ಕಳೆದ ಐದೂ ವರೆ ವರ್ಷಗಳ ಕಾಲ ನಿಷ್ಠೆಯಿಂದ ವೈದ್ಯ ಕೀಯ ಅಭ್ಯಾಸ ಮಾಡಿ ಪದವೀಧರರಾಗಿ ದ್ದೀರಿ. ಮುಂದೆ ನಿಷ್ಠಾವಂತ ವೈದ್ಯರಾಗುವ ಮೂಲಕ ಜೆ.ಜೆ.ಎಂ. ಕಾಲೇಜಿನ ಕೀರ್ತಿ ಯನ್ನು ವಿಶ್ವದಗಲಕ್ಕೂ ಕೊಂಡೊಯ್ಯುತ್ತೀರಿ.
ಆರೋಗ್ಯ ಕ್ಷೇತ್ರದಲ್ಲಿ ಜನೌಷಧಿ ಕೇಂದ್ರಗಳಿಂದ ಕ್ರಾಂತಿಕಾರಿ ಬದಲಾವಣೆ
ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಜನರಿಗೆ ತಲುಪಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಸಾ ಯನಿಕ ಮತ್ತು ರಸಗೊಬ್ಬರ ಸಚಿವಾಲಯದಿಂದ ಆರಂಭವಾಗಿರುವ ಜನೌಷಧಿ ಕೇಂದ್ರಗಳು ದೇಶದ ಆರೋಗ್ಯ ವಲಯದಲ್ಲಿ ಮಹತ್ತರ ಕ್ರಾಂತಿ ಮಾಡಿವೆ.
ಭಾರೀ ಬೇಡಿಕೆಯ ಬಡವರ ಫ್ರಿಡ್ಜ್
ಚಳಿಗಾಲ ಕಳೆದು ಬೇಸಿಗೆ ಕಾಲ ಆರಂಭವಾಗಿದೆ. ಆರಂಭದಲ್ಲಿಯೇ ಬಿಸಿಲ ಬೇಸಿಗೆಗೆ ಜನರು ಉಸ್ಸಪ್ಪಾ ಎನ್ನುತ್ತಿದ್ದಾರೆ. ಬಡವರ ಫ್ರಿಡ್ಜ್ ಎಂದೇ ಹೇಳಲಾಗುವ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಸಾರ್ವಜನಿಕ ದೂರುಗಳಿಗೆ `ಪರಿಹಾರ’
ವಾರದ ನಾಲ್ಕು ದಿನಗಳಲ್ಲಿ ಪ್ರತಿ ವಾರ್ಡ್ಗೂ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡುವುದಾಗಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.
ಮಹಾಪೌರರು ಕನ್ನಡಿಗರ ಧ್ವನಿಯಾಗಿ ನಿಲ್ಲಲಿ
ಕನ್ನಡ ಪರವಾದ ನಿಲುವುಗಳನ್ನು ತೆಗೆದುಕೊಳ್ಳುವ ಜೊತೆಗೆ ಕನ್ನಡಿಗರ ಧ್ವನಿಯಾಗಿ ನಿಲ್ಲುವಂತೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಅವರು ನೂತನ ಮೇಯರ್ ವೀರೇಶ್ ಅವರನ್ನು ವಿನಂತಿ ಮಾಡಿಕೊಂಡರು.
ಡಾ. ಪ್ರಭಾ ಮಲ್ಲಿಕಾರ್ಜುನ್ ಗೆಲುವು ಖಚಿತ: ಶಾಸಕ ಬಸವಂತಪ್ಪ ವಿಶ್ವಾಸ
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಒಲವು ತೋರಿದ್ದು, ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವು ಖಚಿತವಾಗಿದೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಬಸವ ಜಯಂತಿ : ನಗರದಲ್ಲಿ ಇಂದು ಪ್ರಭಾತ್ಪೇರಿ
ಬಸವ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ವಿರಕ್ತ ಮಠ ಮತ್ತು ಲಿಂಗಾಯತ ತರುಣ ಸಂಘ ಇವರ ಜಂಟಿ ಆಶ್ರಯದಲ್ಲಿ ವಿವಿಧ ಬಡಾವಣೆಗಳಲ್ಲಿ ಬಸವ ಪ್ರಭಾತ್ ಪೇರಿ ನಡೆಯುತ್ತಿದ್ದು, ಈ ಪ್ರಭಾತ್ ಪೇರಿಗೆ ಬಸವ ಕಲಾ ಲೋಕ ಪ್ರತಿನಿತ್ಯ ವಚನ ಭಜನೆ ಸಾಥ್ ನೀಡಲಿದೆ.
