ಲೋಕಸಭಾ ಚುನಾವಣೆ : ನಗರದಲ್ಲಿ ಪೊಲೀಸ್ ಪಥ ಸಂಚಲನ

ಲೋಕಸಭಾ ಚುನಾವಣೆ : ನಗರದಲ್ಲಿ ಪೊಲೀಸ್ ಪಥ ಸಂಚಲನ

ದಾವಣಗೆರೆ, ಮೇ 3- ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ನಿನ್ನೆ ಪೊಲೀಸ್ ಪಥ ಸಂಚಲನ ನಡೆಸಲಾಯಿತು.  

ಪಥ ಸಂಚಲನವು  ಹಗೇದಿಬ್ಬ  ವೃತ್ತದಿಂದ ಆರಂಭವಾಗಿ ಗಾಂಧಿನಗರ, ಶಿವಾಜಿ ವೃತ್ತ, ಹೊಂಡದ ವೃತ್ತ, ಅರುಣ ವೃತ್ತ, ರಾಮ್ ಅಂಡ್ ಕೋ ವೃತ್ತ, ಚಿಗಟೇರಿ ಆಸ್ಪತ್ರೆ ರಸ್ತೆ ಮೂಲಕ  ಸಾಗಿ ಗುಂಡಿ ವೃತ್ತದಲ್ಲಿ  ಮುಕ್ತಾಯವಾಯಿತು. ಸಿಇಓ  ಸುರೇಶ್ ಇಟ್ನಾಳ್ ಚಾಲನೆ ನೀಡಿದರು. ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ ಸಂತೋಷ್, ಜಿ. ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ನಿಶಿಮಪ್ಪ ಹಾಗೂ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್  ಸಿಬ್ಬಂದಿಗಳು, ಆರ್‌ಪಿಎಫ್ ಅಧಿಕಾರಿ, ಪೊಲೀಸ್ ಸಿಬ್ಬಂದಿಗಳೊಂದಿಗೆ ಪಥ ಸಂಚಲನವನ್ನು ನಡೆಸುವ ಮೂಲಕ ಶಾಂತಿಯುತವಾಗಿ ಹಾಗೂ ಭಯ ಮುಕ್ತವಾಗಿ ಮತದಾನ ನಡೆಸುವಂತೆ ಜಾಗೃತಿ ಮೂಡಿಸಲಾಯಿತು.

error: Content is protected !!