಲ್ ರಿಪೇರಿ ಮತ್ತು ಸೇವೆ ಕುರಿತ ಉಚಿತ ತರಬೇತಿ ಆಯೋಜಿಸಲಾಗಿದೆ.
ಪ್ಲಾಸ್ಟಿಕ್ ಉದ್ದಿಮೆದಾರರಿಗೆ ದಂಡ
ನಗರ ಪಾಲಿಕೆ ವತಿಯಿಂದ ನಿನ್ನೆ ನಗರದ ಎಂ.ಜಿ. ರಸ್ತೆ ವಿಕಾಸ್ ಪಾಲಿ ಪ್ಯಾಕ್ಸ್, ಕರ್ನಾಟಕ ಪ್ಲಾಸ್ಟಿಕ್, ಪ್ರೇಮ್ ಪ್ಲಾಸ್ಟಿಕ್ ಉದ್ದಿಮೆಗಳ ತಪಾಸಣೆ ಮಾಡಿ 240 ಕೆ.ಜಿ ಏಕ ಬಳಕೆ ಪ್ಲಾಸ್ಟಿಕನ್ನು ವಶ ಪಡಿಸಿಕೊಂಡು ದಂಡವನ್ನು ವಿಧಿಸಲಾಗಿದೆ.
ನಗರದಲ್ಲಿ ನಾಳೆ ಮೂಳೆ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸಾ ಶಿಬಿರ
ಇದೇ ದಿನಾಂಕ 16 ರಂದು ಬೆಳಿಗ್ಗೆ 8.30ಕ್ಕೆ ನಿಟುವಳ್ಳಿ ಹೆಚ್.ಕೆ.ಆರ್. ಸರ್ಕಲ್ ಬಳಿ ಇರುವ ಓಂ ವೆಲ್ನೆಸ್ ಸೆಂಟರ್ ನಲ್ಲಿ ಮೂಳೆ ಸಂಬಂಧಿತ ಕಾಯಿಲೆಗಳಿಗೆ ಉಚಿತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ
ಇಂದು ಅಮರೇಶ್ವರ ಮಹಾರಥೋತ್ಸವ
ಲಿಂಗಸಗೂರು ತಾಲ್ಲೂಕು ಗುರು ಗುಂಟಾ ಸುಕ್ಷೇತ್ರದಲ್ಲಿ ಇಂದು ಸಂಜೆ 6ಕ್ಕೆ ಶ್ರೀ ಅಮರೇಶ್ವರ ಮಹಾರಥೋತ್ವವವು ವಿಜೃಂಭಣೆಯಿಂದ ಜರುಗುವುದು.
ಮಲೇಬೆನ್ನೂರಿನಲ್ಲಿ ಇಂದು ಹೋಳಿ
ಪಟ್ಟಣದ ಮುಖ್ಯ ವೃತ್ತದಲ್ಲಿ ಹೋಳಿ ಹಬ್ಬದ ಅಂಗವಾಗಿ ಸಾಮೂಹಿಕವಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡಲಾಗುವುದು ಎಂದು ಆಚರಣೆ ಸಮಿತಿ ಅಧ್ಯಕ್ಷ ಮೇದಾರ್ ರವಿ ತಿಳಿಸಿದ್ದಾರೆ.
ನಗರದಲ್ಲಿ ಇಂದು ಮಜ್ಜಿಗೆ ವಿತರಣೆ
ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ಶ್ರೀಮತಿ ಶ್ರೀದೇವಿ ಡಾ. ರಮೇಶ್ ಇವರು ಇಂದಿನ ದಾನಿಗಳಗಿದ್ದಾರೆ.
ನಗರದಲ್ಲಿ ನಾಳೆ ಬೃಹತ್ ಉದ್ಯೋಗ ಮೇಳ, ಸಂಗೀತ ಪ್ರಭ
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ದಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಾಡಿದ್ದು ದಿನಾಂಕ 15ರಂದು ನಗರದ ಹದಡಿ ರಸ್ತೆ ಸರ್ಕಾರಿ ಐಟಿಐ ಕಾಲೇಜು ಆವರಣ ಹಾಗೂ ಬಿಐಇಟಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ನಡೆಯಲಿದೆ.
ನಗರದಲ್ಲಿ ಇಂದು ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದಿಂದ ವಿವಿಧ ಸ್ಪರ್ಧೆಗಳು
ಇಂದು ಸಂಜೆ 4 ಗಂಟೆಗೆ ಬ್ರಾಹ್ಮಣ ಸಮಾಜ ವಿದ್ಯಾರ್ಥಿ ನಿಲಯದಲ್ಲಿ ವಿವಿಧ ಸ್ಪರ್ಧೆಗಳನ್ನು ಬ್ರಾಹ್ಮಣ ಸಮಾಜದ ಮಹಿಳೆಯರಿಗಾಗಿ ಏರ್ಪಡಿಸಲಾಗಿದೆ ಎಂದು ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ನಳಿನಿ ಅಚ್ಯುತ್ ತಿಳಿಸಿದ್ದಾರೆ.
ಇಂದು ಪಾರ್ವತಿ – ಕಲೋತ್ಸವ
ಅಂತರ ಕಾಲೇಜು ಸ್ಪರ್ಧೆಗಳು - `ಪಾರ್ವತಿ ಕಲೋತ್ಸವ' ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಧ.ರಾ.ಮ ವಿಜ್ಞಾನ ಕಾಲೇಜಿನ ಡಾ. ಎಸ್.ಎಸ್. ಸೆಮಿನಾರ್ ಹಾಲ್ನಲ್ಲಿ ಇಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ
ದಾವಣಗೆರೆ ಜಿಲ್ಲಾ ನೂತನ ನ್ಯಾಯಾಧೀಶರಾಗಿ ವೇಲಾ ಖೋಡೆ
ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರನ್ನಾಗಿ ಶ್ರೀಮತಿ ವೇಲಾ ದಾಮೋದರ್ ಖೋಡೆ ಅವರನ್ನು ನೇಮಕ ಮಾಡಿ ಕರ್ನಾಟಕ ರಾಜ್ಯ ಉಚ್ಛ ನ್ಯಾಯಾಲಯ ಆದೇಶ ಹೊರಡಿಸಿದೆ.

