ಆವರಗೆರೆಯಲ್ಲಿ ಎಐವೈಎಫ್‌ ಸಂಸ್ಥಾಪನಾ ದಿನಾಚರಣೆ

ಆವರಗೆರೆಯಲ್ಲಿ ಎಐವೈಎಫ್‌ ಸಂಸ್ಥಾಪನಾ ದಿನಾಚರಣೆ

ದಾವಣಗೆರೆ, ಮೇ 6 – ಅಖಿಲ ಭಾರತ ಯುವಜನ ಒಕ್ಕೂಟವು ನಗರದ ಹೊರ ವಲಯದ ಆವರಗೆರೆಯಲ್ಲಿ 65ನೇ ವರ್ಷದ ಸಂಸ್ಥಾಪನಾ ದಿನ ಆಚರಿಸಿತು. ಈ ವೇಳೆ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಒಕ್ಕೂಟ ಸಾಧನೆ ಕುರಿತು ಮಾತನಾಡಿದರು. ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಕಾರ್ಯದರ್ಶಿ ಎ. ತಿಪ್ಪೇಶ್, ಎನ್‌.ಟಿ ತಿಪ್ಪೇಸ್ವಾಮಿ, ಅಣ್ಣಪ್ಪ, ಗುರುಮೂರ್ತಿ, ಮಂಜುನಾಥ್, ಮಂಜು, ದುಗ್ಗೇಶ್, ನಾಗೇಂದ್ರ, ಪಿ. ಎಲ್. ಸುನೀಲ್, ಭೀಮಜ್ಜ,  ಸಂತೋಷ್, ಮಲ್ಲಿಕಾರ್ಜುನ್, ಶಿವು, ಮಹೇಶ್, ಕರಿಯಪ್ಪ, ಆನಂದ್, ಕೃಷ್ಣಮೂರ್ತಿ ಮತ್ತು ಇತರರಿದ್ದರು.

error: Content is protected !!