ಕಾಳಿಕಾದೇವಿ ದೇವಸ್ಥಾನದಲ್ಲಿಂದು ಅಮಾವಾಸ್ಯೆ

ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ  ಯುಗಾದಿ ಅಮಾವಾಸ್ಯೆ ಪ್ರಯುಕ್ತ ಇಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಮತ್ತು ಗೋಧಿ ಉಡಿ ತುಂಬುವುದು, ನಂತರ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿರುತ್ತದೆ. ನಾಳೆ ಮಂಗಳವಾರ ಯುಗಾದಿ ಪಾಡ್ಯದಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಮಂಗಳಾರತಿ, ಸಂಜೆ 6-30ಕ್ಕೆ ಯುಗಾದಿ ಪ್ರಯುಕ್ತ ಶ್ರೀ ರಥೋತ್ಸವವನ್ನು ದೇವಸ್ಥಾನದಿಂದ ರಾಜಬೀದಿಗಳಲ್ಲಿ ನೆರವೇರಿಸಲಾಗುವುದು. 

error: Content is protected !!