ಮೇಷ ರಾಶಿ :
(ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)
ಆದಾಯವು ತೃಪ್ತಿಕರವಾಗಿರುತ್ತದೆ ಮತ್ತು ಈ ವಾರ ಹಣಕಾಸಿನ ತೊಂದರೆಗಳು ಕಂಡುಬರುವುದಿಲ್ಲ. ಆದರೆ, “ಎಲ್ಲಾ ಕೆಲಸವನ್ನೂ ನಾನೇ ಮಾಡಬೇಕು” ಎಂಬ ಹಠಕ್ಕೆ ಒಳಗಾಗುವುದರಿಂದ ಭಾರೀ ನಷ್ಟವನ್ನು ಎದುರಿಸುವ ಸಾಧ್ಯತೆ ಇದೆ. ಹಠದ ಸ್ವಭಾವದಿಂದ ಯಾವುದೇ ಪ್ರಯೋಜನವಾಗದು. ಅಭ್ಯರ್ಥಿಗಳ ಉದಾಸೀನತೆಯಿಂದಾಗಿ ವಿದೇಶದಲ್ಲಿ ಓದಬೇಕೆಂಬ ಹಂಬಲಕ್ಕೆ ತಡೆಯಾಗಬಹುದು. ಆದಾಗ್ಯೂ, ಪ್ರಭಾವಶಾಲಿ ವ್ಯಕ್ತಿಗಳಿಂದ ಮತ್ತೆ ಭರವಸೆ ಸಿಗುವ ಸಾಧ್ಯತೆ ಇದೆ. ಉಸಿರಾಟದ ತೊಂದರೆಗಳು ಕಾಣಿಸಿ ಕೊಳ್ಳಬಹುದು, ಆದ್ದರಿಂದ ಸೂಕ್ತ ತಜ್ಞರ ಸಂಪರ್ಕದಲ್ಲಿರುವುದು ಉತ್ತಮ. ಗಣಿಗಾರಿಕೆ ಯಿಂದ ಬರುವ ಲಾಭಕ್ಕಿಂತ ತಾಂತ್ರಿಕ ತೊಂದರೆಗಳೇ ಹೆಚ್ಚಾಗಬಹುದು. ಗೋ ಸೇವೆ ಮಾಡುವುದು ಶುಭವಾಗಲಿದೆ. ಶುಭ ದಿನಗಳು: ಭಾನುವಾರ, ಮಂಗಳವಾರ, ಬುಧವಾರ.
ವೃಷಭ ರಾಶಿ :
(ಇ.ಉ.ಎ.ಒ.ವ.ವಿ.ವು.ವೆ.ವೋ)
ಸರ್ಕಾರಿ ಕೆಲಸಗಳು ಸುಲಭವಾಗಿ ಮುಗಿಯುತ್ತವೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಹೊರಬನ್ನಿ. ಬಂಧುಗಳು ಅಥವಾ ಸ್ನೇಹಿತರೊಂದಿಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಿ, ಮಾತಿನ ಮೇಲೆ ಹಿಡಿತ ಇರಲಿ. ಪಶುವೈದ್ಯಕೀಯ ಅಧ್ಯಯನ ಮಾಡಿದವರಿಗೆ ಉತ್ತಮ ಬೇಡಿಕೆ ಇರುವುದರಿಂದ ಆದಾಯ ಹೆಚ್ಚಲಿದೆ. ಪ್ರಾಪ್ತ ವಯಸ್ಸಿನ ಮಗಳಿಗೆ ಶ್ರೇಷ್ಠ ವಿವಾಹ ಸಂಬಂಧ ಬರಲಿದೆ, ಆದರೆ ತಡ ಮಾಡಿದರೆ ಅವಕಾಶ ಕೈ ತಪ್ಪಬಹುದು. ಪಾರಂಪರಿಕ ವಿದ್ಯೆ ಕಲಿತರೆ ಜನಪ್ರಿಯತೆ ಗಳಿಸುವಿರಿ. ಬಂಧುಗಳ ಆಗಮನದಿಂದ ಸಂತೋಷ ಸಿಗಲಿದೆ. ಶುಭ ದಿನಗಳು: ಗುರುವಾರ, ಶುಕ್ರವಾರ, ಶನಿವಾರ.