ಸರ್ಕಾರಿ ನೌಕರರ ಗೃಹ ನಿರ್ಮಾಣ ಸಂಘದ ಅಧ್ಯಕ್ಷರಾಗಿ ಚಂದ್ರಪ್ಪ
ಸ್ಥಳೀಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಕಳೆದ ವಾರ ನಡೆದ ಚುನಾವಣೆಯಲ್ಲಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯೂ ಅವಿರೋಧವಾಗಿ ಆಗಿರುತ್ತದೆ

ಕವಿತಾ ಮಾರುತಿ ಬೇಡರ್, ವಾಮನಮೂರ್ತಿ ಭೇಟಿ
ಹರಿಹರ : ಗ್ರಾಮದೇವತೆ ಊರಮ್ಮ ದೇವಿ ಹಬ್ಬದ ಸಮಯದಲ್ಲಿ ನಗರದ ಜನತೆಗೆ ನೀರಿನ ತೊಂದರೆ ಆಗದಂತೆ ತಡೆಯಲು ಕವಲೆತ್ತು ಬಳಿ ಇರುವ ಜಾಕ್ ವೇಲ್ ಮತ್ತು ಪಂಪ್ ಹೌಸ್ ಗೆ ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್ ಮತ್ತು ನಗರಸಭೆ ಹಿರಿಯ ಸದಸ್ಯ ಎ. ವಾಮನಮೂರ್ತಿ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದರು.

