ವಾರ ಭವಿಷ್ಯ ದಿನಾಂಕ : 02.02.2025 ರಿಂದ 08.02.2025ರ ವರೆಗೆ

ವಾರ ಭವಿಷ್ಯ ದಿನಾಂಕ : 02.02.2025 ರಿಂದ 08.02.2025ರ ವರೆಗೆ

 ವಾರ ಭವಿಷ್ಯ ದಿನಾಂಕ : 02.02.2025 ರಿಂದ 08.02.2025ರ ವರೆಗೆ - Janathavaniಮೇಷ ರಾಶಿ :

(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

ಈ ವಾರ ಅನೇಕ ಹೊಸ ಸ್ನೇಹಿತರ ಸಂಪರ್ಕವಾಗಲಿದ್ದು, ಅವರಿಂದಾಗಿ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಆದರೆ ಅವರ ಸಲಹೆ ಸೂಚನೆಗಳು ಏನೇ ಇದ್ದರೂ ಅಂತಿಮ ನಿರ್ಧಾರ ನಿಮ್ಮದೇ ಆಗಿರಲಿ. ಆದಾಯದಲ್ಲಿ ಏರಿಕೆ ಕಂಡುಬರಲಿದೆ. ಉದ್ಯಮಿಗಳು ತಮ್ಮ ಕೈಕೆಳಗಿನ ಕಾರ್ಮಿಕರ ಕುಂದು ಕೊರತೆಗಳನ್ನು ಆಲಿಸುವುದು ಮೇಲು. ಸಿವಿಲ್ ಇಂಜಿನಿಯರ್‍ಗಳಿಗೆ ಉತ್ತಮ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿದೆ. ಮತ್ತೊಬ್ಬರ ವೈಯಕ್ತಿಕ ವಿಚಾರದಲ್ಲಿ ನಿಮ್ಮ ಪ್ರವೇಶ ಬೇಡ ಇಲ್ಲವಾದಲ್ಲಿ ಧನ ಮಾನ ಅಥವಾ ಎರಡರ ನಷ್ಟವಾಗಬಹುದು. ಭಾನು-ಮಂಗಳ-ಬುಧ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 02.02.2025 ರಿಂದ 08.02.2025ರ ವರೆಗೆ - Janathavaniವೃಷಭ ರಾಶಿ :

(ಇ.ಉ.ಎ.ಒ.ವ.ವಿ.ವು.ವೆ.ವೋ)

ವಿದ್ಯಾವಂತರಾದ ಪದವೀಧರರಿಗೆ ಪ್ರಭಾವೀ ವ್ಯಕ್ತಿಗಳ ವಶೀಲಿಯಿಂದಾಗಿ ಸಾಧಾರಣ ವೇತನದ ಕೆಲಸ ಸಿಗಲಿದೆ. ಸದ್ಯಕ್ಕೆ ಅಲ್ಲೇ ತೃಪ್ತಿ ಕಾಣುವುದು ಮೇಲು.ಸರ್ಕಾರೀ ನೌಕರರಿಗೆ ಕಾಣದ ಕೈಗಳ ಪ್ರಭಾವದಿಂದಾಗಿ ಅನಪೇಕ್ಷಿತ ಸ್ಥಳಗಳಿಗೆ ವರ್ಗಾವಣೆ ಯಾಗಲಿದ್ದು, ಅಲ್ಲಿ ಹೊಂದಿಕೊಳ್ಳಲು ತುಸು ಸಮಯಬೇಕಾಗಬಹುದು. ಆಗಬೇಕಾಗಿರುವ ಕೆಲಸ, ಕಾರ್ಯಗಳನ್ನು ವಿನಾಕಾರಣ ಮುಂದೂಡಬೇಡಿ. ರೈತಾಪಿ ಜನರ ಮನೆಗಳಲ್ಲಿ ಮಂಗಳ ಕಾರ್ಯಗಳು ಜರುಗಲಿವೆ. ಆದಾಯದ ಮೂಲದಲ್ಲಿ ಕ್ರಮೇಣ ಹೆಚ್ಚಳ ಕಂಡುಬರಲಿದೆ. ಮನೆಯ ಸದಸ್ಯರೊಂದಿಗೆ ಹೊಂದಿಕೊಂಡು ಹೋಗುವುದು ಉತ್ತಮ. ಸೋಮ-ಗುರು-ಶನಿ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 02.02.2025 ರಿಂದ 08.02.2025ರ ವರೆಗೆ - Janathavaniಮಿಥುನ ರಾಶಿ :