ಹೊನ್ನಾಳಿಯಲ್ಲಿ ವಿಶೇಷ ಚೇತನರಿಂದ ಶೇ. 100 ರಷ್ಟು ಮತದಾನ
ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹೊನ್ನಾಳಿ ವಿಧಾನಸಭಾ ಕ್ಷೇತ್ರದಲ್ಲಿನ 4236 ಮತದಾರರಲ್ಲಿ 2496 ಪುರುಷರಲ್ಲಿ 2495 ಮತದಾನ ಮಾಡಿದ್ದು, ಒಬ್ಬರು ಪ್ಯಾರಾಲಿಸಿಸ್ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಮತದಾನ ಮಾಡಲು ಸಾಧ್ಯವಾಗಿಲ್ಲ.
ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ಇಂದು ಅಕ್ಷಯ ಅಮಾವಾಸ್ಯೆ
ದಾವಣಗೆರೆಯ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಇವರಿಂದ, ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಅಕ್ಷಯ ತದಿಗೆ ಅಮಾವಾಸ್ಯೆ ಪ್ರಯಕ್ತ ಇಂದು ಬೆಳಿಗ್ಗೆ 6.30ಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ.
ಜಿಲ್ಲೆಯಲ್ಲಿ ಶಾಂತಿಯುತ ಮತದಾನ ಯಶಸ್ಸಿಗೆ ಶ್ರಮಿಸಿದವರಿಗೆ ಜಿಲ್ಲಾಡಳಿತ ಅಭಿನಂದನೆ
18ನೇ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಇಂದು ನಡೆದ ಮತದಾನವು ಸಂಪೂರ್ಣ ಶಾಂತಯುತವಾಗಿ ನಡೆದಿದ್ದು, ಮತ ಪ್ರಮಾಣದಲ್ಲಿ ಭಾರೀ ಹೆಚ್ಚಳ ನಿರೀಕ್ಷಿಸಿ, ಯಶಸ್ವಿ ಚುನಾವಣೆ ನಡೆಸಲು ಶ್ರಮಿಸಿದ ಅಧಿಕಾರಿಗಳು ಮತ್ತು ಸಹಕಾರ ನೀಡಿದ ಮತದಾರರು ಹಾಗೂ ಸಾರ್ವಜನಿಕರಿಗೆ ಜಿಲ್ಲಾಡಳಿತದಿಂದ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ
ನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅಮಾವಾಸ್ಯೆ ಪೂಜೆ
ದೇವರಾಜ ಅರಸು ಬಡಾವಣೆ 'ಎ' ಬ್ಲಾಕ್ ನಲ್ಲಿರುವ ಶ್ರೀ ಮಾತಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅಕ್ಷಯ ತದಿಗೆ ಅಮಾವಾಸ್ಯೆ ಪ್ರಯುಕ್ತ ಇಂದು ಶ್ರೀ ನಾಗಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಪ್ರಧಾನ ದೇವತೆ ಶ್ರೀ ಮಾತಾ ಅನ್ನಪೂರ್ಣೇಶ್ವರಿಗೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ
ಹೊನ್ನಾಳಿ : ನಾಳೆ ಲೋಕಾಯುಕ್ತ ಭೇಟಿ
ಹೊನ್ನಾಳಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಲೋಕಾಯುಕ್ತ (ದಾವಣಗೆರೆ) ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ದೂರುಗಳ ಸ್ವೀಕಾರ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 9ರ ಗುರುವಾರ ಬೆಳಿಗ್ಗೆ 11.30ರಿಂದ ಮಧಾಹ್ನ 1.30ರವರೆಗೆ ಹಮ್ಮಿಕೊಳ್ಳಲಾಗಿದೆ.
ಕಾಯಿಪೇಟೆಯಲ್ಲಿ ನಾಡಿದ್ದು ಬಸವ ಜಯಂತ್ಯೋತ್ಸವ
ನಗರದ ಕಾಯಿಪೇಟೆ ಶ್ರೀ ಬಸವೇಶ್ವರ ನಗರದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಇದೇ ದಿನಾಂಕ 10ರ ಶುಕ್ರವಾರ ಶ್ರೀ ಬಸವೇಶ್ವರ ಜಯಂತ್ಯೋತ್ಸವ ನಡೆಯಲಿದೆ.
ಗಾಂಧಿನಗರದಲ್ಲಿ ಇಂದಿನಿಂದ ಶ್ರೀ ಹುಲಿಗೆಮ್ಮದೇವಿ ಜಾತ್ರೆ
ಗಾಂಧಿ ನಗರದಲ್ಲಿ ಇಂದಿನಿಂದ 10ರ ವರೆಗೆ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ.
