ಹರಿಹರ : ನಾಡಿನ ಜನತೆಯಲ್ಲಿ ಕನ್ನಡದ ಕಿಚ್ಚು ಹಾಗೂ ಅಭಿಮಾನ ಹೆಚ್ಚಾದರೆ ಕನ್ನಡದ ಹಿರಿಮೆ ಕೂಡ ಹೆಚ್ಚಾಗುತ್ತದೆ ಎಂದು ತಹಶೀಲ್ದಾರ್ ಗುರುಬಸವರಾಜ್ ಹೇಳಿದರು.
ಗಮನಸೆಳೆದ ಶ್ರೀನಿವಾಸ ಕಲ್ಯಾಣ ವೈಭವ
ತಿರುಪತಿ ತಿಮ್ಮಪ್ಪನ ದೇಗುಲದ ವೈಭವ ಇಂದು ದೇವನಗರಿ ಯಲ್ಲೂ ಅನವಾರಣಗೊಂಡಿತ್ತು. ಸುಂದರ ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣ ಸಂಭ್ರಮ ಕಂಡು ಬಂದಿದ್ದು ವಿಶೇಷವೇ ಸರಿ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆ ಯಲ್ಲಿ ಭಕ್ತರು ಆಗಮಿಸಿದ್ದರು.
ಬಿಜೆಪಿ ಅಭ್ಯರ್ಥಿ ಬದಲಿಗೆ ಭಿನ್ನಮತೀಯರ ಪಟ್ಟು
ಗಾಯತ್ರಿ ಸಿದ್ದೇಶ್ವರ ಅವರಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ಘೋಷಿಸಿದ ನಂತರ ಬಿಜೆಪಿಯಲ್ಲಿ ಉಂಟಾಗಿರುವ ಭಿನ್ನಮತದ ಬೆಂಕಿ ಶಮನವಾಗುತ್ತಿಲ್ಲ. ಅಭ್ಯರ್ಥಿ ಬದಲಿಸುವಂತೆ ಬಂಡಾಯ ಮುಖಂಡರು ಗಡುವು ನೀಡಿದ್ದಾರೆ.
ಅತ್ಯಾಧುನಿಕ ಬೋಲಿಂಗ್ ಮಿಷನ್ಗೆ ಚಾಲನೆ
ದಾವಣಗೆರೆ ಕ್ರಿಕೆಟ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಲಿವರೇಜ್ ಕಂಪನಿಯ ಅತ್ಯಾಧುನಿಕ ಬೋಲಿಂಗ್ ಮಿಷನ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಯಂತ್ರಕ್ಕೆ ಬಾಲ್ ಹಾಕುವ ಮೂಲಕ ಚಾಲನೆ ನೀಡಿದರು.
ಎಲ್ಲರ ಸಹಭಾಗಿತ್ವದಲ್ಲಿದೆ ಪ್ರಜಾಪ್ರಭುತ್ವ: ವೆಂಕಟೇಶ್
ಪ್ರಜಾಪ್ರಭು ತ್ವದಲ್ಲಿ ಎಲ್ಲರ ಸಹಭಾಗಿತ್ವ ಅವಶ್ಯಕ, ಎಲ್ಲರೂ ಲೋಕಸಭಾ ಚುನಾವಣಾ ಹಬ್ಬ ದಲ್ಲಿ ಭಾಗವಹಿಸುವ ಮೂಲಕ ಪ್ರಜಾತಂತ್ರ ವನ್ನು ಆರಾಧಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಕರೆ ನೀಡಿದರು.
ತಾರೇಹಳ್ಳಿಯಲ್ಲಿ ನಾಳೆ ರಂಗನಾಥ ಸ್ವಾಮಿ ರಥೋತ್ಸವ
ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಮಹಾರಥೋತ್ಸವವು ನಾಳೆ ಬುಧವಾರ ಸಂಜೆ 6.30ಕ್ಕೆ ನಡೆಯಲಿದೆ. ರಥೋತ್ಸವದ ಪ್ರಯುಕ್ತ ಇಂದು ಗರುಡ ವಾಹನ ಉತ್ಸವ, ನಾಳೆ ಗುರುವಾರ ಅನ್ನ ಸಂತರ್ಪಣೆ, ದಿನಾಂಕ 22ರ ಶುಕ್ರವಾರ ಓಕುಳಿ ಉತ್ಸವ ಜರುಗಲಿದೆ.
ನಂದಿಗುಡಿಯಲ್ಲಿ ಇಂದು ರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವ
ಮಲೇಬೆನ್ನೂರು ಸಮೀಪದ ನಂದಿ ಗುಡಿ ಗ್ರಾಮದ ಶ್ರೀ ಬಸವೇಶ್ವರ ದೇವರ ರಥೋತ್ಸವ ಇಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ.