(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ಪರಿಣತಿ ಪಡೆದ ಯುವಕರನ್ನು ಪಾರಂಪರಿಕ ಉದ್ಯಮಗಳಲ್ಲಿ ತೊಡಗಿಸಿಕೊಳ್ಳುವುದು ಉತ್ತಮ ನಿರ್ಧಾರವಾಗಲಿದೆ ಮತ್ತು ನಿಮಗೂ ತುಸು ವಿಶ್ರಾಂತಿ ಸಿಗಲಿದೆ. ಈ  ಹಿಂದೆ ಆರಂಭಿಸಿದ್ದ ಕೆಲಸ ಕಾರ್ಯಗಳಿಗೆ ಪ್ರಭಾವೀ ವ್ಯಕ್ತಿಗಳಿಂದ ತೊಂದರೆಯಾಗಲಿದೆ. ಆದ್ದರಿಂದ ಸನ್ನಿವೇಶವನ್ನು ಜಾಣತನದಿಂದ ನಿಭಾಯಿಸಿರಿ. ಪ್ರಥಮ ದರ್ಜೆ ಸರ್ಕಾರಿ ಗುತ್ತಿಗೆದಾರರಿಗೆ ಸರ್ಕಾರದಿಂದ ಬರಬೇಕಾಗಿರುವ  ಬಾಕಿಹಣದಲ್ಲಿ ಸ್ವಲ್ಪಭಾಗ ಸಂದಾಯವಾಗಲಿದೆ. ಯಂತ್ರೋಪಕರಣ ಬಿಡಿಭಾಗಗಳ ಮಾರಾಟದಿಂದ ಹೆಚ್ಚಿನ ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು, ಕುಲದೇವತಾ ದರ್ಶನ ಮಾಡಿ. ಸೋಮ-ಬುಧ-ಗುರು-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 02.02.2025 ರಿಂದ 08.02.2025ರ ವರೆಗೆ - Janathavaniಕರ್ಕಾಟಕ ರಾಶಿ :

(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ಪದವೀಧರರಾದ ಯುವಕರಿಗೆ ಸೂಕ್ತ ಉದ್ಯೋಗ ಸಿಗದೇ ಪರಿತಪಿಸುವರು. ಮಹಿಳಾ ಉದ್ಯಮಿಗಳು ತಮ್ಮ ಸಾಧನೆಯ ಗುರಿ ತಲುಪಲು ಹರಸಾಹಸಪಡುವರು, ಕೆಲವೊಮ್ಮೆ ನಿಮ್ಮ ಮುಂಗೋಪವೇ ನಿಮ್ಮ ಯಶಸ್ಸಿನ ಹಾದಿಗೆ ಮುಳ್ಳಾಗಬಹುದು. ಧ್ಯಾನ ಮೊದಲಾದವುಗಳಿಂದ ಮಾತ್ರ ಅದನ್ನು ತಹಬಂದಿಗೆ ತರಲು ಸಾಧ್ಯ ಮನೆಯಲ್ಲಿರುವ ಹಿರಿಯರೊಂದಿಗೆ ಹೊಂದಿಕೊಂಡು ಹೋಗುವುದರ ಹೊರತು, ಅನ್ಯ ಮಾರ್ಗವಿಲ್ಲ. ಹೊಸಮನೆ ಖರೀದಿಸುವ ಮೊದಲು ಅದರ ದಾಖಲೆಗಳನ್ನು ಎರಡೆರಡು ಬಾರಿ ಪರಿಶೀಲಿಸುವುದು ಉತ್ತಮ. ಈ ವಿಷಯದಲ್ಲಿ ಸ್ನೇಹಿತರಿಂದ ಸಲಹೆ ಸಿಗಲಿದೆ. ಭಾನು-ಸೋಮ-ಬುಧ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 02.02.2025 ರಿಂದ 08.02.2025ರ ವರೆಗೆ - Janathavaniಸಿಂಹ ರಾಶಿ :