12ಕ್ಕೆ ನಗರದಲ್ಲಿ ಕವಿಗೋಷ್ಠಿ
ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಯಿಂದ ಇದೇ ದಿನಾಂಕ 12ರ ಭಾನು ವಾರ ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ ಕವಿಗೋಷ್ಠಿ ನಡೆಯಲಿದೆ.
ರಾಜಕೀಯದಲ್ಲಿ ಈಗಾಗಲೇ ಗೆದ್ದಿದ್ದೇನೆ ಎಂದ ಜಿ.ಬಿ. ವಿನಯ್ ಕುಮಾರ್
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕ್ರಾಂತಿ ಆಗಿದೆ. ನಾನು ಸ್ವಾಭಿಮಾನಿ ಯಾಗಿ ಹೋರಾಟ ಮಾಡಿದ್ದೇನೆ. ಇಂದು ನನ್ನ ಹಕ್ಕು ಮತ ಚಲಾಯಿಸಿದ ಹೆಮ್ಮೆ ನನಗಿದೆ ಎಂದು ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ಹೇಳಿದರು.
11ರಂದು ಶ್ರೀ ಶಂಕರ ಭಗವತ್ಪಾದರ ಜಯಂತಿ ಆಚರಣೆ
ಶ್ರೀ ಶಂಕರ ಸೇವಾ ಸಂಘದಿಂದ ಇದೇ ದಿನಾಂಕ 11 ಮತ್ತು 12 ರಂದು ಶ್ರೀ ಶಂಕರ ಭಗವತ್ಪಾದರ ಜಯಂತಿಯನ್ನು ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಹರಿಹರದಲ್ಲಿ 10 ರಂದು ಬಸವೇಶ್ವರ ಜಯಂತಿ ಆಚರಣೆ
ಹರಿಹರ : ಸಾಂಸ್ಕೃತಿಕ ನಾಯಕ ಶ್ರೀ ಬಸವೇಶ್ವರ ಜಯಂತಿಯನ್ನು ನಗರದಲ್ಲಿ ಇದೇ ದಿನಾಂಕ 10 ರಂದು ಶುಕ್ರವಾರ ಆಚರಿಸಲಾಗುತ್ತದೆ ಎಂದು ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ ತಿಳಿಸಿದರು.
ನಗರದಲ್ಲಿ ಇಂದು ವೈದ್ಯಕೀಯ ಶಿಬಿರ
ಬಸವ ಜಯಂತಿ ಪ್ರಯುಕ್ತ ವೈದ್ಯಕೀಯ ಶಿಬಿರವನ್ನು ಬಸವ ಬಳಗ ಹಾಗೂ ಎಸ್.ಎಸ್. ನಾರಾಯಣ ಹೃದಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಇಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದೆ.
ಗಂಗನರಸಿಯಲ್ಲಿ ನಾಳೆ ಅಮಾವಾಸ್ಯೆ
ಹರಿಹರ : ತಾಲ್ಲೂಕಿನ ಗಂಗನರಸಿ ಗ್ರಾಮದ ಶ್ರೀ ಗೋಣಿ ಬಸವೇಶ್ವರ ಹೊರ ಮಠದಲ್ಲಿ ಅಕ್ಷಯ ತದಿಗೆ ಅಮಾವಾಸ್ಯೆಯ ವಿಶೇಷ ಪೂಜಾ ಕಾರ್ಯಕ್ರಮಗಳು ನಾಡಿದ್ದು 8ರ ಬುಧವಾರ ಬೆಳಿಗ್ಗೆ 11ಕ್ಕೆ ನಡೆಯಲಿವೆ.
ಕೋಡಿ ಕ್ಯಾಂಪ್ ಕೊಟ್ಟೂರೇಶ್ವರ ಸ್ವಾಮಿ ಮಠದಲ್ಲಿ ನಾಳೆ ಅಕ್ಷಯ ಅಮಾವಾಸ್ಯೆ
ನಗರದ ಕೊಟ್ಟೂರು ಶ್ರೀ ಗುರುಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ಇವರಿಂದ, ಮಾಗಾನಹಳ್ಳಿ ಕೋಡಿ ಕ್ಯಾಂಪ್ ಬಳಿ ಇರುವ ಶ್ರೀ ಗುರು ಕೊಟ್ಟೂರೇಶ್ವರ ಮಹಾಸ್ವಾಮಿ ಪಾದಗಳಿಗೆ ಅಕ್ಷಯ ತದಿಗೆ ಅಮಾವಾಸ್ಯೆ ಪ್ರಯಕ್ತ ನಾಡಿದ್ದು ದಿನಾಂಕ 8ರ ಬುಧವಾರ ಬೆಳಿಗ್ಗೆ 6.30ಕ್ಕೆ ಅಭಿಷೇಕ, ವಿಶೇಷ ಪೂಜೆ ನಡೆಯಲಿದೆ.