ಎಸ್.ಎಸ್. ಕೇರ್ ಟ್ರಸ್ಟ್ನಿಂದ ಜನತೆಗೆ ಟ್ಯಾಂಕರ್ನಲ್ಲಿ ಉಚಿತ ನೀರು ಪೂರೈಕೆ
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಹಾಗೂ ಬೇಸಿಗೆ ಹಿನ್ನೆಲೆಯಲ್ಲಿ ಎಸ್.ಎಸ್.ಕೇರ್ ಟ್ರಸ್ಟ್ನಿಂದ ಜನತೆಗೆ ಟ್ಯಾಂಕರ್ ಮೂಲಕ ಉಚಿತ ನೀರು ಪೂರೈಕೆ ಮಾಡಲಾಗುವುದು ಎಂದು ಟ್ರಸ್ಟ್ನ ಮುಖ್ಯಸ್ಥರೂ, ಶಾಸಕರೂ ಆದ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ನಗರದಲ್ಲಿ ರಸ್ತೆ ಬದಿ ನಿಂತಿದ್ದ ಕಾರ್ಗೆ ಬೆಂಕಿ
ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ಎದುರು ನಿಲ್ಲಿಸಿದ್ದ ಕಾರೊಂದರಲ್ಲಿ ಬೆಂಕಿ ಕಾಣಿಸಿಕೊಂಡು, ಕಾರು ಬಹುತೇಕ ಸುಟ್ಟು ಕರಕಲಾದ ಘಟನೆ ಸೋಮವಾರ ಮಧ್ಯಾಹ್ನ 1.20ರ ವೇಳೆ ನಡೆದಿದೆ.
ನಗರದ ಸಹ್ಯಾದ್ರಿ ಚಿಟ್ಸ್ ಗೆ ರಾಜ್ಯ ಪ್ರಶಸ್ತಿ
ನಗರದ ಸಹ್ಯಾದ್ರಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಪ್ರೈಡ್ ಇಂಡಿಯಾ ಅವಾರ್ಡ್ಸ್ ಸಂಸ್ಥೆಯು ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಎಕ್ಸಲೆನ್ಸ್ ಬಿಸಿನೆಸ್ ಅವಾರ್ಡ್ಸ್ ನಲ್ಲಿ 2024ನೇ ಸಾಲಿನ ಮೋಸ್ಟ್ ಟ್ರಸ್ಟೆಡ್ ಚಿಟ್ ಫಂಡ್ ಕಂಪನಿ ಪ್ರಶಸ್ತಿ ನೀಡಿದೆ.
ಶ್ರೀ ದುಗ್ಗಮ್ಮ ಜಾತ್ರೆ : ವಾಸವಿ ಸಂಘದಿಂದ ಮಜ್ಜಿಗೆ
ಶ್ರೀ ದುರ್ಗಾಂಬಿಕ ದೇವಿ ಜಾತ್ರೆಯ ಪ್ರಯುಕ್ತ ಇಂದಿನಿಂದ ಇದೇ ದಿನಾಂಕ 24ರ ಭಾನುವಾರದವರೆಗೆ (ಬುಧವಾರ ಹೊರತುಪಡಿಸಿ) ಬೆಳಿಗ್ಗೆ 11 ಗಂಟೆಯಿಂದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸಾ ರ್ವಜನಿಕರಿಗೆ ಮಜ್ಜಿಗೆ ವಿತರಿಸಲಾಗುವುದು
ಚೆಕ್ ಪೋಸ್ಟ್ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ರೂ. 3.89 ಲಕ್ಷ ನಗದು ವಶ
ಲೋಕಿಕೆರೆ ಚೆಕ್ ಪೋಸ್ಟ್ನಲ್ಲಿ ಮುಖ್ಯಸ್ಥರಾದ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಎಸ್.ಎಸ್.ಟಿ. ತಂಡದಿಂದ 3,89,780/- ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ.
ಅಂಚೆ : ಡಾಕ್ ಅದಾಲತ್
ಸಾರ್ವಜನಿಕರ ಮತ್ತು ಅಂಚೆ ಗ್ರಾಹಕರ ಅಂಚೆ ಸೇವೆಗಳಿಗೆ ಸಂಬಂಧಿಸಿದ ದೂರು ಮತ್ತು ಸಲಹೆಗಳನ್ನು ಪಡೆಯಲು ಇದೇ ದಿನಾಂಕ 20 ರಂದು ಸಂಜೆ 4 ಗಂಟೆಗೆ ದಾವಣಗೆರೆ ಅಂಚೆ ಅಧೀಕ್ಷಕರ ಕಚೇರಿ, ಪ್ರಧಾನ ಅಂಚೆ ಕಚೇರಿಯ ಮೊದಲನೇ ಮಹಡಿ, ಗಡಿಯಾರ ಕಂಬದ ಹತ್ತಿರ ಮಂಡಿಪೇಟೆ ಇಲ್ಲಿ ಡಾಕ್ ಅದಾಲತ್ ನಡೆಸಲಾಗುವುದು
ಶ್ಯಾಬನೂರಿನಲ್ಲಿ ಇಂದು ರಥೋತ್ಸವ
ದಾವಣಗೆರೆ - ಶ್ಯಾಬ ನೂರಿನ ಶ್ರೀ ಆಂಜನೇಯ ಸ್ವಾಮಿ ರಥೋ ತ್ಸವವು ಇಂದು ಮಧ್ಯರಾತ್ರಿ 12 ಗಂಟೆಗೆ ಜರುಗಲಿದೆ. ನಾಳೆ ಬುಧವಾರ ಬೆಲ್ಲದ ಬಂಡಿ ಉತ್ಸವ, ದಿನಾಂಕ 21ರ ಗುರುವಾರ ಓಕುಳಿ ಕಾರ್ಯಕ್ರಮ ನಡೆಯಲಿದೆ.
