ದೇವಾಂಗ ಸಮಾಜದ ಜಗದ್ಗುರುಗಳ ಆಶೀರ್ವಾದ ಪಡೆದ ಎಸ್ಸೆಸ್ಸೆಂ

ದೇವಾಂಗ ಸಮಾಜದ ಜಗದ್ಗುರುಗಳ  ಆಶೀರ್ವಾದ ಪಡೆದ ಎಸ್ಸೆಸ್ಸೆಂ

ದಾವಣಗೆರೆ, ಮೇ 3-   ಜಿಲ್ಲಾ ಉಸ್ತುವಾರಿ ಸಚಿವ  ಎಸ್. ಎಸ್. ಮಲ್ಲಿಕಾರ್ಜುನ್ ಅವರು ದೇವಾಂಗ ಸಮಾಜದ ಶ್ರೀ ಗಾಯತ್ರಿ ಪೀಠ, ಹೇಮಕೂಟ, ಹಂಪಿಯ ಜಗದ್ಗುರು ಶ್ರೀ ದಯಾನಂದಪುರಿ ಮಹಾಸ್ವಾಮೀಜಿ   ಆಶೀರ್ವಾದ ಪಡೆದರು. 

ದೇವಾಂಗ ಸಮಾಜದವರು ಹಿಂದಿನಿಂದಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದ್ದು, ಈ ಬಾರಿಯು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತವನ್ನು ನೀಡಿ ಗೆಲ್ಲಿಸಬೇಕು ಎಂದರು. 

ಸಮಾಜದ ಬಾಂಧವರು ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮತವನ್ನು ಹಾಕಿ ಸಮಾಜದ ಇನ್ನಷ್ಟು ಅಭಿವೃದ್ಧಿ ಸಹಕರಿಸಿ ಎಂದರು.  ಈ ವೇಳೆ ಸಮಾಜದ ಮುಖಂಡರಾದ ರಮೇಶ್ ಅವರು ಸಚಿವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.    

error: Content is protected !!