ಮತದಾನ ಮಾಡಿ ಬಹುಮಾನ ಗೆಲ್ಲಿ
ನಗರದ 42ನೇ ವಾರ್ಡಿನ ಮತದಾರರು, ಮತ ಚಲಾಯಿಸಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವನ್ನು ನಗರದ ವಿಶ್ವ ಪೇಪರ್ ಸ್ಟಾಲ್ ಕಲ್ಪಿಸಿದೆ.
ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ
ಚಿತ್ರದುರ್ಗ : ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಗುತ್ತಿಗೆದಾರರೊಬ್ಬರಿಂದ 4 ಲಕ್ಷ ರೂ. ಲಂಚ ಪಡೆಯುವಾಗ ಬಯಲುಸೀಮೆ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಎಸ್.ವೈ.ಬಸವರಾಜಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಗರದ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಾಳೆ ಅಮಾವಾಸ್ಯೆ ಪೂಜೆ
ನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಅಕ್ಷಯ ತದಿಗೆ ಅಮಾವಾಸ್ಯೆ ಪ್ರಯುಕ್ತ ನಾಳೆ ದಿನಾಂಕ 8ರ ಬುಧವಾರ ಶ್ರೀ ನಾಗಲಿಂಗೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಮೃತ್ಯುಂಜಯ ಹೋಮ, ಪ್ರಧಾನ ದೇವತೆ ಶ್ರೀ ಮಾತಾ ಅನ್ನಪೂರ್ಣೇಶ್ವರಿಗೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ
ಬಸವ ಜಯಂತಿ : ನಗರದಲ್ಲಿ ಇಂದು ಪ್ರಭಾತ್ಪೇರಿ
ಬಸವ ಜಯಂತ್ಯೋತ್ಸವದ ಪ್ರಯುಕ್ತ ಶ್ರೀ ವಿರಕ್ತ ಮಠ ಮತ್ತು ಲಿಂಗಾಯತ ತರುಣ ಸಂಘ ಇವರ ಜಂಟಿ ಆಶ್ರಯದಲ್ಲಿ ವಿವಿಧ ಬಡಾವಣೆಗಳಲ್ಲಿ ಬಸವ ಪ್ರಭಾತ್ ಪೇರಿ ನಡೆಯುತ್ತಿದ್ದು, ಈ ಪ್ರಭಾತ್ ಪೇರಿಗೆ ಬಸವ ಕಲಾ ಲೋಕ ಪ್ರತಿನಿತ್ಯ ವಚನ ಭಜನೆ ಸಾಥ್ ನೀಡಲಿದೆ.
ತಾಪಮಾನ : ಮುನಿಸಿಪಲ್ ಕಾರ್ಮಿಕರ ಕೆಲಸದ ಅವಧಿ ಕಡಿತಕ್ಕೆ ಒತ್ತಾಯ
ಹೆಚ್ಚಿರುವ ತಾಪಮಾನ ಜನರ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಉಂಟು ಮಾಡುತ್ತಿದ್ದು, ರಾಜ್ಯದ ಮಹಾನಗರ, ನಗರ, ಪಟ್ಟಣಗಳಲ್ಲಿ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಮುನಿಸಿಪಲ್ ಕಾರ್ಮಿಕರು, ಪೌರಕಾರ್ಮಿಕರು, ಕಸ ಸಾಗಾಣಿಕೆ ಮತ್ತಿತರರ ಕೆಲಸದ ಅವಧಿಯನ್ನು ಬದಲಿಸುವಂತೆ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘವು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದೆ.
ನಗರದಲ್ಲಿ ಇಂದು ಮತದಾನ ಜಾಗೃತಿ ವೈದ್ಯಕೀಯ ಶಿಬಿರ
ಯುನಿಟಿ ಹೆಲ್ತ್ ಸೆಂಟರ್ನಲ್ಲಿ ಮತದಾನ ಜಾಗೃತಿ ವೈದ್ಯಕೀಯ ಶಿಬಿರವನ್ನು ಇಂದು ಹಮ್ಮಿಕೊಳ್ಳಲಾಗಿದೆ.
ಕಾಯಿಪೇಟೆಯಲ್ಲಿ 10ರಂದು ಬಸವ ಜಯಂತ್ಯೋತ್ಸವ
ನಗರದ ಕಾಯಿಪೇಟೆ ಶ್ರೀ ಬಸವೇಶ್ವರ ನಗರದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಇದೇ ದಿನಾಂಕ 10ರ ಶುಕ್ರವಾರ ಶ್ರೀ ಬಸವೇಶ್ವರ ಜಯಂತ್ಯೋತ್ಸವ ನಡೆಯಲಿದೆ.