ದಿನೇಶ್ ಶೆಟ್ಟಿ ಹುಟ್ಟುಹಬ್ಬ : 70ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳೂ ಆದ ದಿನೇಶ್ ಕೆ. ಶೆಟ್ಟಿ ಅವರ 62ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಹಿರಿಯರು, ವನಿತೆಯರು, ವಿಶೇಷ ಚೇತನ ಮಕ್ಕಳ ಜೊತೆ ಹಾಗೂ ಸರ್ಕಾರಿ ಶಾಲೆಯ ಮಕ್ಕಳ ಜೊತೆ ಆಚರಿಸಲಾಯಿತು.

ಕುಂಬಳೂರಿನಲ್ಲಿ ವೈಭವದ ರಥೋತ್ಸವ, ಮುಳ್ಳೋತ್ಸವ
ಮಲೇಬೆನ್ನೂರು : ಕುಂಬಳೂರು ಗ್ರಾಮದ ಆರಾಧ್ಯ ದೈವ ಶ್ರೀ ಹನುಮಂತ ದೇವರ ಮಹಾರಥೋತ್ಸವವು ಭಾನುವಾರ ಬೆಳಗಿನ ಜಾವ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದೊಂದಿಗೆ ಜರುಗಿತು.

ಯಲವಟ್ಟಿ : ಇಂದು ಲಿಂಗೈಕ್ಯ ಶ್ರೀಗಳ ಪುಣ್ಯಾರಾಧನೆ
ಮಲೇಬೆನ್ನೂರು ಸಮೀಪದ ಯಲ ವಟ್ಟಿ ಗ್ರಾಮದ ಶ್ರೀ ಗುರು ಸಿದ್ಧಾಶ್ರಮದ ವೈರಾಗ್ಯನಿಧಿ ಶ್ರೀ ಶಿವಾನಂದ ಮಹಾ ಸ್ವಾಮೀಜಿಯವರ 20ನೇ ವರ್ಷದ ಪುಣ್ಯಾರಾಧನೆ ಹಾಗೂ ಜ್ಞಾನನಿಧಿ ಶ್ರೀ ನಿತ್ಯಾನಂದ ಮಹಾಸ್ವಾಮೀಜಿಯರ 18ನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮ ವನ್ನು ಇಂದು ಹಮ್ಮಿಕೊಳ್ಳಲಾಗಿದೆ

ಬಾಗಳಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ
ಹರಪನಹಳ್ಳಿ : ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬಾಗಳಿ ಗ್ರಾಮದ ಕೆರೆಯಲ್ಲಿ ಭಾನುವಾರ ಬೆಳಗ್ಗೆ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಪಿಎಲ್ಡಿ ಬ್ಯಾಂಕಿಗೆ ನಿರ್ದೇಶಕರ ಆಯ್ಕೆ
ದಾವಣಗೆರೆ ಪಿಎಲ್ಡಿ ಬ್ಯಾಂಕ್ಗೆ ಫೆಬ್ರವರಿ 8ರಂದು ನಡೆದ ಚುನಾವಣೆಯಲ್ಲಿ ಎ.ಎಂ. ಮಂಜುನಾಥ್, ಕೆ.ಎಸ್. ವಸಂತ ಕುಮಾರ್, ಹೆಚ್.ಆರ್. ಅಶೋಕ್ ಅವರುಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಅಡಿಕೆ ಗಿಡಕ್ಕೆ ಹಾನಿ : ಆತಂಕದಲ್ಲಿ ರೈತರು
ಮಲೇಬೆನ್ನೂರು : ದುಷ್ಕರ್ಮಿಗಳು ಅಡಿಕೆ ಗಿಡಗಳನ್ನು ಕಡಿದು ಹಾಕತ್ತಿರುವ ಘಟನೆ ಕುಣೆಬೆಳಕೆರೆ ಗ್ರಾಮದಲ್ಲಿ ಕಳೆದ 3-4 ದಿನಗಳಿಂದ ನಡೆಯುತ್ತಿದ್ದು, ರೈತರು ಆತಂಕದಲ್ಲಿದ್ದಾರೆ.