ಸಿಇಟಿ, ನೀಟ್ : ಎಬಿವಿಪಿ ತರಬೇತಿ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ದೃಶ್ಯಕಲಾ ಮಹಾವಿದ್ಯಾಲಯದ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಇದೇ ದಿನಾಂಕ 28 ರಿಂದ ಉಚಿತ ಸಿಇಟಿ ಮತ್ತು ನೀಟ್ ತರಬೇತಿ ಪ್ರಾರಂಭವಾಗಲಿದೆ.
ಕರ್ನಾಟಕ ರಾಜ್ಯ ವಕ್ಫ್ ಪರಿಷತ್ ಸದಸ್ಯರಾಗಿ ಘನಿ ತಾಹೇರ್ ನೇಮಕ
ಕರ್ನಾಟಕ ರಾಜ್ಯ ವಕ್ಫ್ ಪರಿ ಷತ್ ಸದಸ್ಯರನ್ನಾಗಿ ನಗರದ ಅಬ್ದುಲ್ ಘನಿ ತಾಹೇರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ನಿರ್ದೇಶಕರಾಗಿ ಸಿರಾಜ್
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಅಧೀನ ದಲ್ಲಿ ಬರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ನಿರ್ದೇಶಕರನ್ನಾಗಿ ನಗರದ ಮೊಹಮ್ಮದ್ ಸಿರಾಜ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿ ಸಿದೆ. ಈ ನಿಗಮಕ್ಕೆ ಸಿರಾಜ್ ಸೇರಿದಂತೆ ಐವರನ್ನು ನಿರ್ದೇಶಕರನ್ನಾಗಿ ಸರ್ಕಾರ ನೇಮಕ ಮಾಡಿದೆ.
ನಾಗಮ್ಮರಿಗೆ ವನಿತಾ ಸಾಹಿತ್ಯ ವೇದಿಕೆ ಸಂತಾಪ
ಮಾಜಿ ಸಚಿವರಾದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರ ನಿಧನಕ್ಕೆ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಅಂಚೆ ವಿಭಾಗೀಯ ಡಾಕ್ ಅದಾಲತ್
ಸಾರ್ವಜನಿಕರ ಮತ್ತು ಅಂಚೆ ಗ್ರಾಹಕರ ಅಂಚೆ ಸೇವೆಗಳಿಗೆ ಸಂಬಂಧಿಸಿದ ದೂರು ಮತ್ತು ಸಲಹೆಗಳನ್ನು ಪಡೆಯಲು ಇದೇ ದಿನಾಂಕ 20 ರಂದು ಸಂಜೆ 4 ಗಂಟೆಗೆ ನಗರದ ಮಂಡಿಪೇಟೆಯ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಡಾಕ್ ಅದಾಲತ್ ನಡೆಯಲಿದೆ.
ಹರಿಹರದಲ್ಲಿ ಇಂದು ಕದಳಿ ಮಹಿಳಾ ವೇದಿಕೆಯಿಂದ ಮಹಿಳಾ ದಿನಾಚರಣೆ
ಹರಿಹರ ತಾಲ್ಲೂಕು ಕದಳಿ ಮಹಿಳಾ ವೇದಿಕೆಯ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಎಚ್.ಕೆ.ವಿ. ಸಮುದಾಯ ಭವನದಲ್ಲಿ ಸಂಜೆ 4 ಕ್ಕೆ ಇಂದು ನಡೆಯಲಿದೆ.
ರಾಣೇಬೆನ್ನೂರಿನಲ್ಲಿಂದು ಹೃದಯ ತಪಾಸಣೆ
ಕಾಕಿ ಜನಸೇವಾ ಸಂಸ್ಥೆ, ಜೆಸಿ, ವರ್ತಕರ ಸಂಘ ಮತ್ತು ಕನ್ನಡ ಸಂಘಗಳು ಸೇರಿ ಇಂದು ಪುನೀತ್ ಹುಟ್ಟು ಹಬ್ಬವನ್ನು ಹೃದಯ ತಪಾಸಣೆ ಶಿಬಿರದೊಂದಿಗೆ ಆಚರಿಸುತ್ತಿದ್ದಾರೆ.