ಗಾಂಧಿನಗರದಲ್ಲಿ ನಾಳೆಯಿಂದ ಜಾತ್ರೆ
ಇಲ್ಲಿನ ಗಾಂಧಿ ನಗರದಲ್ಲಿ ನಾಡಿದ್ದು ದಿನಾಂಕ 8ರಿಂದ 10ರ ವರೆಗೆ ಶ್ರೀ ಹುಲಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯಲಿದೆ. 8ರ ಬೆಳಗ್ಗೆ 6ಕ್ಕೆ ಹರಿಹರದ ತುಂಗಭದ್ರಾ ನದಿಗೆ ದೇವಿಯು ಹೊಳೆ ಪೂಜೆಗೆ ಹೋಗಲಿದ್ದು, ಅಂದು ಸಂಜೆ 6ಕ್ಕೆ ದೇವಿಯ ಮೆರವಣಿಗೆ ನಡೆಯಲಿದೆ.
ಮಲೇಬೆನ್ನೂರಿನಲ್ಲಿ ಶೇ. 80.13 ಶಾಂತಿಯುತ ಮತದಾನ
ಮಲೇಬೆನ್ನೂರು : ಮಂಗಳವಾರ ನಡೆದ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆ ಮಲೇಬೆನ್ನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಂಪೂರ್ಣ ಶಾಂತಿಯುತವಾಗಿತ್ತು.
ರಾಣೇಬೆನ್ನೂರು : ಅಲೆಮಾರಿಗಳಲ್ಲಿ ಮತ ಜಾಗೃತಿ ಮೂಡಿಸುವಲ್ಲಿ ಸ್ವೀಪ್ ಸಮಿತಿ ವಿಫಲ
ರಾಣೇಬೆನ್ನೂರು : ಜಿಲ್ಲಾ ಸ್ವೀಪ್ ಸಮಿತಿಯು ಗುಳೇ ಬಂದ ಹೆಳವರು ಮತ್ತು ಅಲೆಮಾರಿ ಗಳಿಗೆ ಮತದಾನದ ಅರಿವು ಮೂಡಿಸದೇ ಇರುವುದ ರಿಂದ ಈ ಜನಾಂಗ ಮತದಾನದಿಂದ ವಂಚಿತರಾಗಿದ್ದಾರೆ
ಕೊನೆಗೂ ಮತಭಾಗ್ಯ ಪಡೆದ ಅಮೆರಿಕದ ಮತದಾರ
ಅಮೆರಿಕದ ಡೆಲ್ಲಾಸ್ನಲ್ಲಿರುವ ದಾವಣಗೆರೆ ಮೂಲದ ರಾಘವೇಂದ್ರ ಕಮಲಾಕರ ಶೇಟ್ ಅವರು ಈ ಬಾರಿ ಮತದಾನ ಮಾಡುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.
ಗುಡಗೂರಿನಲ್ಲಿ ಕೋಳಿವಾಡ ಮತ ಚಲಾವಣೆ
ರಾಣೇಬೆನ್ನೂರು : ಮಗ ಶಾಸಕ ಪ್ರಕಾಶ ಕೋಳಿವಾಡ, ಸೊಸೆ ಪೂರ್ಣಿಮಾ ಸೇರಿದಂತೆ ಮಾವ, ಅಳಿಯ, ಮಗಳು ಹಾಗೂ ಮೊಮ್ಮಕ್ಕಳೊಂದಿಗೆ ವಿಧಾನಸಭೆ ಮಾಜಿ ಸಭಾಪತಿ ಕೆ.ಬಿ. ಕೋಳಿವಾಡ ಅವರು ತಮ್ಮ ಹುಟ್ಟೂರು, ತಾಲ್ಲೂಕಿನ ಗುಡಗೂರು ಗ್ರಾಮದಲ್ಲಿಂದು ಮತ ಚಲಾಯಿಸಿದರು.
ಹೂವಿನ ಸಸಿ ನೀಡಿ, ಮತಗಟ್ಟೆಗೆ ಆಹ್ವಾನ
ಚನ್ನಗಿರಿ : ಚುನಾವಣೆಗೆ ಇಂದು ನಡೆದ ಮತದಾನದ ವೇಳೆ ಇಲ್ಲಿನ ವಿಶೇಷ ಮತಗಟ್ಟೆಗಳಲ್ಲಿ ಮತದಾರರಿಗೆ ಹೂವಿನ ಸಸಿಗಳನ್ನು ನೀಡುವ ಮೂಲಕ ಮತಗಟ್ಟೆಗೆ ಬರಮಾಡಿಕೊಂಡು ಬೀಳ್ಕೊಡಲಾಯಿತು.