ಮುಸ್ಲಿಮರ ಗುತ್ತಿಗೆ ಮೀಸಲಾತಿ ವಿರುದ್ಧ ಬಿಜೆಪಿ ಹೋರಾಟ
ಬೆಳಗಾವಿ : ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡ ನಾಲ್ಕರ ಮೀಸಲಾತಿ ಕಲ್ಪಿಸು ವುದನ್ನು ವಿರೋಧಿಸಿ ವಿಧಾನ ಸಭೆಯ ಒಳಗೆ ಹಾಗೂ ಹೊರಗೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಹರಿಹರದಲ್ಲಿ ನಾಳೆಯಿಂದ ಜಾತ್ರೆ : ಶಾಸಕ ಹರೀಶ್ ಪರಿಶೀಲನೆ
ಹರಿಹರ : ನಗರ ದೇವತೆ ಜಾತ್ರೆಗೆ ದಿನ ಗಣನೆ ಶುರುವಾಗಿದ್ದು, ನಾಡಿದ್ದು ದಿನಾಂಕ 18ರಿಂದ ಆರಂಭವಾಗಲಿರುವ ಊರಮ್ಮ ದೇವಿಯ ಜಾತ್ರೆಯ ಪೂರ್ವ ಸಿದ್ಧತೆಗಳನ್ನು ಸ್ಥಳೀಯ ಶಾಸಕ ಬಿ.ಪಿ. ಹರೀಶ್ ಅವರು ಅಧಿಕಾರಿಗಳೊಂದಿಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಪಘಾತ: ರುದ್ರಪ್ಪ ಲಮಾಣಿಗೆ ಗಾಯ
ಚಿತ್ರದುರ್ಗ : ಹಿರಿಯೂರು ತಾಲ್ಲೂಕಿನ ಜವನ ಗೊಂಡನಹಳ್ಳಿ ಸಮೀಪ ಶುಕ್ರ ವಾರ ಸಂಭವಿಸಿದ ಅಪಘಾತ ದಲ್ಲಿ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ದೊಡ್ಡಬಾತಿಯಲ್ಲಿ ರೇವಣಸಿದ್ದೇಶ್ವರ ರಥೋತ್ಸವ : ಅನ್ನ ದಾಸೋಹ
ರಾಯಲ್ ಡ್ರೀಮರ್ಸ್ ಹಾಗೂ ಎಸ್ಸೆಸ್ಸೆಂ ಶೈನ್ ಗ್ರೂಪ್ ಮತ್ತು ಲಾರಿ ಮಾಲೀಕರ ಸಂಘ, ರೈಲ್ವೆ ಗೂಡ್ ಶೆಡ್ ಹಮಾಲರ ಸಂಘದ ವತಿಯಿಂದ ಅನ್ನ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಲೇಬೆನ್ನೂರಿನಲ್ಲಿ ಸಂಭ್ರಮದ ಹೋಳಿ ಆಚರಣೆ
ಮಲೇಬೆನ್ನೂರು : ಹೋಳಿ ಬಣ್ಣದ ಅಂಗವಾಗಿ ಪಟ್ಟಣದ ಮುಖ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದ ನೂರಾರು ಯುವಕರು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು.

ಕುಂಬಳೂರು : ಇಂದು ಹನುಮಂತ ದೇವರ ಬ್ರಹ್ಮ ರಥೋತ್ಸವ
ಮಲೇಬೆನ್ನೂರು ಸಮೀಪದ ಕುಂಬಳೂರು ಗ್ರಾಮದ ಶ್ರೀ ಹನುಮಂತ ದೇವರ ಬ್ರಹ್ಮ ರಥೋತ್ಸವವು ಇಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದೆ.