ತಾರೇಹಳ್ಳಿಯಲ್ಲಿ ನಾಡಿದ್ದು ರಥೋತ್ಸವ
ಜಗಳೂರು ತಾಲ್ಲೂಕಿನ ತಾರೇಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಮಹಾರಥೋತ್ಸವವು ಇದೇ ದಿನಾಂಕ 20ರ ಬುಧವಾರ ಸಂಜೆ 6.30ಕ್ಕೆ ನಡೆಯಲಿದೆ.
ಗೋವುಗಳನ್ನು ಕಸಾಯಿ ಖಾನೆಗೆ ಕಳುಹಿಸಬೇಡಿ
ದೇಶದಲ್ಲಿ ಗೋವುಗಳ ಸಂರಕ್ಷಣೆಯಾಗಬೇಕು. ಅವುಗಳು ಕಸಾಯಿಖಾನೆಗೆ ಹೋಗುವುದನ್ನು ನಿಲ್ಲಿಸಬೇಕು ಎಂದು ಉಡುಪಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದಂಗಳವರು ನುಡಿದರು.
ವನಿತಾ ಸಮಾಜದ ಡಿಜಿಟಲ್ ಲೈಬ್ರರಿಗೆ 25 ರಂದು ಚಾಲನೆ
ನಗರದ ವನಿತಾ ಸಮಾಜದ ವತಿಯಿಂದ ಇದೇ ದಿನಾಂಕ 25 ರಂದು `ವನಿತಾ ಡಿಜಿಟಲ್ ಲೈಬ್ರರಿ' ಆರಂಭಿಸಲಾಗುವುದು ಲೈಬ್ರರಿ ಅಧ್ಯಕ್ಷರಾದ ರೇಖಾ ಪ್ರಸನ್ನಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಡಗಲಿ ಬಳಿ ಅಪಘಾತ : ಸಾವು
ಹೂವಿನಹಡಗಲಿ : ಚಾಲಕನ ನಿಯಂತ್ರಣ ತಪ್ಪಿ ಸಿಲಿಂಡರ್ ವಾಹನ ಪಲ್ಟಿಯಾಗಿ ಸಪ್ಲೈಯರ್ ಸ್ಥಳದಲ್ಲೇ ಸಾವಿಗೀ ಡಾದ ಘಟನೆ ಹಿರೇಹಡಗಲಿ ಹಾಗೂ ಹಗರನೂರು ಮಧ್ಯೆ ಸಂಭವಿ ಸಿದೆ. ಹಿರೇಹಡಗಲಿ ಗ್ರಾಮದ ಬೀರಬ್ಬಿ ಕಾಶೀಂಸಾಬ್ (40) ತಂದೆ ಪಕ್ಕೀರಸಾಬ್ ಮೃತಪಟ್ಟ ವ್ಯಕ್ತಿ.
ಮಲೇಬೆನ್ನೂರು : ಪಾನಿಪುರಿ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕನ ಸಾವು
ಮಲೇಬೆನ್ನೂರು : ಪಟ್ಟಣದಲ್ಲಿ ಗುರುವಾರ ಪಾನಿಪುರಿ ಸೇವಿಸಿ ವಾಂತಿಭೇದಿಯಿಂದ ಅಸ್ವಸ್ಥರಾಗಿ ದ್ದ 19 ಮಕ್ಕಳ ಪೈಕಿ ಒಂದು ಮಗು ಭಾನುವಾರ ಮೃತಪಟ್ಟಿದೆ.
ಇಂದಿನಿಂದ ಕಾಲಸಿದ್ಧಿ ಹನುಮಾನ್ ದೇವಾಲಯ ಉದ್ಘಾಟನಾ ಕಾರ್ಯಕ್ರಮ
ಚನ್ನಗಿರಿ ಬಿ.ಹೊಸಹಳ್ಳಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಸಿದ್ಧಿ ಹನುಮಾನ್ ದೇವಸ್ಥಾನದ ಉದ್ಘಾಟನಾ ಸಮಾರಂಭ ಜರುಗಲಿದೆ.
ಎಲ್ಲಾ ಮಕ್ಕಳಿಗೂ ಧಾರ್ಮಿಕ ಅಭ್ಯಾಸ
ನಮ್ಮ ಭಾರತೀಯ ಸಂಸ್ಕೃತಿಯ ಪದ್ಧತಿಯನ್ನು ಎಲ್ಲಾ ಮಕ್ಕಳು ಅವಶ್ಯಕವಾಗಿ ಕಲಿಯಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕೆಂದು ರಾಯರ ಮಠದ ಪ್ರಧಾನ ಅರ್ಚಕ ಕೃಷ್ಣಾಚಾರ್ ಹೇಳಿದರು.
