ಹೊನ್ನಾಳಿ : ನಾಳೆ ಲೋಕಾಯುಕ್ತ ಭೇಟಿ

ಹೊನ್ನಾಳಿ ಮೇ 7 – ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಲೋಕಾಯುಕ್ತ (ದಾವಣಗೆರೆ) ಪೊಲೀಸ್‌ ಅಧೀಕ್ಷಕ ಎಂ.ಎಸ್‌. ಕೌಲಾಪೂರೆ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ದೂರುಗಳ ಸ್ವೀಕಾರ ಕಾರ್ಯಕ್ರಮವನ್ನು  ನಾಡಿದ್ದು ದಿನಾಂಕ 9ರ ಗುರುವಾರ ಬೆಳಿಗ್ಗೆ 11.30ರಿಂದ ಮಧಾಹ್ನ 1.30ರವರೆಗೆ ಹಮ್ಮಿಕೊಳ್ಳಲಾಗಿದೆ.  ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದಂತೆ ದೂರುಗಳನ್ನು ಮಾತ್ರ ಸಲ್ಲಿಸಬಹುದು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್‌. ಕೌಲಾಪೂರೆ ತಿಳಿಸಿದ್ದಾರೆ.

error: Content is protected !!