ಕೊಡದಗುಡ್ಡದಲ್ಲಿ ಇಂದು ಶ್ರೀ ವೀರಭದ್ರಸ್ವಾಮಿ ರಥೋತ್ಸವ
ಜಗಳೂರು ತಾಲ್ಲೂಕಿನ ಕೊಡದ ಗುಡ್ಡದ ಶ್ರೀ ವೀರ ಭದ್ರ ಸ್ವಾಮಿ ರಥೋತ್ಸ ವವು ಇಂದು ಜರುಗ ಲಿದೆ. ಬೆಳಿಗ್ಗೆ 6 ಗಂಟೆಗೆ ಅಗ್ನಿಕುಂಡ ಮತ್ತು ಸಾಯಂಕಾಲ 4.30ಕ್ಕೆ ರಥೋತ್ಸವ ನಡೆಯಲಿದೆ.

ಪಾಲಿಕೆಯ ಪಾಲಾನಾಯ್ಕ ಲೋಕಾಯುಕ್ತ ಬಲೆಗೆ
ಮಹಾನಗರ ಪಾಲಿಕೆ ವಲಯ ಕಚೇರಿ-2ರ ಪ್ರಥಮ ದರ್ಜೆ ಸಹಾಯಕ ಜಿ. ಪಾಲಾನಾಯ್ಕ ಅವರನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ನಗರಕ್ಕೆ ಇಂದು ಹೈಕೋರ್ಟ್ ಜಡ್ಜ್
ಜಿಲ್ಲಾ ವಕೀಲರ ಸಂಘದಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಇಂದು ಮಧ್ಯಾಹ್ನ 12ಕ್ಕೆ ವಕೀಲರ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.

ಆನೆಕೊಂಡದಲ್ಲಿ ಇಂದು ಬಸವೇಶ್ವರ ಸ್ವಾಮಿ ರಥೋತ್ಸವ
ದಾವಣಗೆರೆ : ಆನೆಕೊಂಡದ ಶ್ರೀ ಬಸವೇ ಶ್ವರ ಸ್ವಾಮಿ ಮತ್ತು ನೀಲಾನಹಳ್ಳಿಯ ಶ್ರೀ ಆಂಜನೇಯ ಸ್ವಾಮಿಗಳ ರಥೋತ್ಸವವು ಇಂದು ರಾತ್ರಿ 10.30ಕ್ಕೆ ನಡೆಯಲಿದೆ ಎಂದು ದೇವಸ್ಥಾನದ ಕನ್ವೀನರ್ ಗೌಡ್ರು ಅಜ್ಜಪ್ಪ ತಿಳಿಸಿದ್ದಾರೆ.

ನಗರದ ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಹೋಳಿ ಹುಣ್ಣಿಮೆ ಕಾರ್ಯಕ್ರಮ
ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಸಂಜೆ 5.30 ಕ್ಕೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಹೋಳಿ ಹುಣ್ಣಿಮೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಅಕ್ಕಿ ವರ್ತಕರ ಸಂಘದಿಂದ ಕಾಮದಹನ
ಚೌಕಿಪೇಟೆ ಅಕ್ಕಿ ವರ್ತಕರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮಾಗಿ ಅವರ ಸ್ನೇಹ ಬಳಗದ ವತಿಯಿಂದ ಕಾಮದಹನ ಮಹೋತ್ಸವ ಆಚರಿಸಲಾಯಿತು. ನಾಳೆ ಹೋಳಿ ಆಚರಣೆ ನಡೆಯಲಿದೆ.

ರಾಮ್ ಅಂಡ್ ಕೋ ವೃತ್ತದಲ್ಲಿ ಕಾಮದಹನ
ರಾಮ್ ಅಂಡ್ ಕೋ ಗೆಳೆಯರ ಬಳಗದ ವತಿಯಿಂದ ಸರ್ಕಲ್ ನಲ್ಲಿ ಏರ್ಪಡಿಸಿದ್ದ ಕಾಮದಹನವನ್ನು ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ನೆರವೇರಿಸಿದರು.