ನಾಗಮ್ಮ ಕೇಶವಮೂರ್ತಿ ನಿಧನ : ಎಸ್ಸೆಸ್, ಎಸ್ಸೆಸ್ಸೆಂ ಸಂತಾಪ
ಮಾಜಿ ಸಚಿವರಾದ ಶ್ರೀಮತಿ ನಾಗಮ್ಮ ಕೇಶವಮೂರ್ತಿಯವರ ನಿಧನಕ್ಕೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾನವೀಯತೆ ಮೆರೆದ ಡಾ. ರವಿಕುಮಾರ್
ಸಮೀಪದ ಗೋಣಿವಾಡದ ಸೋಮೇಶ್ವರ ಸಂಸ್ಥೆಯ ಬಳಿ ಬಿಸಿಲಿನ ಬೇಗೆಯಿಂದ ಬಳಲಿ ರಸ್ತೆ ಬದಿ ನಿಸ್ತೇಜರಾಗಿದ್ದ ಮಹಿಳೆಗೆ ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಟಿ.ಜಿ. ಸಂಜೀವಿನಿಯಾಗಿದ್ದಾರೆ
ಪ್ರಧಾನಿ ಮೋದಿ ಸಾಧನೆ ಮನೆ-ಮನೆಗೆ ತಿಳಿಸಿ
ಹರಪನಹಳ್ಳಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಗಳನ್ನು ಬಿಜೆಪಿ ಕಾರ್ಯಕರ್ತರು ಮನೆ–ಮನೆಗೆ ತಿಳಿಸುವ ಮೂಲಕ ಪಕ್ಷಕ್ಕೆ ಬಲ ತುಂಬಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
ರಾಜಕೀಯದಲ್ಲಿ ಒಂದೇ ಪಕ್ಷದಲ್ಲಿ ದೃಢವಾಗಿದ್ದರೆ ಗೌರವ : ಶಾಸಕ ದೇವೇಂದ್ರಪ್ಪ
ಜಗಳೂರು : ರಾಜಕೀಯದಲ್ಲಿ ಪಕ್ಷ ಎಂಬುದು ತಾಯಿಯಿದ್ದಂತೆ. ದೃಢವಾಗಿ ಒಂದೇ ಪಕ್ಷಕ್ಕೆ ಸೀಮಿತವಾಗಿದ್ದರೆ ಕಾರ್ಯಕರ್ತ ರಿಗೆ, ಮುಖಂಡರಿಗೆ ಉನ್ನತ ಸ್ಥಾನ ಸಿಗುವುದು ಖಚಿತ, ಘನತೆ ಗೌರವ ಹೆಚ್ಚಿಸುತ್ತದೆ ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.
ಮಲೇಬೆನ್ನೂರಿನಲ್ಲಿ ಫ್ಲೆಕ್ಸ್ ತೆರವು ಗೊಳಿಸಲು ಅಡ್ಡಿ : ರಸ್ತೆ ತಡೆ
ಮಲೇಬೆನ್ನೂರು : ಪಟ್ಟಣದಲ್ಲಿ ಗ್ರಾಮದೇವತೆ ಹಬ್ಬಕ್ಕೆ ಸ್ವಾಗತ ಕೋರಿ ಹಾಕಿದ್ದ ಫೆಕ್ಸ್ಗಳನ್ನು ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ಯುವಕರ ಗುಂಪೊಂದು ರಸ್ತೆ ತಡೆ ನಡೆಸಿದ ಘಟನೆ ಭಾನುವಾರ ನಡೆಯಿತು.
ಎನ್ಯು ಆಸ್ಪತ್ರೆಯಿಂದ ಯಶಸ್ವಿ 10 ಕಿಡ್ನಿ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆ
ಶಿವಮೊಗ್ಗದ ಎನ್ಯು ಆಸ್ಪತ್ರೆಯು 10 ಕಿಡ್ನಿ ಟ್ರಾನ್ಸ್ಪ್ಲಾಂಟ್ ಚಿಕಿತ್ಸೆಯಲ್ಲಿ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ. ಪ್ರವೀಣ್ ಮಾಳವದೆ (ಅಸೋಸಿಯೇಟ್ ಮೆಡಿಕಲ್ ಡೈರೆಕ್ಟರ್ ಅಂಡ್ ಟ್ರಾನ್ಸ್ ಪ್ಲಾಂಟ್ ಫಿಸಿಷಿಯನ್) ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೊನ್ನಾಳಿ : ಬಿ.ಎಸ್.ವೈ. ನೇತೃತ್ವದಲ್ಲಿ ಜಿಲ್ಲೆಯ ಸಮಸ್ಯೆ ಶೀಘ್ರ ಇತ್ಯರ್ಥ
ಹೊನ್ನಾಳಿ : ವಿಪಕ್ಷ ನಾಯಕ ಆರ್.ಅಶೋಕ್, ಜಿಲ್ಲಾ ಉಸ್ತುವಾರಿಗಳು ಮತ್ತು ಸಮಾಜದ ಮುಖಂಡರಾದ ಭೈರತಿ ಬಸವರಾಜ್ ಮತ್ತಿತರೆ ಪ್ರಮುಖರು ಈ ಹಿಂದೆ ಪಕ್ಷಕ್ಕಾಗಿ ದುಡಿದಿದ್ದೀರಿ ಮತ್ತೆ ತಾವು ಪಕ್ಷಕ್ಕೆ ಮರಳಬೇಕೆಂದು ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಶುಕ್ರವಾರ ದಾವಣಗೆರೆ ಕಾರ್ಯಕ್ರಮದಲ್ಲಿ ಬಿಜೆಪಿಗೆ ಮರಳಿದ್ದಾಗಿ ಜಿ.ಪಂ. ಮಾಜಿ ಸದಸ್ಯ ಎಂ.ಆರ್.ಮಹೇಶ್ ತಿಳಿಸಿದರು.