ಮಿಥುನ ರಾಶಿ :
(ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)
ಬಂಧುಗಳು ಸಹಾಯ ಮಾಡುವರೆಂಬ ಭರವಸೆಯ ಮೇಲೆ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಹೋಗಬೇಡಿ; ಕೆಲವರ ಭರವಸೆ ಕೇವಲ ಮಾತಾಗಿ ಉಳಿಯಬಹುದು. ಆದಾಯವು ಮಧ್ಯಮ ಮಟ್ಟದಲ್ಲಿ ಇರಲಿದೆ, ಆದರೆ ಕೆಲವರಿಗೆ ಅನಿರೀಕ್ಷಿತ ಧನಲಾಭ ಸಾಧ್ಯ. ಮಡದಿ ಮತ್ತು ಮಕ್ಕಳ ಕೋರಿಕೆಗಳಿಗೆ ನಿಯಂತ್ರಣ ಹೇರಿ. ಕೃಷಿ ಭೂಮಿ ವಹಿವಾಟಿನಿಂದ ಉತ್ತಮ ಲಾಭ ನಿರೀಕ್ಷಿಸಬಹುದು. ರಾಜಕಾರಣಿಗಳಿಗೆ ಜನಪ್ರಿಯತೆ ಲಭಿಸಲಿದ್ದು, ಪಕ್ಷದಲ್ಲಿ ಅವರ ಪ್ರಾಬಲ್ಯ ಹೆಚ್ಚಬಹುದು. ಕಾನೂನು ಹೋರಾಟಕ್ಕಿಂತ ಹಿರಿಯರ ಸಲಹೆಯಂತೆ ರಾಜಿ-ಪಂಚಾಯಿತಿ ಮಾಡಿಕೊಳ್ಳುವುದು ಉತ್ತಮ. ಸೋಮವಾರ, ಬುಧವಾರ ಮತ್ತು ಗುರುವಾರ ಶುಭ ದಿನಗಳಾಗಿವೆ.
ಕರ್ಕಾಟಕ ರಾಶಿ :
(ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)
ವಾರದ ಮಧ್ಯದಲ್ಲಿ ಹಣಕಾಸಿನ ಅಡಚಣೆ ಉಲ್ಬಣವಾಗುವ ಸಾಧ್ಯತೆ ಇದೆ. ಇದರಿಂದ ಮನೆಯಲ್ಲಿ ನಡೆಯಬೇಕಾಗಿರುವ ಕಾರ್ಯಗಳನ್ನು ಕೆಲಕಾಲ ಮುಂದೂಡು ವುದು ಉತ್ತಮ. ತಂದೆ-ತಾಯಿಗಳು ನೀಡುವ ಸಹಾಯವನ್ನು ನಿಸ್ಸಂಕೋಚವಾಗಿ ಸ್ವೀಕರಿಸಿ. ವೈಯಕ್ತಿಕ ವಿಷಯಗಳ ಬಗ್ಗೆ ಎಲ್ಲರೊಂದಿಗೆ ಮಾತನಾಡದಿರಿ, ಇಲ್ಲವಾದರೆ ಮಾನಹಾನಿಯಾಗುವ ಸಂಭವವಿದೆ. ಆಯುರ್ವೇದ ಔಷಧಿಗಳು ಮತ್ತು ವೈದ್ಯರ ಬೇಡಿಕೆ ಹೆಚ್ಚಲಿದೆ. ಅನಿರೀಕ್ಷಿತ ಘಟನೆಯೊಂದರಲ್ಲಿ ನಿಮ್ಮ ಸಂಗಾತಿಯೇ ನಿಮ್ಮ ವಿರುದ್ಧ ತಿರುಗಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶ ಲಭಿಸಲಿದೆ; ಗುರು ಸೇವೆ ಮಾಡಿ. ಭಾನುವಾರ, ಸೋಮವಾರ ಮತ್ತು ಗುರುವಾರ ಶುಭ ದಿನಗಳಾಗಿವೆ.