ಕುಟುಂಬದಲ್ಲಿ ಸ್ತ್ರೀ ಪಾತ್ರ ಮಹತ್ತರ
ಕುಟುಂಬ ಹಾಗೂ ಸಮಾಜಕ್ಕೆ ಶಕ್ತಿ ತುಂಬುವ ಸ್ತ್ರೀಯ ಪಾತ್ರ ಮಹತ್ತರವಾದದ್ದು ಎಂದು ಭಾರತ್ ವಿಕಾಸ್ ಪರಿಷತ್ನ ಪ್ರಾಂತೀಯ ಖಜಾಂಚಿ ಪುಟ್ಟಪ್ಪ ಕಾಶಿಪುರ ತಿಳಿಸಿದರು.

ದೊಡ್ಡಬಾತಿಯಲ್ಲಿ ವಿಜೃಂಭಣೆಯ ಶ್ರೀ ರೇವಣಸಿದ್ದೇಶ್ವರ ರಥೋತ್ಸವ
ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ಶ್ರೀ ರೇವಣ ಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವವು ಇಂದು ಮಧ್ಯರಾತ್ರಿ ಅಪಾರ ಭಕ್ತರ ಸಮ್ಮುಖ ದಲ್ಲಿ ವಿಜೃಂಭಣೆಯಿಂದ ಜರುಗಿತು.

ಜಿಗಳಿಯಲ್ಲಿ ಸಂಭ್ರಮದ ರಥೋತ್ಸವ
ಮಲೇಬೆನ್ನೂರು : ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿ ರಥೋತ್ಸವವು ಗುರುವಾರ ಬೆಳಗಿನ ಜಾವ ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಕೊಡದಗುಡ್ಡದಲ್ಲಿ ನಾಳೆ ಶ್ರೀ ವೀರಭದ್ರಸ್ವಾಮಿ ರಥೋತ್ಸವ
ಜಗಳೂರು ತಾಲ್ಲೂಕಿನ ಕೊಡದ ಗುಡ್ಡದ ಶ್ರೀ ವೀರಭದ್ರಸ್ವಾಮಿ ರಥೋತ್ಸವವು ನಾಳೆ ಶನಿವಾರ ಜರುಗಲಿದೆ. ಅಂದು ಬೆಳಿಗ್ಗೆ 6 ಗಂಟೆಗೆ ಅಗ್ನಿಕುಂಡ ಮತ್ತು ಸಾಯಂಕಾಲ 4.30ಕ್ಕೆ ರಥೋತ್ಸವ ನಡೆಯಲಿದೆ.

ಹಾವೇರಿ ಜಿಲ್ಲಾ ನೇಕಾರ ಒಕ್ಕೂಟಕ್ಕೆ ಆಯ್ಕೆ
ರಾಣೇಬೆನ್ನೂರು : ಇಲ್ಲಿನ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ನೇಕಾರ ಒಕ್ಕೂಟದ ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು.

ಶಾಂತಿಯುತ ಹೋಳಿ ಆಚರಣೆಗೆ ಹರಿಹರ ಪಿಎಸ್ಐ ಮನವಿ
ಹರಿಹರ : ಪರೀಕ್ಷೆಗಳು ಆರಂಭವಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ಹೋಳಿ ಹಬ್ಬವನ್ನು ಆಚರಿಸುವಂತೆ ಪಿಎಸ್ಐ ಶ್ರೀಪತಿ ಗಿನ್ನಿ ಮನವಿ ಮಾಡಿದರು.