(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ಹಣಕಾಸಿನ ವಿಚಾರದಲ್ಲಿ ಸಂಗಾತಿಯೊಂದಿಗೆ ಬಿರುಸಿನ ಮಾತುಕತೆಯಾಗಲಿದೆ. ಸಂಯಮದಿಂದ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿ, ಪ್ರಸಂಗ ಬಂದಲ್ಲಿ  ಅನುಭವಿಗಳಾದ ಸ್ನೇಹಿತರ ಸಲಹೆ, ಸೂಚನೆ ಪಡೆಯಿರಿ. ಗೃಹ ನಿರ್ಮಾಣ ವಸ್ತುಗಳ ಮಾರಾಟಗಾರರು ತಮ್ಮ ವ್ಯವಹಾರವನ್ನು ಅಭಿವೃದ್ಧಿಪಡಿಸಲು ಬಂಡವಾಳ ಹೂಡುವರು. ಸೋದರಿಯರಿಗೆ ಉತ್ತಮ ಸಂಬಂಧವೊಂದು ಬರಲಿದ್ದು, ಮಾತುಕತೆ ನಡೆಯಲಿದೆ.ಆದಾಯ ತಕ್ಕಮಟ್ಟಿಗಿರುವುದರಿಂದ ಹೊಸಾಲಂಕಾರಿಕ ವಸ್ತುಗಳ ಖರೀದಿಬೇಡ. ದುರ್ಗಾದೇವಿಯನ್ನು ವಿಶೇಷವಾಗಿ ಆರಾಧಿಸಿ. ಭಾನು-ಬುಧ-ಶುಕ್ರ ಶುಭ ದಿನಗಳು.

ಕನ್ಯಾ ರಾಶಿ :

(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ಹಿರಿಯರ ಮಾತನ್ನು ತಿರಸ್ಕರಿಸಿದ್ದರ ಫಲವನ್ನು ಮುಂದೆ ಅನುಭವಿಸಬೇಕಾದೀತು, ಎಲ್ಲರ ಮಾತಿಗೂ ತಲೆದೂಗುವುದರಿಂದ ಆಗುವ ಅನರ್ಥಗಳಿಗೆ ಬೆಲೆ ತೆರಬೇಕಾದೀತು.ಸಮಾಜದಲ್ಲಿ ಸ್ವಪ್ರತಿಷ್ಠೆ ತೋರಲು ಹೋಗಿ ನಗೆಪಾಟಲಿಗೀಡಾಗುವಿರಿ. ಅನಿರೀಕ್ಷಿತವಾಗಿ ಬರಲಿರುವ ಖರ್ಚು – ವೆಚ್ಚಗಳಿಗೆ ಪರದಾಡಬೇಕಾದೀತು. ಆದಾಯ ಸಾಧಾರಣವಾಗಿರುವುದರಿಂದ ದೈನಂದಿನ ಬದುಕಿಗೇನೂ ತೊಂದರೆಯಿಲ್ಲ. ಅತಿನಿರೀಕ್ಷಿತ ಶುಭ ಸಮಾಚಾರವೊಂದು ಇಷ್ಟರಲ್ಲೇ ಕೇಳಿಬರಲಿದೆ. ಮಕ್ಕಳ ಆದಾಯದಲ್ಲಿ ಕೊರತೆಯಾಗಲಿದೆ. ನವಗ್ರಹಾರಾಧನೆ ಮಾಡಿ, ದಾನ ಮಾಡುವುದು ಉತ್ತಮ. ಮಂಗಳ-ಬುಧ-ಗುರು-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 02.02.2025 ರಿಂದ 08.02.2025ರ ವರೆಗೆ - Janathavaniತುಲಾ ರಾಶಿ :

