ದಾವಣಗೆರೆ, ಮೇ 3- ನಗರದ ದೊಡ್ಡಪೇಟೆ ಶ್ರೀ ಬಸವೇಶ್ವರ ಸೇವಾ ಸಂಘದಿಂದ 113ನೇ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಇದೇ ದಿನಾಂಕ 10ರ ಶುಕ್ರವಾರ ಶ್ರೀ ಬಸವೇಶ್ವರರ ಬೆಳ್ಳಿ ಪುತ್ಥಳಿಯ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ದಿನಾಂಕ 9ರ ಗುರುವಾರ ಬೆಳಿಗ್ಗೆ ವಚನಾಭಿಷೇಕ ಮತ್ತು ಗಣಾರಾಧನೆ, ರಾತ್ರಿ 7.30ಕ್ಕೆ ಚೌಕಿಪೇಟೆ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿ ಭಜನಾ ಸಂಘದಿಂದ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಿನಾಂಕ 10ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಮಹಿಳೆಯರಿಂದ ತೊಟ್ಟಿಲು ಪೂಜೆ ನಂತರ ಸಂಜೆ ಅಡ್ಡಪಲ್ಲಕ್ಕಿಯಲ್ಲಿ ಶ್ರೀ ಬಸವೇಶ್ವರರ ಬೆಳ್ಳಿ ಪುತ್ಥಳಿಯ ಭವ್ಯ ಮೆರವಣಿಗೆ ನಡೆಯಲಿದೆ. ದಿನಾಂಕ 11ರ ಶನಿವಾರ ಸಾರ್ವಜನಿಕರಿಗೆ ಅನ್ನ ದಾಸೋಹ ಏರ್ಪಡಿಸಲಾಗಿತ್ತು, ಹಿರಿಯ ಕೈಗಾರಿಕೋದ್ಯಮಿ ಅಥಣಿ ಎಸ್. ವೀರಣ್ಣ ಮತ್ತು ಸಹೋದರರು ದಾಸೋಹ ಸೇವಾರ್ಥಿಗಳಾಗಿದ್ದಾರೆ.