ಸನಾತನ ಧರ್ಮ ಉಳಿಸಿ ಬೆಳೆಸುತ್ತಿರುವ ಪೌರಾಣಿಕ ನಾಟಕಗಳು
ಹರಪನಹಳ್ಳಿ : ಹದಿನೈದನೇ ಶತಮಾನದಲ್ಲಿ ಸಮಾಜದ ಉದ್ದಾರ ಹಾಗೂ ಧರ್ಮ ಪ್ರಚಾರ ಕೈಗೊಂಡ ಸಂತ, ಕೂಲಹಳ್ಳಿ ಗೋಣಿಬಸವೇಶ್ವರ ಎಂದು ನಾಟಕ ರಚನೆಕಾರ ಎಚ್.ಎನ್ ಕೊಟ್ರಪ್ಪ ತಿಳಿಸಿದರು.

ವಿಜೃಂಭಣೆಯ ಗಾಣಗಟ್ಟೆ ಮಾಯಮ್ಮ ದೇವಿ ರಥೋತ್ಸವ
ಕೊಟ್ಟೂರು : ತಾಲ್ಲೂಕಿನ ಗಾಣಗಟ್ಟೆ ಗ್ರಾಮದಲ್ಲಿ ಮಾಯಮ್ಮ ದೇವಿಯ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಿನ್ನೆ ಸಂಜೆ ವಿಜೃಂಭಣೆಯಿಂದ ಜರುಗಿತು.

ನಗರದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದು ಹೋಳಿ ಹುಣ್ಣಿಮೆ
ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಹುಣ್ಣಿಮೆ ಪ್ರಯುಕ್ತ ಇಂದು ಶ್ರೀ ಸತ್ಯ ನಾರಾಯಣ ಸ್ವಾಮಿ ಪೂಜಾ ಕಥಾ, ಪ್ರಧಾನ ದೇವತೆ ಶ್ರೀ ಮಾತಾ ಅನ್ನಪೂರ್ಣೇಶ್ವರಿಗೆ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ

ರಾಣೇಬೆನ್ನೂರಿನಲ್ಲಿ ಇಂದು ಜೀವಂತ ಕಾಮ ಪ್ರತಿಷ್ಠಾಪನೆ
ಇಂದು ಜೀವಂತ ಕಾಮ ಪ್ರತಿಷ್ಠಾಪನೆ, ನಾಳೆ ಶನಿವಾರ ಬೆಳಿಗ್ಗೆ 8 ರಿಂದ 12ರ ವರೆಗೆ ಬಣ್ಣ, ಕಾಮದಹನ ನಡೆಯಲಿದೆ.

ಜಿಲ್ಲಾ ಮಂತ್ರಿಗಳನ್ನು ದೂರುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸಲಿ
ಹರಿಹರ : ಶಾಸಕ ಬಿ.ಪಿ.ಹರೀಶ್ ವಿನಾಕಾರಣ ಜಿಲ್ಲಾ ಮಂತ್ರಿ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ದೂರುವುದನ್ನು ಬಿಟ್ಟು ತಾಲ್ಲೂಕಿನ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಲಿ ಎಂದು ಮಾಜಿ ಶಾಸಕ ಎಸ್. ರಾಮಪ್ಪ ಹೇಳಿದರು.

ಕೆ.ಎಂ. ರೇಣುಕಾಗೆ `ಅಕ್ಕ’ ರಾಜ್ಯ ಪ್ರಶಸ್ತಿ
ಹರಿಹರ : ಅಕ್ಕನ ಮನೆ ಪ್ರತಿಷ್ಠಾನದ ವತಿಯಿಂದ ಬೆಂಗಳೂರಿನ ಕನ್ನಡ ಭವನದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹೊಳೆಸಿರಿಗೆರೆಯ ಜಿಹೆಚ್ಪಿಎಸ್ ಶಾಲೆಯ ಶಿಕ್ಷಕಿ ಶ್ರೀಮತಿ ಕೆ.ಎಂ. ರೇಣುಕಾ ಅವರಿಗೆ ಅವರ ಶಿಕ್ಷಣ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ, ಅಕ್ಕ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.