(ರ.ರಿ.ರು.ರೆ.ರೊ.ತ.ತಿ.ತು.ತೆ.)

ಈ ಹಿಂದೆ ಮತ್ಯಾರಿಗೋ ಸಹಾಯ ಮಾಡಲು ಹೋಗಿ ಜಾಮೀನಾಗಿದ್ದರ ಫಲವಾಗಿ ಈಗ ತೊಂದರೆಯನ್ನು ಅನುಭವಿಸಬೇಕಾದೀತು ಇದಕ್ಕಾಗಿ ನಿಮ್ಮ ಕೂಡಿಟ್ಟಗಂಟು ಕರಗಿ ಹೋಗಬಹುದು. ಖಾಸಗೀ ಕಂಪನಿಯಲ್ಲಿ ಬಹುಕಾಲದಿಂದ ಕೆಲಸ ಮಾಡುತ್ತಿದ್ದವರಿಗೆ ಕಾಡುತ್ತಿದ್ದ ಅಭದ್ರತೆ ದೂರವಾಗಲಿದೆ, ಅಪರಿಚಿತರೊಂದಿಗೆ ಮಹಿಳೆಯರು ಮಾಡಲಿರುವ ಹಣಕಾಸಿನ ವ್ಯವಹಾರ ಉಳಿದವರಿಗೆ ತಲೆನೋವಾಗಿ ಪರಿಣಮಿಸಲಿದೆ. ಅತಿಯಾದ ಭೋಜನಕೂಟ ಆರೋಗ್ಯಕ್ಕೆ ಮಾರಕವಾಗಬಹುದು, ಸೋದರ ವಿವಾಹಕ್ಕೆ ಇದ್ದ ಅಡಚಣೆಗಳು ದೂರವಾಗಲಿವೆ. ಬುಧ-ಶುಕ್ರ-ಶನಿ-ಶುಭದಿನಗಳು.

ವಾರ ಭವಿಷ್ಯ ದಿನಾಂಕ : 02.02.2025 ರಿಂದ 08.02.2025ರ ವರೆಗೆ - Janathavaniವೃಶ್ಚಿಕ ರಾಶಿ :

(ತೊ.ನ.ನಿ.ನು.ನೆ.ನೋ.ಯ.ಯಿ.ಯು.)

ಕಷ್ಟಪಟ್ಟು ಮುಂದೆ ಬರುತ್ತಿರುವ ನಿಮ್ಮ ಏಳಿಗೆಯನ್ನು ಕೆಲವರು ಸಹಿಸದೇ ಹೋಗಬಹುದು. ಅದರ ಬಗ್ಗೆ ಹೆಚ್ಚಿನ ಮಹತ್ವ ಕೊಡದೆ ನಿಮ್ಮ ಪಾಡಿಗೆ ನೀವಿರಿ. ಆದಾಯದ ಮೂಲದಲ್ಲಿ ನಿರೀಕ್ಷೆಗೂ ಮೀರಿದ ಹೆಚ್ಚಳ ಕಂಡುಬರುವುದರಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸ್ವಲ್ಪ ಭಾಗವನ್ನು ಉಳಿತಾಯದಲ್ಲಿ ವಿನಿಯೋಗಿಸುವುದು ಮೇಲು, ಅತಿಯಾದ ಕರಿದ ಅಥವಾ ಸಿಹಿ ಪದಾರ್ಥಗಳ ಸೇವನೆಯಿಂದ ಆರೋಗ್ಯದಲ್ಲಿ ವ್ಯತ್ಯಾಸವುಂಟಾಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಬರಲಿದ್ದು, ಉನ್ನತಾಧ್ಯಯನಕ್ಕೆ ಈಗಿನಿಂದಲೇ ಪೂರ್ವ ಸಿದ್ಧತೆ ಮಾಡಿಕೊಳ್ಳುವುದು ಮೇಲು. ಗೋ ಸೇವೆ ಮಾಡಿ. ಸೋಮ-ಮಂಗಳ-ಬುಧ-ಶುಭ ದಿನಗಳು.

