ಜಿಲ್ಲಾ ಚಿತ್ರಕಲಾ ಶಿಕ್ಷಕರಿಂದ ಮತದಾನ ಜಾಗೃತಿ

ಜಿಲ್ಲಾ ಚಿತ್ರಕಲಾ ಶಿಕ್ಷಕರಿಂದ ಮತದಾನ ಜಾಗೃತಿ

ದಾವಣಗೆರೆ, ಏ. 26 – ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಗಳ ವತಿಯಿಂದ ಏರ್ಪಡಿಸಲಾಗಿದ್ದ 50 ಮೀಟರ್ ಬಟ್ಟೆಯ ಮತದಾನ ಜಾಗೃತಿ ಕಾರ್ಯ ಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಅವರು ಉದ್ಘಾಟಿಸಿ ಚಿತ್ರಗಳನ್ನು ವೀಕ್ಷಿಸಿದರು.

ಮತದಾನ ಜಾಗೃತಿ  ಬಟ್ಟೆಯಲ್ಲಿ   ಆಸೆಗೆ ಬಲಿಯಾಗದಿರಿ ನಿಮ್ಮ ಮತ ಪವಿತ್ರವಾಗಿರಲಿ, ಆಮಿಷಕ್ಕೆ ಒಳಗಾಗದೇ ನಿಮ್ಮ ಅಮೂಲ್ಯವಾದ ಮತ ಹಾಳು ಮಾಡದೇ ಒಳ್ಳೆಯದನ್ನು ಯೋಚನೆ ಮಾಡಿ ಮತ ಚಲಾಯಿಸಿ,  ನೀವೆಲ್ಲಾ ಪ್ರಜ್ಞಾವಂತರಿದ್ದೀರಿ ಆಮಿಷಕ್ಕೆ ಮಾರುಹೋಗದೇ ಯೋಚನೆ ಮಾಡಿ ಮತ ಹಾಕಿರಿ, ಭ್ರಷ್ಟರ ಮುಂದೆ ಬೇರೆಯವರಿಗೆ ಮತ ಹಾಕಿ ಭ್ರಷ್ಟರನ್ನ ಸೋಲಿಸಿ, ನನ್ನ ಮತ ನನ್ನ ಹಕ್ಕು, 85 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮನೆಯಲ್ಲಿ ಮತದಾನ, ಪ್ರಥಮ ಕರ್ತವ್ಯ ಮತ ಚಲಾಯಿಸೋಣ ಬನ್ನಿ, ಮತದಾನಕ್ಕಾಗಿ ರಜಾ ಮಜಾ ಮಾಡಲು ಅಲ್ಲ, ಸುಭದ್ರತೆ ಸರ್ಕಾರ ರಚನೆಗೆ ನಿಮ್ಮ ಪವಿತ್ರ ಮತ ಸಾಕ್ಷಿಯಾಗಲಿ, ಕ್ರಿಕೆಟ್ ನೋಡೋದು ಬಿಟ್ಟು ಮತ ಹಾಕೋಣ ಬನ್ನಿ, ಚುನಾವಣೆಗಳಲ್ಲಿ ಆಮಿಷಕ್ಕೆ ಒಳಗಾಗಬೇಡಿ, ಜ್ಞಾನಕ್ಕಾಗಿ ಶಿಕ್ಷಣ ಪ್ರಜಾಪ್ರಭುತ್ವಕ್ಕಾಗಿ ಮತದಾನ ಎಂಬ ಘೋಷವಾಕ್ಯಗಳು 15 ಚಿತ್ರಕಲಾ ಶಿಕ್ಷಕರರಿಂದ ಸುಮಾರು 100 ಚಿತ್ರಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೊಟ್ರೇಶ್ ಜಿ, ಡಯಟ್ ಪ್ರಾಚಾರ್ಯರಾದ ಗೀತಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

 

error: Content is protected !!