ಮತದಾರರಿಗೆ ಕುಡಿಯುವ ನೀರಿನ ವ್ಯವಸ್ಥೆ
ಹರಪನಹಳ್ಳಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮತದಾರರಿಗೆ ಮುಸ್ಲಿಂ ಯೂತ್ ವೇಲ್ ಫೇರ್ ಅಸೋಸಿಯೇಷನ್ ವತಿಯಿಂದ ತಂಪಾದ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿತ್ತು.
ಜಿಲ್ಲಾ ಪೊಲೀಸ್ ವತಿಯಿಂದ ವಿವಿಧ ಬಗೆಯ ಸೈಬರ್ ಅಪರಾಧಗಳ ಮಾಹಿತಿ
ಸಾರ್ವತ್ರಿಕ ಲೋಕಸಭಾ ಚುನಾವಣೆಯಂದು ದಾವಣಗೆರೆ ನಗರದ ವಿವಿಧ ಮತದಾನ ಕೇಂದ್ರಗಳಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ವಿವಿಧ ಬಗೆಯ ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಯೋವೃದ್ಧರಲ್ಲಿ ಮತದಾನದ ಉತ್ಸಾಹ
ಮನೆಯಲ್ಲಿ ಮತದಾನದ ಅವಕಾಶವಿದ್ದರೂ, ಹಲವಾರು ವಯೋ ವೃದ್ಧರು ಮತಗಟ್ಟೆಗಳಿಗೇ ಬಂದು ಉತ್ಸಾಹದಿಂದ ಮತ ಚಲಾಯಿಸಿದರು.
ಪತ್ರಕರ್ತ ಕೆ. ಚಂದ್ರಣ್ಣ ಕುಟುಂಬದ 38 ಸದಸ್ಯರ ಮತದಾನ
ನಗರದ ಎಂ.ಸಿ.ಸಿ. `ಎ' ಬ್ಲಾಕ್ ಬಳಿಯ ಬಕ್ಕೇಶ್ವರ ಶಾಲೆಯ ಮತಗಟ್ಟೆಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ ಹಾಗೂ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಸಹೋ ದರರು, ಸಹೋದರಿಯರು ಕುಟುಂಬ ವರ್ಗದವರು ಮಕ್ಕಳು ಸೇರಿದಂತೆ ಸುಮಾರು 38 ಜನರ ಒಟ್ಟು ಕುಟುಂಬದ ಸದಸ್ಯರು ಇಂದು ಮತದಾನ ಮಾಡಿದರು.
ಹೊನ್ನಾಳಿಯಲ್ಲಿ ಮತಯಂತ್ರ ದೋಷ ಮತ ವಂಚಿತ 10 ಮತದಾರರು
ಹೊನ್ನಾಳಿ : ತಾಲ್ಲೂಕಿನ ಕಮ್ಮಾರಗಟ್ಟೆ ಮತ ಕೇಂದ್ರದಲ್ಲಿ ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಮತಯಂತ್ರ ದೋಷದಿಂದ ಸಮಯವಿದೆ ಎಂದು ತಡವಾಗಿ ಬಂದ 10 ಮತದಾರರು ಮತದಾನದಿಂದ ವಂಚಿತರಾಗಿರುವುದಾಗಿ ತಿಳಿದು ಬಂದಿದೆ.
ಮತಗಟ್ಟೆ ಸಿಬ್ಬಂದಿಗಳಿಗೆ ಹೋಳಿಗೆ ಊಟದ ವ್ಯವಸ್ಥೆ
ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮತಗಟ್ಟೆ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಧ್ಯಾಹ್ನ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದರು.
ಶಾಂತಿಯುತ ಲೋಕಸಭಾ ಚುನಾವಣೆಗೆ ತಾಲ್ಲೂಕು ಆಡಳಿತ ಸಜ್ಜು
ಜಗಳೂರು : ಮತಗಟ್ಟೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರ್ಕಾರಿ ಬಸ್ ಗಳ ಮೂಲಕ ತಮ್ಮನ್ನು ನಿಯೋಜಿಸಿರುವ ಮತಗಟ್ಟೆಗಳಿಗೆ ಮತ ಯಂತ್ರಗಳೊಂದಿಗೆ ತೆರಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ 110ನೇ ಸಂಸ್ಥಾಪನಾ ದಿನಾಚರಣೆ
ನಗರದ ಕನ್ನಡ ಕುವೆಂಪು ಭವನದಲ್ಲಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನ 110ನೆಯ ಸಂಸ್ಥಾಪನೆ ದಿನಾಚರಣೆ ಆಚರಿಸಲಾಯಿತು.