ಕುಂಬಾರ ಅಭಿವೃದ್ಧಿ ಮಂಡಳಿ ಉನ್ನತಿಗೆ ಯೋಜನೆ ರೂಪಿಸಲು ಒತ್ತಾಯ
ಹರಿಹರ : ಕುಂಬಾರ ಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರು ಮತ್ತು ಅನುದಾನ ನೀಡುವ ಮೂಲಕ ಸಮುದಾಯದ ಉನ್ನತಿಗೆ ಕಾರ್ಯಕ್ರಮ ರೂಪಿಸಬೇಕೆಂದು ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಡಾ. ರವಿ ಕುಂಬಾರ್ ಹೇಳಿದರು.
ಲೋಕ ಅದಾಲತ್ನಲ್ಲಿ ಮತ್ತೆ ಒಂದಾದ ಜೋಡಿಗಳು
ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಇಂದು ಸಂಜೆ 5 ಕ್ಕೆ ಶ್ರೀ ಡಾ. ಸದ್ಯೋಜ್ಯಾತ ಶಿವಾಚಾರ್ಯ ಹಿರೇಮಠದ ಆವ ರಣದಲ್ಲಿ 150ನೇ ಸೈಕಲ್ ವಿತರಣೆ ಅಂಗವಾಗಿ ಇಂದು 50 ಸೈಕ ಲ್ಗಳ ವಿತರಣಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ.
ಇಲ್ಲಿ ಸರಗ ಹರಿಯುವುದಿಲ್ಲ: ಕೋಣದ ಬಲಿ ಇಲ್ಲ, ಅತ್ತಿಗೆರೆಯಲ್ಲಿ ಸಾತ್ವಿಕತೆ ಮೆರೆವ ದುರುಗಮ್ಮನ ಜಾತ್ರೆ
ಮಾರಮ್ಮ, ದುರುಗಮ್ಮನ ಜಾತ್ರೆಗಳೆಂದರೆ, ಕುರಿ, ಕೋಳಿ, ಕೋಣ ಬಲಿಯದೇ ಕಾರುಬಾರು. ಊರ ಗಡಿ ಸುತ್ತಲೂ ಸರಗ ಚೆಲ್ಲಿ ಭಕ್ತಿ ಪ್ರದರ್ಶಿಸುವುದು ಸಾಮಾನ್ಯ. ಇದಕ್ಕೆ ಅಪವಾದ ಎಂಬಂತೆ ತಾಲ್ಲೂಕಿನ ಅತ್ತಿಗೆರೆಯಲ್ಲಿ ಸಾರ್ವಜನಿಕ ಪ್ರಾಣಿ ಬಲಿ ನಡೆಸದೇ, ಮಾಂಸಹಾರದ ಎಡೆ ಹಾಕದೇ ಸಾತ್ವಿಕವಾಗಿ ಹಬ್ಬ ನಡೆಸುವುದು ವಿಶೇಷ.
ಮಾಯಕೊಂಡ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ 60 ಕೋಟಿ ರೂ. ಅನುದಾನ ಮಂಜೂರು
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಹಾಳಾದ ರಸ್ತೆಗಳ ಅಭಿವೃದ್ಧಿ ಮತ್ತು ಶಾಲೆ, ಕಾಲೇಜು, ಭವನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಅಂದಾಜು 60 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದರು.
ಉಕ್ಕಡಗಾತ್ರಿಯಲ್ಲಿ ವೈಭವದ ಬೆಳ್ಳಿ ರಥೋತ್ಸವ, ಪಾಲಿಕೋತ್ಸವ
ಮಲೇಬೆನ್ನೂರು : ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ನಡೆಯುತ್ತಿರುವ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಜಾತ್ರೆ ಅಂಗವಾಗಿ ಶನಿವಾರ ಬೆಳಗ್ಗೆ ಅಜ್ಜಯ್ಯನ ಬೆಳ್ಳಿ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ಜರುಗಿತು.