ಸಿಂಹ ರಾಶಿ :
(ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)
ಆಲಸ್ಯವು ಮನುಷ್ಯನ ದೊಡ್ಡ ಶತ್ರು ಎಂಬುದನ್ನು ಮರೆಯಬೇಡಿ; ಅದು ನಿಮ್ಮ ಉತ್ತಮ ಭವಿಷ್ಯವನ್ನೇ ಹಾಳು ಮಾಡಬಹುದು. ಗುರು-ಹಿರಿಯರನ್ನು ಗೌರವಿಸಿ. ಅಪ್ರಿಯ ಸತ್ಯವನ್ನು ಮಾತನಾಡುವುದರಿಂದ ನೀವೇ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಇದೆ. ಕಡಿತಗೊಂಡ ಆದಾಯದಲ್ಲಿ ತುಸು ಚೇತರಿಕೆ ಕಂಡುಬರಲಿದೆ. ಸಂಧಿವಾತ ತೊಂದರೆಯಿಂದ ಬಳಲುತ್ತಿರುವವರು ಆಹಾರೋಪಚಾರದಲ್ಲಿ ಸ್ವಲ್ಪ ಬಿಗಿತವನ್ನು ಕಾಯ್ದು ಕೊಳ್ಳುವುದು ಒಳಿತು. ಉನ್ನತ ಶಿಕ್ಷಣ ಪಡೆಯುವವರಿಗೆ ಸರ್ಕಾರದಿಂದ ಹೇರಳವಾದ ನೆರವು ದೊರೆಯಲಿದೆ. ಕೆಲವು ಕಹಿ ಘಟನೆಗಳನ್ನು ಮರೆತುಬಿಡುವುದರಿಂದ ಯಶಸ್ಸು ಸುಲಭವಾಗಿ ಒಲಿಯಲಿದೆ. ಶುಭ ದಿನಗಳು: ಭಾನುವಾರ, ಸೋಮವಾರ, ಗುರುವಾರ.
ಕನ್ಯಾ ರಾಶಿ :
(ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)
ಯಾವುದೇ ಕಾರ್ಯ ಕೆಡುವ ಮೊದಲೇ ಅದರ ಪೂರ್ವಾಭಾಸವನ್ನು ಅರಿತುಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ, ಕೊನೆಗೆ ಕೇವಲ ಪಶ್ಚಾತ್ತಾಪ ಮಾತ್ರ ಉಳಿಯಬಹುದು. ತಮ್ಮ ಸಾಮರ್ಥ್ಯದ ಅರಿವಿಲ್ಲದೇ, ಅದನ್ನು ಮೀರಿ ಯಾರಿಗಾದರೂ ಸಹಾಯ ಮಾಡಲು ಹೋಗಬೇಡಿ. ಉತ್ತಮ ಕೆಲಸಗಳಿಗೆ ಬಂಧುಗಳಿಂದಲೇ ಅಡ್ಡಿಯಾಗುವ ಸಾಧ್ಯತೆ ಇದೆ. ರಾಜಕೀಯ ಪ್ರವೇಶಕ್ಕೆ ಇದು ಸೂಕ್ತ ಸಮಯವಾಗಿದ್ದು, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ವಿದೇಶದಲ್ಲಿರುವ ಮಗನ ವಿವಾಹ ಖರ್ಚುಗಳನ್ನು ನೀವೇ ಭರಿಸಬೇಕಾಗಬಹುದು. ನಡೆಯಬೇಕಾಗಿರುವ ಕಾರ್ಯಗಳು ದೈವಾನುಗ್ರಹದಿಂದ ಸುಗಮವಾಗಿ ನೆರವೇರುವವು. ಮಂಗಳ, ಬುಧ ಮತ್ತು ಶುಕ್ರ ಗ್ರಹಗಳ ಶುಭ ದಿನಗಳು ಒಳಗೊಂಡಿವೆ.
ತುಲಾ ರಾಶಿ :
(ರ.ರಿ.ರು.ರೆ.ರೊ.ತ.ತಿ.ತು.ತೆ.)