ಪ್ರಜ್ಞಾವಂತ ಮತದಾರ ಪ್ರಜಾಪ್ರಭುತ್ವದ ಯಶಸ್ಸಿನ ರೂವಾರಿ : ಬಿ. ವಾಮದೇವಪ್ಪ
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಭಾರತ. ಇಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಚುನಾವಣೆಯಲ್ಲಿ ಮತದಾರ ತನ್ನ ಅಮೂಲ್ಯ ಮತ ಚಲಾವಣೆ ಮೂಲಕ ಪ್ರಜಾಪ್ರಭುತ್ವಕ್ಕೆ ಶಕ್ತಿಯನ್ನು ತುಂಬುತ್ತಾನೆ.
ಹರಿಹರ : ವಿಳಂಬ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆ
ಹರಿಹರ : ನಗರದ ದೊಡ್ಡಿ ಬೀದಿ ಬಡಾವಣೆಯಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರ ಸಕಾಲಕ್ಕೆ ಕಾಮ ಗಾರಿ ಪೂರ್ಣಗೊಳಿ ಸದೇ ಇರುವುದರಿಂದ ಬಡಾವಣೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಬಸವ ಜಯಂತಿ : ವಚನಾಮೃತ ಬಳಗದಿಂದ ಆರೋಗ್ಯ ತಪಾಸಣೆ
ನಗರದ ವಚನಾಮೃತ ಬಳಗ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ನಾರಾಯಣ ಹೃದಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ಪ್ರಯುಕ್ತ ಆರೋಗ್ಯ ತಪಾಸಣೆ ಹಾಗೂ ದತ್ತಿ ಅನುಭಾವವನ್ನು ಎಸ್. ಎಸ್. ಲೇಔಟ್ನ ಸುಪ್ರೀತ್ ಹಾಲ್ನಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿತ್ತು.
ಆವರಗೆರೆಯಲ್ಲಿ ಎಐವೈಎಫ್ ಸಂಸ್ಥಾಪನಾ ದಿನಾಚರಣೆ
ಅಖಿಲ ಭಾರತ ಯುವಜನ ಒಕ್ಕೂಟವು ನಗರದ ಹೊರ ವಲಯದ ಆವರಗೆರೆಯಲ್ಲಿ 65ನೇ ವರ್ಷದ ಸಂಸ್ಥಾಪನಾ ದಿನ ಆಚರಿಸಿತು.
ಹರಿಹರದಲ್ಲಿ ಚುನಾವಣಾ ಸಿಬ್ಬಂದಿಗೆ ಇಡಿಸಿ ವಿತರಣೆ
ಹರಿಹರ : ನಗರದ ಹರಪನಹಳ್ಳಿ ರಸ್ತೆಯ ಸೆಂಟ್ ಮೇರಿಸ್ ಶಾಲಾ ಆವರಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕರ್ತವ್ಯ ನಿರತ 1436 ಇಡಿಸಿ ಪತ್ರವನ್ನು ನೋಡಲ್ ಅಧಿಕಾರಿ ಬಿ.ಇ.ಒ.ಎಂ. ಹನುಮಂತಪ್ಪ ವಿತರಣೆ ಮಾಡಿದರು.
ಮತದಾನ ಜಾಗೃತಿಗಾಗಿ ಸಿದ್ಧಗಂಗಾ ವಿದ್ಯಾರ್ಥಿಗಳ `ಕೈ ಗೊಂಬೆ’ ಆಟ
ನಾಳೆ ದಿನಾಂಕ 7ರಂದು ಲೋಕಸಭೆ ಚುನಾವಣೆ ನಡೆಯಲಿದ್ದು, ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಅವರ ನಾಯಕತ್ವದಲ್ಲಿ ಮತ್ತು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಸುರೇಶ್ ಬಿ. ಇಟ್ನಾಳ್ ಅವರ ಮಾರ್ಗದರ್ಶನದಲ್ಲಿ ಮತದಾನ ಜಾಗೃತಿಗಾಗಿ ಹಲವಾರು ವಿನೂತನ ಕಾರ್ಯಕ್ರಮಗಳು ನಡೆದಿವೆ.
ಮಲೇಬೆನ್ನೂರಿನಲ್ಲಿ ಸಖಿ ಮತಗಟ್ಟೆ ಸ್ಥಾಪನೆ
ಮಲೇಬೆನ್ನೂರು : ರಾಜ್ಯ ದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ ನಾಳೆ ದಿನಾಂಕ 7 ರಂದು ಜರುಗಲಿದ್ದು, ಮಲೇಬೆನ್ನೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮತದಾನಕ್ಕೆ ಮತಗಟ್ಟೆಗಳು ಸಕಲ ರೀತಿಯಲ್ಲೂ ಸಜ್ಜಾಗಿ ಮತದಾರರನ್ನು ಸ್ವಾಗತಿಸುತ್ತಿವೆ.
