ಚನ್ನಯ್ಯ ಒಡೆಯರ್ ಸಮಾಧಿಗೆ ಸಚಿವ ಎಸ್ಸೆಸ್ಸೆಂ ಪುಷ್ಪನಮನ

ಚನ್ನಯ್ಯ ಒಡೆಯರ್ ಸಮಾಧಿಗೆ ಸಚಿವ ಎಸ್ಸೆಸ್ಸೆಂ ಪುಷ್ಪನಮನ

ಜಗಳೂರು,ಮೇ 3- ಮೂರು ಬಾರಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ದಿ.ಚನ್ನಯ್ಯ ಒಡೆಯರ್ ಅವರ ಸಮಾಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್ ಅವರು ಇಂದು ಪುಷ್ಪ ನಮನ ಸಲ್ಲಿಸಿದರು. 

ಬಿಳಿಚೋಡು ಗ್ರಾಮದಲ್ಲಿ ದಿ. ಚನ್ನಯ್ಯ ಒಡೆಯರ್ ಹಾಗೂ ಅವರ ಸಹೋದರ ನಾಗಯ್ಯ ಒಡೆಯರ್ ಅವರ ಸಮಾಧಿಗಳಿಗೆ ನಮಿಸಿದರು. 1984 ರಿಂದ 1996 ವರೆಗೆ ದಿವಂಗತರ ರಾಜಕೀಯ ಸೇವೆಗಳನ್ನು ಸ್ಮರಿಸಿದರು. 

ಈ ಸಂದರ್ಭದಲ್ಲಿ ದಿ.ಚನ್ನಯ್ಯ ಒಡೆಯರ್ ಅವರ ಪುತ್ರರಾದ ಡಾ. ಉದಯಶಂಕರ್ ಒಡೆಯರ್, ಚಂದ್ರಶೇಖರ್ ಒಡೆಯರ್, ಶಿವಕುಮಾರ್ ಒಡೆಯರ್, ಶಾಸಕ ದೇವೇಂದ್ರಪ್ಪ, ಗಿರೀಶ್ ಒಡೆಯರ್, ಕಾಂಗ್ರೆಸ್ ಮುಖಂಡರಾದ ಡಾ.ಟಿ.ಜಿ.ರವಿಕುಮಾರ್, ಕೆ.ಪಿ ಪಾಲಯ್ಯ, ಕಲ್ಲೇಶ್‍ರಾಜ್ ಪಟೇಲ್, ಅಂಜಿನಪ್ಪ ಹಾಗೂ ಇತರರು ಉಪಸ್ಥಿತರಿದ್ದರು

error: Content is protected !!