ಕಾಂಗ್ರೆಸ್ ಸೇರಲು ಹಣ ಪಡೆದಿಲ್ಲ : ಸೋಗಿ

ದಾವಣಗೆರೆ, ಏ. 26 – ನಾನು ಹಣ ಪಡೆದು ಕಾಂಗ್ರೆಸ್ ಸೇರಿದ್ದೇನೆ ಎಂದು ಆರೋಪಿಸಿರುವ ಸಂಸದ ಜಿ.ಎಂ. ಸಿದ್ದೇಶ್ವರ ಅವರು ನಗರ ದೇವತೆ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನಕ್ಕೆ ಬಂದು ಗಂಟೆ ಭಾರಿಸಿ ಪ್ರಮಾಣ ಮಾಡಲಿ ಎಂದು ಮಹಾನಗರ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರಲು ಒಂದು ನಯಾಪೈಸೆ ಹಣ ಪಡೆದಿಲ್ಲ. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಅಭಿವೃದ್ಧಿ ರಾಜಕಾರಣ ನೋಡಿ ತಾವು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದರು.

ಈ ಬಗ್ಗೆ ಶುಕ್ರವಾರ ಸಂಜೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ತೆರಳಿ ತೊಯ್ದ ಬಟ್ಟೆಯಲ್ಲಿ ಗಂಟೆ ಒಡೆದು ಪ್ರಮಾಣ ಮಾಡುತ್ತೇನೆ. ಸಂಸದರು ಸಹ ದಿನಾಂಕ ಗೊತ್ತುಪಡಿಸಿ ಪ್ರಮಾಣ ಮಾಡಲಿ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ, ಹೆಚ್.ಕೆ. ಬಸವರಾಜ್, ಉಚ್ಚೆಂಗಪ್ಪ, ಅಣಜಿ ಪ್ರಶಾಂತ್ ಉಪಸ್ಥಿತರಿದ್ದರು.

error: Content is protected !!