ಶಿಕ್ಷಣದ ಜೊತೆಗೆ ಆರೋಗ್ಯವೂ ಮುಖ್ಯ
ನಗರದ ಆರ್.ಜಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಎನ್.ಎಸ್.ಎಸ್ ಘಟಕ-1, ವಾಸನ್ ಕಣ್ಣಿನ ಆಸ್ಪತ್ರೆ, ಡಾ. ಜಯೇಶ್ ದಂತ ವೈದ್ಯರು, ಚರ್ಮ ರೋಗ ತಜ್ಞ ಡಾ. ಭಕ್ತವತ್ಸಲ ಅವರುಗಳ ಸಹಯೋಗದಲ್ಲಿ ದಂತ, ಚರ್ಮ, ಕಣ್ಣಿನ ಉಚಿತ ತಪಾಸಣಾ ಶಿಬಿರವನ್ನು ಆರ್.ಜಿ. ಕಾಲೇಜಿನಲ್ಲಿ ಇಂದು ನಡೆಸಲಾಯಿತು.
ಲೋಕಸಭೆ ಗೆಲುವಿಗೆ ಕಾರ್ಯಕರ್ತರು ಸಂಘಟಿತರಾಗಬೇಕು
ರಾಣೇಬೆನ್ನೂರು : ಕಾರ್ಯ ಕರ್ತರು ಸಂಘಟಿತರಾಗಿ ಲೋಕಸಭೆ ಚುನಾವಣೆ ಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಭಾರೀ ಅಂತರದ ಗೆಲುವು ಸಾಧಿಸುವುದರೊಂದಿಗೆ ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಅರುಣಕುಮಾರ್ ಪೂಜಾರ್ ಮನವಿ ಮಾಡಿದರು.
ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವಕ್ಕೆ ಸಂಭ್ರಮದ ತೆರೆ
ಗುರು ರಾಯರ ಪಟ್ಟಾಭಿಷೇಕ ಮತ್ತು ವರ್ಧಂತಿಯ ಸಂಸ್ಮರಣೆಗಾಗಿ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ 31 ನೇ ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವ ಭಾನುವಾರ ಸಂಭ್ರಮದ ತೆರೆ ಕಂಡಿತು.
ಮಲೇಬೆನ್ನೂರಿನಲ್ಲಿ 19ರಂದು ಅಮ್ಮನ ಹಬ್ಬ
ಮಲೇಬೆನ್ನೂರು : ಪಟ್ಟಣದ ಗ್ರಾಮದೇವತೆಗಳಾದ ಏಕನಾಥೇಶ್ವರಿ, ಕೋಡಿ ಮಾರೇಶ್ವರಿ ಮತ್ತು ಹಟ್ಟಿ ದುರ್ಗಾಂಬಿಕೆ ಅಮ್ಮನವರ ಜಾತ್ರಾ ಮಹೋತ್ಸವವನ್ನು (ಅಮ್ಮನ ಹಬ್ಬ) ನಾಳೆ ದಿನಾಂಕ 16 ರಿಂದ 22 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಉತ್ಸವ ಸಮಿತಿಯ ಭರಮಳ್ಳಿ ಭರಮಗೌಡ್ರು ತಿಳಿಸಿದರು.
ಪಾನಿಪೂರಿ ಸೇವಿಸಿ ಮಕ್ಕಳು ಅಸ್ವಸ್ಥ : ಆಸ್ಪತ್ರೆಗೆ ದಾಖಲು
ಮಲೇಬೆನ್ನೂರು : ಪಾನಿಪೂರಿ ಸೇವನೆ ಮಾಡಿದ್ದರು ಎನ್ನಲಾದ 19 ಮಕ್ಕಳು ವಾಂತಿ-ಬೇಧಿಯಿಂದ ಅಸ್ವಸ್ಥಗೊಂಡ ಘಟನೆ ಗುರುವಾರ ತಡರಾತ್ರಿ ಮಲೇಬೆನ್ನೂರಿನಲ್ಲಿ ನಡೆದಿದೆ.
3.5 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಮ್ಮನಹಟ್ಟಿ ಕೆರೆ ಅಭಿವೃದ್ಧಿ
ಜಗಳೂರು : ತಾಲ್ಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ಕೆರೆಗೆ ತಡೆಗೋಡೆ ನಿರ್ಮಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಬಿ. ದೇವೇಂದ್ರಪ್ಪ ತಿಳಿಸಿದರು.
ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಬೇಕು
ಜಗಳೂರು : ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಬೇಕು. ಪರಿಪೂರ್ಣದೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮ. ಸಮರ ಜೀವನ ಅಮರ ಜೀವನವಾಗಲು ಸಂಸ್ಕಾರ, ಸದ್ವಿಚಾರಗಳ ಅವಶ್ಯಕತೆಯಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಪ್ರಣಾಳಿಕೆಯ ಬದಲು ವಿಕಸಿತ ಸಂಕಲ್ಪ
ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಣಾಳಿಕೆಯ ಬದಲು, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ `ಸಂಕಲ್ಪ ಪತ್ರ' ಬಿಡುಗಡೆ ಮಾಡಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕ ಅವಿನಾಶ್ ಹೇಳಿದರು.