ಧನು ರಾಶಿ :

(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ಅತಿಯಾದ ದೇಹಾಲಸ್ಯದಿಂದಾಗಿ ಆರೋಗ್ಯದಲ್ಲಿ ತುಸು ಏರುಪೇರಾಗಬಹುದು, ಹಾಗೆಂದ ಮಾತ್ರಕ್ಕೆ ಚಿಂತೆಬೇಡ, ಕ್ರಮೇಣ ಸರಿಹೋಗಲಿದೆ. ಅರಿವಿರದ ವಿಚಾರದ ಬಗ್ಗೆ ಮಾತನಾಡಲು ಹೋಗಿ ಅಪಹಾಸ್ಯಕ್ಕೆ ಈಡಾಗುವಿರಿ, ನಿವೃತ್ತಿಯಂಚಿನಲ್ಲಿರುವವರು ತಮ್ಮ ಗಳಿಕೆಯನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡದೇ ಹೋದಲ್ಲಿ ಎಲ್ಲವನ್ನೂ ಕಳೆದುಕೊಳ್ಳಬೇಕಾದೀತು. ಅತಿಯಾದ ಬಂಡವಾಳ ಅಪೇಕ್ಷಿಸುವ ಉದ್ಯಮದಲ್ಲಿ ತೊಡಗಿಕೊಳ್ಳುವುದು ತಪ್ಪು ನಿರ್ಧಾರವಾದೀತು. ಕೃಷಿಕ ಮಿತ್ರರಿಗೆ ಅವರ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಂಬಲ ಬೆಲೆ ಸಿಗಲಿದೆ. ಮಹಿಳೆಯರಿಗೆ ಉತ್ತಮ ದಿನಗಳು ಗೋ ಸೇವೆ ಮಾಡಿ. ಭಾನು-ಗುರು-ಶನಿ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 02.02.2025 ರಿಂದ 08.02.2025ರ ವರೆಗೆ - Janathavaniಮಕರ ರಾಶಿ :

(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ಮಾಡಬೇಕಾಗಿರುವ ಕೆಲಸ ಕಾರ್ಯಗಳು ಯಾವುದೇ ಇದ್ದರೂ  ಪರಿಸರದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಗಮನದಲ್ಲಿಟ್ಟುಕೊಂಡೇ ಮುಂದುವರೆಯುವುದು ಮೇಲು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಕೆಲಕಾಲ ನಿಮ್ಮನ್ನು ಕಾಡಲಿದೆ, ಯುವಜನರು ಹಿರಿಯರ ಮಾತುಗಳಿಗೆ ಮಾರುತ್ತರ ಕೊಡುತ್ತಾ ಸಮಸ್ಯೆಯಾಗಿ ತೋರುವರು, ವೈಯಕ್ತಿಕ ಆರೋಗ್ಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ, ಪಾಲುದಾರಿಕೆಯಲ್ಲಿರುವ ವ್ಯವಹಾರವು ಲಾಭದಾಯಕವಾಗಲಿದೆ, ಅನ್ನದಾನ ಮಾಡಿ. ಗುರು-ಶುಕ್ರ-ಶನಿ-ಶುಭ ದಿನಗಳು.

