ರೈತ ವಿರೋಧಿ ಬಿಜೆಪಿ – ಮಿತ್ರ ಪಕ್ಷಗಳನ್ನು ಸೋಲಿಸಲು ಕರೆ

ದಾವಣಗೆರೆ, ಏ. 24-ರೈತ ವಿರೋಧಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳನ್ನು ಸೋಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಜಿ.ಎಂ. ವೀರಸಂಗಯ್ಯ ಕರೆ ನೀಡಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿಯಾ ಒಕ್ಕೂಟವನ್ನು ಬೆಂಬಲಿಸುವಂತೆ ಹೇಳಿದರು.

ಕಳೆದ ಹತ್ತು ವರ್ಷ ಆಡಳಿತ ನಡೆಸಿದ ಬಿಜೆಪಿ ರೈತರಿಗೆ ಯಾವ ಅನುಕೂಲವನ್ನೂ ಮಾಡಿಲ್ಲ. ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರುಗಳಾದ ಅರುಣ್ ಕುಮಾರ್ ಕುರುಡಿ, ಬುಳ್ಳಾಪುರದ ಹನುಮಂತಪ್ಪ, ಕರಡಿ ದುರ್ಗದ ಚೌಡಪ್ಪ, ಕೊಗ್ಗನೂರು ಹನುಮಂತಪ್ಪ, ಐಗೂರು ಶಿವಮೂರ್ತಪ್ಪ, ರೇವಣ್ಣ ಕರಿಲಕ್ಕೇನಹಳ್ಳಿ ಹಾಗೂ ಇತರರಿದ್ದರು.

error: Content is protected !!