ಹರಪನಹಳ್ಳಿ : 253 ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ
ಹರಪನಹಳ್ಳಿ : ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹರಪನಹಳ್ಳಿ ತಾಲೂಕಿನ 253 ಮತಗಟ್ಟೆಗಳಿಗೆ , ಅಧಿಕಾರಿಗಳು ಹೆಚ್ ಪಿ ಎಸ್ ಕಾಲೇಜಿನಿಂದ ವಿವಿ ಪ್ಯಾಟ್ ಹಾಗೂ ಇವಿಎಮ್ ಮತ ಯಂತ್ರಗಳೊಂದಿಗೆ ಬಸ್ ಮೂಲಕ ತೆರಳಿದರು.
ದಾವಣಗೆರೆ – ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ, ಗೌರವ
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಮೊನ್ನೆ ನಗರಕ್ಕಾಗಮಿಸಿದ್ದ ಮೈಸೂರು ರಾಜವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನಗರದ ಪ್ರತಿಷ್ಠಿತ ಬ್ಯಾಂಕುಗಳಲ್ಲೊಂದಾದ ದಾವಣಗೆರೆ - ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಭೇಟಿ ನೀಡಿದ್ದರು.
ಮತದಾರರನ್ನು ಆಕರ್ಷಿಸುತ್ತಿರುವ ಎಲೆಬೇತೂರಿನ `ಪಿಂಕ್ ಸಖಿ ಬೂತ್’
ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲೆಬೇತೂರು ಗ್ರಾಮ ದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾ ವಣೆ-2024 ಅಂಗವಾಗಿ ಮತದಾನ ಜಾಗೃತಿಯೊಂದಿಗೆ ಮಹಿಳಾ ಮತ ದಾರರನ್ನು ಆಕರ್ಷಿಸಲು ಮತ್ತು ಮತ ದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಿಸಲು `ಪಿಂಕ್ ಸಖಿ ಬೂತ್’ ನ ವ್ಯವಸ್ಥೆಯನ್ನು ಮಾಡಲಾಗಿದೆ.
ಹೊನ್ನೂರು : ನೀರಿನ ಸಂರಕ್ಷಣಾ ಮಾದರಿಯ ಧ್ಯೇಯ ಆಧಾರಿತ ಮತಗಟ್ಟೆ
ಜಿಲ್ಲಾ ಪಂಚಾಯತ ಸ್ವೀಪ್ ಸಮಿತಿ ಇವರ ನಿರ್ದೇಶನದನ್ವಯ ಹೊನ್ನೂರು ಗ್ರಾಮ ಪಂಚಾಯತಿ ವತಿಯಿಂದ ಹೊನ್ನೂರು ಗ್ರಾಮದ ಮತದಾನ ಕೇಂದ್ರದಲ್ಲಿ ನೀರಿನ ಸಂರಕ್ಷಣೆ ಅರಿವು ಮೂಡಿಸುವ ಹಾಗೂ ಮತದಾನ ಕೇಂದ್ರವನ್ನು ಮಾದರಿಯಾಗಿಸುವ ಹಿನ್ನಲೆಯಲ್ಲಿ ನೀರಿನ ಸಂರಕ್ಷಣಾ ಮಾದರಿಯ ದ್ಯೇಯ ಆಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ.
ಅಂಕಲಿಮಠದ ಶ್ರೀಗಳಿಂದ ಡಾ.ಪ್ರಭಾ ಅವರಿಗೆ ಆಶೀರ್ವಾದ
ರಾಯಚೂರು ಜಿಲ್ಲೆ, ಲಿಂಗಸೂರು ತಾಲ್ಲೂಕಿನ, ತಲೆಕಟ್ಟು ಗ್ರಾಮದ ಅಂಕಲಿ ಮಠದ ಅಂಕಲಿ ಶ್ರೀಗಳು ನಿನ್ನೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ರವರ ನಿವಾಸದಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವಂತೆ ಶಾಲು ಹೊದಿಸಿ, ಹೂವಿನ ಹಾರ ಅರ್ಪಿಸಿ, ಮಠದ ಪ್ರಸಾದ ನೀಡಿ ಆಶೀರ್ವದಿಸಿದರು.
ಚೀಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಸಚಿವ ಎಸ್ಸೆಸ್ಸೆಂ ಪ್ರಚಾರ
ನ್ಯಾಮತಿ : ಚೀಲೂರು ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ದಾವಣಗೆರೆ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಶಾಸಕ ಎಸ್ಸೆಸ್ರೊಂದಿಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮತಯಾಚನೆ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ 1,6,5 ಮತ್ತು 45ನೇ ವಾರ್ಡ್ಗಳ ವ್ಯಾಪ್ತಿಯಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರು ಮತ್ತು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮತ ಯಾಚಿಸಿದರು.