ಕೆಲವೊಮ್ಮೆ ನೀವು ಎಷ್ಟೇ ಪ್ರಯತ್ನಿಸಿದರೂ ಫಲಿತಾಂಶ ತಕ್ಷಣ ಗೋಚರಿಸದಿರ ಬಹುದು, ಆದರೆ ತಾಳ್ಮೆಯಿಂದ ಮುಂದುವರಿಯಿರಿ, ಯಶಸ್ಸು ಕ್ರಮೇಣ ಕಾಣಿಸಲಿದೆ. ತುರ್ತಾಗಿ ಮಾಡಬೇಕಾದ ಕೆಲಸಗಳ ಬಗ್ಗೆ ಆರಂಭದಲ್ಲಿ ನೀರಸ ಭಾವನೆ ಕಾಡಬಹುದು, ಆದರೆ ಉತ್ಸಾಹದಿಂದ ಕಾರ್ಯ ಪ್ರಾರಂಭಿಸಿದರೆ ಉತ್ತಮ ಫಲಿತಾಂಶ. ಪಾಲುದಾರಿಕೆ ವ್ಯವಹಾರದಲ್ಲಿ ಸದಸ್ಯರಿಂದ ಸಣ್ಣಪುಟ್ಟ ವಿರೋಧಗಳು, ಆದರೆ ಸಂವಾದ ಮತ್ತು ಧೈರ್ಯದಿಂದ ಇವುಗಳನ್ನು ಪರಿಹರಿಸಿ. ಸಮಸ್ಯೆಗಳನ್ನು ಎದುರಿಸುವಲ್ಲಿ ಸ್ಥಿರತೆ ಮತ್ತು ಆತ್ಮ ವಿಶ್ವಾಸ ಬೆಳೆಸಿಕೊಳ್ಳಿ. ಪ್ರೇಮಿಗಳ ನಡುವೆ ಭಿನ್ನಾಭಿಪ್ರಾಯ, ಪರಸ್ಪರ ಮಾತುಕತೆಯಿಂದ ಪರಿಹಾರ, ಹಿರಿಯರ ಸಲಹೆ ಮತ್ತು ಒಪ್ಪಿಗೆ ಪಡೆದು ಕಾರ್ಯಗಳನ್ನು ಮುಂದುವರೆಸಿ, ಮಂಗಳ ಕಾರ್ಯಗಳು ಸುಗಮವಾಗಿ ನೆರವೇರುತ್ತವೆ. ಅನ್ನದಾನ ಮಾಡುವುದ ರಿಂದ ಮನಸ್ಸಿಗೆ ಶಾಂತಿ. ಶುಭ ದಿನಗಳು: ಬುಧವಾರ, ಶುಕ್ರವಾರ, ಶನಿವಾರ
ವೃಶ್ಚಿಕ ರಾಶಿ :
(ತೊ.ನ.ನಿ.ನು.ನೆ.ನೋ.ಯ.ಯಿ.ಯು.)
ಮಾಡಬೇಕಾದ ಕೆಲಸಗಳನ್ನು ಚುರುಕಾಗಿ ಮುಗಿಸುವುದನ್ನು ಕಲಿಯಿರಿ. ಪರ ಊರಿನಲ್ಲಿರುವ ಮಕ್ಕಳಿಂದ ಯಾವುದೇ ಸಹಾಯದ ನಿರೀಕ್ಷೆ ಇಡಬೇಡಿ; ಇಲ್ಲವಾದರೆ ನಿರಾಸೆಗೊಳಗಾಗುವಿರಿ. ಉನ್ನತ ಶಿಕ್ಷಣದ ಕನಸು ಸಾಕಾರಗೊಳ್ಳುವ ಕಾಲ ದೂರವಿಲ್ಲ. ಕಟ್ಟಡ ನಿರ್ಮಾಣ ಮಾಡುವವರಿಗೆ ಆದಾಯ ಹೆಚ್ಚಲಿದೆ. ಸೋದರಿಯೊಂದಿಗೆ ವಿನಾ ಕಾರಣ ಮನಸ್ತಾಪ ಬೇಡ. ಹಿರಿಯರ ಅನುಭವಯುಕ್ತ ಮಾತುಗಳನ್ನು ಕೇಳುವುದರಲ್ಲಿ ನಿಮ್ಮ ಹಿತವಿದೆ. ಯುವಕರಿಗೆ ರಾಜಕಾರಣಿಗಳಿಂದ ಉತ್ತಮ ನೆರವು ದೊರೆಯುವ ಸಾಧ್ಯತೆ ಇದೆ. ಸಾಧ್ಯವಿದ್ದರೆ ಅನ್ನದಾನ ಮಾಡಿ. ಸೋಮವಾರ, ಮಂಗಳವಾರ ಮತ್ತು ಗುರುವಾರ ಶುಭ ದಿನಗಳಾಗಿವೆ
ಧನು ರಾಶಿ :
(ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)
ನಿವೃತ್ತಿಯಂಚಿನಲ್ಲಿರುವವರು ತಮ್ಮ ಗಳಿಕೆಯನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಈಗಲೇ ಒಂದು ಯೋಜನೆಯನ್ನು ರೂಪಿಸಿಕೊಳ್ಳುವುದು ಉತ್ತಮ. ಇಲ್ಲವಾದರೆ, ನಯವಂಚಕರ ಬಲೆಗೆ ಬೀಳುವ ಸಂಭವ ಇದೆ. ಮಹಿಳೆಯರಿಗೆ ಒಳ್ಳೆಯ ದಿನಗಳು ಕಾಣಿಸಿದರೂ, ಯಾವುದೋ ಒಂದು ಚಿಂತೆ ಅವರನ್ನು ಕಾಡುತ್ತಲೇ ಇರುತ್ತದೆ. ಅರ್ಧಕ್ಕೆ ಬಿಟ್ಟಿದ್ದ ವಿದ್ಯಾಭ್ಯಾಸವನ್ನು ಮತ್ತೆ ಮುಂದುವರೆಸಲು ಇದು ಸಕಾಲವಾಗಿದೆ. ಎದುರಾಳಿಗಳ ಚುಚ್ಚು ಮಾತುಗಳಿಗೆ ಎದೆಗುಂದದಿರಿ. ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ತಕ್ಕ ಮಟ್ಟಿಗೆ ಅಭಿವೃದ್ಧಿ ಕಂಡುಬರಲಿದೆ. ಅಮೂಲ್ಯ ವಸ್ತುಗಳ ಬಗ್ಗೆ ಜಾಗರೂಕರಾಗಿರಿ. ಗುರು, ಶುಕ್ರ, ಶನಿ ಗ್ರಹಗಳ ಶುಭ ದಿನಗಳಾಗಿವೆ.
ಮಕರ ರಾಶಿ :
(ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)
ನೀವು ನಿಮ್ಮ ವೃತ್ತಿಯಲ್ಲಿ ತೋರುವ ಶ್ರದ್ಧೆ ಮತ್ತು ನಿಷ್ಠೆ ಯಶಸ್ಸಿನ ಮಾರ್ಗವಾಗಲಿದ್ದು, ಹೆಚ್ಚಿನ ಆದಾಯವನ್ನು ತರಲಿದೆ. ಯಾರು ಎಷ್ಟೇ ವಿರೋಧಿಸಿದರೂ, ಮುನ್ನುಗ್ಗುವ ಕಾರ್ಯತತ್ಪರತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಅರ್ಧಕ್ಕೆ ನಿಂತಿದ್ದ ಕಾರ್ಯಗಳಿಗೆ ಸಂಗಾತಿಯಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಕೃಷಿಯಿಂದ ನಿರೀಕ್ಷಿತ ಲಾಭವಾಗದಿದ್ದರೂ, ನಷ್ಟವಂತೂ ಖಂಡಿತವಾಗಿಯೂ ಆಗುವುದಿಲ್ಲ. ನವದಂಪತಿಗಳಿಗೆ ಹಿರಿಯರ ಮಾರ್ಗದರ್ಶನ ದೊರೆಯಲಿದ್ದು, ಅವರ ವೈಯಕ್ತಿಕ ಸಮಸ್ಯೆಗಳು ದೂರವಾಗಲಿವೆ. ಅಪರಿಚಿತರೊಂದಿಗೆ ಹಣಕಾಸಿನ ವ್ಯವಹಾರ ಮಾಡಬೇಡಿ. ದುರ್ಗಾದೇವಿಯನ್ನು ವಿಶೇಷವಾಗಿ ಆರಾಧಿಸಿ. ಬುಧ, ಗುರು, ಶನಿ ಗ್ರಹಗಳ ಶುಭ ದಿನಗಳಾಗಿವೆ.
ಕುಂಭ ರಾಶಿ :
(ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ)
ರಾಜಕೀಯ ರಂಗಕ್ಕೆ ಹೊಸದಾಗಿ ಸೇರ್ಪಡೆಯಾದವರು ಪಕ್ಷದ ವರಿಷ್ಠರ ನಡವಳಿಕೆಗಳು ತಿಳಿಯದೇ ಕಂಗಾಲಾಗಬಹುದು. ನಿರೀಕ್ಷಿತ ಮಟ್ಟದಲ್ಲಿ ಆದಾಯವಿಲ್ಲ ದಿದ್ದರೂ, ಸಾಧಾರಣ ಎನ್ನಬಹುದಾದ ಲಾಭವನ್ನು ನೀವು ಕಾಣಬಹುದು. ಯುವಜನರಲ್ಲಿ ಕಂಡುಬರಲಿರುವ ಬದಲಾವಣೆಗಳು ಮನೆಯಲ್ಲಿ ಹಿರಿಯರಿಗೆ ಬೇಸರವನ್ನುಂಟು ಮಾಡಬಹುದು ಮತ್ತು ಇದನ್ನು ಬಗೆಹರಿಸುವ ಜವಾಬ್ದಾರಿ ನಿಮ್ಮ ಮೇಲೆ ಬೀಳಲಿದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುವವರು ಸರ್ಕಾರದಿಂದ ಕಾನೂನಾತ್ಮಕ ವಿಚಾರಣೆಯನ್ನು ಎದುರಿಸಬೇಕಾಗಬಹುದು. ಉದ್ಯಮಿಗಳಿಗೆ ಕಾರ್ಮಿಕರ ಅಸಹಕಾರವು ತಲೆನೋವಾಗಿ ಪರಿಣಮಿಸಲಿದೆ. ಗಣೇಶನನ್ನು ಆರಾಧಿಸಿ. ಗುರು, ಶುಕ್ರ ಮತ್ತು ಶನಿವಾರಗಳು ಶುಭ ದಿನಗಳಾಗಿವೆ.
ಮೀನಾ ರಾಶಿ :
(ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.)
ಗೆಳೆಯರಲ್ಲಿ ಕಂಡುಬರಲಿರುವ ದ್ವಂದ್ವ ನಿಲುವಿನಿಂದಾಗಿ ನಿಮಗೆ ಅವರ ಬಗ್ಗೆ ಅನುಮಾನ ಮೂಡಲಿದೆ. ಮನೆಯಲ್ಲಿ ಹಿರಿಯರ ಆರೋಗ್ಯ ಏರುಪೇರು ಆಗುವುದರಿಂದ ಆಸ್ಪತ್ರೆಗೆ ಓಡಾಟ ಹೆಚ್ಚಾಗಲಿದೆ. ಸರ್ಕಾರಿ ನೌಕರರು ಮೇಲಾಧಿಕಾರಿಗಳನ್ನು ಓಲೈಸುವುದರಲ್ಲೇ ಹೈರಾಣಾಗಬಹುದು. ವಿದೇಶದಲ್ಲಿರುವ ಮಗನಿಂದ ಆರ್ಥಿಕ ನೆರವು ದೊರೆಯಲಿದೆ. ಯುವಜನರಿಗೆ ಕೃಷಿಯಲ್ಲಿ ಅನಿರೀಕ್ಷಿತವಾಗಿ ಹೆಚ್ಚಿನ ಆಸಕ್ತಿ ಮೂಡಲಿದೆ. ಮದುವೆ ಕಾರ್ಯದ ಸಿದ್ಧತೆ ಭರದಿಂದ ಸಾಗಲಿದೆ. ಕುಲದೇವತೆಯ ದರ್ಶನದಿಂದ ಧನ್ಯತಾ ಭಾವ ಮೂಡುವುದು. ವಾಸ ಸ್ಥಾನದಿಂದ ಕೆಲಕಾಲ ದೂರವಿರಬೇಕಾಗಬಹುದು. ಗುರು ಮಂತ್ರವನ್ನು ಜಪಿಸಿ. ಭಾನುವಾರ, ಸೋಮವಾರ ಮತ್ತು ಗುರುವಾರಗಳು ಶುಭ ದಿನಗಳಾಗಿವೆ.
ಜಯತೀರ್ಥಾಚಾರ್ ವಡೇರ್
ದಾವಣಗೆರೆ.
ಫೋ. : 94486 66678