ವಾರ ಭವಿಷ್ಯ ದಿನಾಂಕ : 02.02.2025 ರಿಂದ 08.02.2025ರ ವರೆಗೆ - Janathavaniಕುಂಭ ರಾಶಿ :

(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)

ಮತ್ತೊಬ್ಬರ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಆಲೋಚಿಸುವುದು ಮೇಲು. ಮನೆತನದ ಹಿರಿಯರೊಂದಿಗೆ ಬರಲಿರುವ ಸಮಸ್ಯೆಗಳನ್ನು ಜಾಣತನದಿಂದ ನಿಭಾಯಿಸುವಿರಿ, ಈ ಕಲೆ ನಿಮಗೀಗಾಲೇ ಕರಗತವಾಗಿದೆ.ಸ್ನೇಹಿತರ ಸಮಸ್ಯೆಗಳನ್ನು ಪರಿಹರಿಸಲು ಹೋಗಿ ನೀವೇ ಅದರ ಸುಳಿಯಲ್ಲಿ ಸಿಲುಕುವ ಸಂಭವವಿದೆ. ಲೇವಾದೇವಿ ವ್ಯವಹಾರದಲ್ಲಿ ಹೆಚ್ಚಿನ ಹೂಡಿಕೆ ಮಾಡದೇ ಇದ್ದದ್ದನ್ನೇ ಮುಂದುವರೆಸಿಕೊಂಡು ಹೋಗುವುದು ಮೇಲು. ನಿರೀಕ್ಷಿತ ಶುಭ ವಾರ್ತೆಯೊಂದು ಇಷ್ಟರಲ್ಲೇ ಕೇಳಿಬರಲಿದೆ. ಸೋಮ-ಗುರು-ಶನಿ-ಶುಭ ದಿನಗಳು.

ಮೀನಾ ರಾಶಿ :

(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.) 

ಸರ್ಕಾರಿ ನೌಕರರಿಗೆ ಈ ಹಿಂದೆ ಯಾವಾಗಲೋ ಆಗಿಹೋಗಿದ್ದ ಮುದ್ದತ್ತೊಂದು ಮತ್ತೆ ಮುನ್ನೆಲೆಗೆ ಬರಲಿದೆ. ಸಾಕಷ್ಟು ಪೂರ್ವಸಿದ್ಧತೆಯೊಂದಿಗೆ ಅದನ್ನು ಎದುರಿಸಲು ಆತ್ಮವಿಶ್ವಾಸದೊಂದಿಗೆ ಸಿದ್ಧರಾಗುವುದು ಉತ್ತಮ, ವಿದ್ಯಾರ್ಥಿಗಳು ತಮ್ಮ ಅತಿಯಾದ ಆತ್ಮವಿಶ್ವಾಸದಿಂದಾಗಿ ಸಾಧಾರಣ ಫಲಿತಾಂಶ ಪಡೆ ಯುವರು. ಆದಾಯವು ಸಾಧಾರಣವಾಗಿರುವುದರಿಂದ ಯಾವುದೇ ಯೋಜನೆಗಳನ್ನು ಜಾರಿಗೆ ತರಲು ಯತ್ನಿಸಬೇಡಿ. ರಾಜಕಾರಣಿಗಳು ಪಕ್ಷದ ವರಿಷ್ಠರ ಕೃಪಾಕಟಾಕ್ಷಕ್ಕಾಗಿ ಕಾಯಬೇಕಾದೀತು. ಬಡವರಿಗೆ ಅನ್ನದಾನ, ವಸ್ತ್ರ ದಾನ ಮಾಡಿ. ಭಾನು-ಗುರು-ಶುಕ್ರ-ಶುಭ ದಿನಗಳು.


ಜಯತೀರ್ಥಾಚಾರ್ ವಡೇರ್
ದಾವಣಗೆರೆ.
ಫೋ. : 94486 66678

error: Content is protected !!