ಧಾರ್ಮಿಕ ಪರಂಪರೆಗೆ ಶರಣಾಗಲು ಯುವಕರಿಗೆ ಕರೆ

ಧಾರ್ಮಿಕ ಪರಂಪರೆಗೆ ಶರಣಾಗಲು ಯುವಕರಿಗೆ ಕರೆ

ಸಾಣೇಹಳ್ಳಿ, ಏ.26- ಪ್ರಜಾಪ್ರಭುತ್ವ ಅರ್ಹ ಮತದಾರರನ್ನು ಅವಲಂಬಿಸಿದೆ. ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ, ಯಾವುದೇ ಪಕ್ಷ ಪಂಗಡಗಳಿಗೆ ಒಳಗಾಗದೇ, ಜಾತಿ, ಮತ, ನೋಡದೇ ಇದ್ದದ್ದರಲ್ಲೇ ಅರ್ಹ ವ್ಯಕ್ತಿಗಳಿಗೆ ಮತವನ್ನು ಮುಫತ್ತಾಗಿ ಕೊಡಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಲೋಕಸಭಾ ಚುನಾವಣೆಯ ಮತ ಚಲಾಯಿಸಿ ಶ್ರೀಗಳು ಮಾತನಾಡಿದರು.

ಮತ ಮಾರಿಕೊಳ್ಳುವುದಾಗಲೀ, ಕೊಂಡುಕೊಳ್ಳುವುದಾಗಲೀ ಮಾಡಬಾ ರದು. ಇವತ್ತು ಮತವನ್ನು ಮಾರುವ, ಕೊಳ್ಳುವ ವ್ಯಾಪಾರ ಎಲ್ಲಾ ಕಡೆ ನಡೆಯು ವಂಥದ್ದು ತುಂಬಾ ವಿಷಾದದ ಸಂಗತಿ. ಇದನ್ನು ಹೋಗಲಾಡಿಸಬೇಕಾದರೆ ಮತದಾರರು ಜಾಗೃತರಾಗಬೇಕು. ಅಂತಹ ಜಾಗೃತ ಮತದಾರರಿಂದ ಮಾತ್ರ ಪ್ರಜಾಪ್ರಭುತ್ವವದ ಮೌಲ್ಯಗಳನ್ನು ಉಳಿಸಲಿಕ್ಕೆ ಸಾಧ್ಯ ಎಂದರು. 

error: Content is protected !!