ಹರಪನಹಳ್ಳಿ : ಕೊನೆ ಉಸಿರಿರುವ ತನಕ ಕನ್ನಡ ಪರ ಹೋರಾಟ
ಹರಪನಹಳ್ಳಿ : ಕನ್ನಡಿಗರಿಗೆ, ಕನ್ನಡ ನುಡಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ನಾವು ಯಾರ ಅಡಿಯಾಳೂ ಅಲ್ಲ. ನಮಗೆ ನಮ್ಮದೇ ಆದ ಸಂಸ್ಕೃತಿ ಪರಂಪರೆ ಇದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಹೇಳಿದರು.
ಕಾನೂನು ಪ್ರಕಾರ ಮಹಾದ್ವಾರ, ವೃತ್ತ
ಭಾನುವಳ್ಳಿಯಲ್ಲಿ ತೆರವುಗೊಳಿಸಿರುವ ಮದಕರಿ ನಾಯಕ ಮಹಾದ್ವಾರ ಹಾಗೂ ವಾಲ್ಮೀಕಿ ವೃತ್ತ ಸೇರಿದಂತೆ ಇತರೆ ವೃತ್ತಗಳನ್ನು ಕಾನೂನು ಪ್ರಕಾರ ಅಧಿಕೃತವಾಗಿ ನಿರ್ಮಿಸಿಕೊಡುತ್ತೇವೆ. ಅಲ್ಲಿಯವರೆಗೆ ತಾಳ್ಮೆ ಮತ್ತು ಶಾಂತಿಯಿಂದಿರಿ
ಮಲೇಬೆನ್ನೂರಿನಲ್ಲಿ ಸಂಭ್ರಮದ ರಥ
ಮಲೇಬೆನ್ನೂರು : ಇಲ್ಲಿನ ಬಸವೇಶ್ವರ ದೇವರ ರಥೋತ್ಸವವು ಗುರುವಾರ ಸಂಜೆ ಪಟ್ಟಣದ ಎಲ್ಲಾ ದೇವರುಗಳ ಒಡಗೂಡಿ ಹಾಗೂ ಅಪಾರ ಜನರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಹೊರ ಗುತ್ತಿಗೆ ನೌಕರರ ನೇರ ಪಾವತಿ ವಿಚಾರದಲ್ಲಿ ಕಡೆಗಣನೆ : ವಿಷಾದ
ಹೊರ ಗುತ್ತಿಗೆ ನೌಕರ ವರ್ಗದ ನೇರ ಪಾವತಿ ಪ್ರಕ್ರಿಯೆಯಲ್ಲಿ ಗಾರ್ಡನ್ ವಿಭಾಗದ ಹೊರ ಗುತ್ತಿಗೆ ನೌಕರರ ಪ್ರಸ್ತಾವನೆ ಇಲ್ಲದಿರುವುದು ಮತ್ತು ಕಡೆಗಣಿಸಿರುವುದು ವಿಷಾದದ ಸಂಗತಿಯಾಗಿದೆ.
ಕೆಎಸ್ಆರ್ಟಿಸಿ ಘಟಕ 1ರಲ್ಲಿ ಮಹಿಳಾ ದಿನಾಚರಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಾವಣಗೆರೆ ವಿಭಾಗದ ಘಟಕ 01 ರಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಜಿ.ಎಂ.ವಿಶ್ವವಿದ್ಯಾಲಯದ ವತಿಯಿಂದ ನೀರು ಉಳಿಸಿ, ಜೀವ ಉಳಿಸಿ ಬೈಕ್ ರ್ಯಾಲಿ
ನೀರು ಉಳಿಸಿ, ಜೀವ ಉಳಿಸಿ, ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ ಜಿಎಂಐಟಿ ಮತ್ತು ಜಿ.ಎಂ. ವಿಶ್ವವಿದ್ಯಾಲಯ ನೇತೃತ್ವದಲ್ಲಿ ದಾವಣಗೆರೆ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಬೈಕ್ ರ್ಯಾಲಿ ಮೂಲಕ ಜಾಗೃತಿ ಮೂಡಿಸಲಾಯಿತು.
ನಮ್ಮೆಲ್ಲರ ಹೃದಯದಲ್ಲಿ ರಾಮೋತ್ಸವ ನಡೆಯಬೇಕು
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿ ಶತಮಾನಗಳ ಕನಸು ನನಸಾಗಿದೆ. ಇನ್ನು ಮುಂದೆ ನಮ್ಮೆಲ್ಲರ ಹೃದಯದಲ್ಲಿ ರಾಮೋತ್ಸವ ನಡೆಯಬೇಕು ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಹೇಳಿದರು.
ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದ ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರು ಶ್ರೀ ರಂಭಾಪುರಿ ಜಗದ್ಗುರುಗಳನ್ನು ನಿನ್ನೆ ನಗರದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು.