ನೇಹಾ ಹತ್ಯೆಗೈದ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಲು ಮುಸ್ಲಿಂ ಸಮಾಜ ಆಗ್ರಹ

ನೇಹಾ ಹತ್ಯೆಗೈದ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಲು ಮುಸ್ಲಿಂ ಸಮಾಜ ಆಗ್ರಹ

ಜಗಳೂರು, ಏ. 21 – ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್‌ರವರನ್ನು ಬರ್ಬರವಾಗಿ ಹತ್ಯೆಗೈದ ನರಹಂತಕ ಫಯಾಜ್‌ನನ್ನು ಗಡೀಪಾರು ಮಾಡಿ ಗಲ್ಲು ಶಿಕ್ಷೆಗೊಳಪಡಿಸಬೇಕೆಂದು ತಾಲ್ಲೂಕು ಮುಸ್ಲಿಂ ಸಂಘದ ವತಿಯಿಂದ ಭಾನುವಾರ ಸಂಜೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮಹಾತ್ಮಗಾಂಧಿ ವೃತ್ತದವರೆಗೆ ಪ್ರಮುಖ ಬೀದಿಯ ಮೂಲಕ ಮುಸ್ಲಿಂ ಸಂಘದ ನೇತೃತ್ವದಲ್ಲಿ ನೂರಾರು ಜನರು ನರಹಂತಕ ಫಯಾಜ್ ವಿರುದ್ಧ ಘೋಷಣೆ ಕೂಗಿದರು.

 ನೇಹಾ ಹಿರೇಮಠ್ ಆತ್ಮಕ್ಕೆ ಶಾಂತಿ ಕೋರಿ ಮಾತನಾಡಿದ ಅವರು, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಜಾತಿ ಯಾಗಿದ್ದರೂ ಎಲ್ಲರೂ ಮನುಷ್ಯರೇ ಆದರೆ ಹುಬ್ಬಳ್ಳಿಯ ಕಾಲೇಜಿನ ಮುಂಭಾಗದಲ್ಲಿ ಹಾಡು-ಹಗಲೇ ಕೊಲೆಗೈದಿರುವುದು ಇಡೀ ಮನುಕುಲವೇ ತಲೆ ತಗ್ಗಿಸುವ ವಿಚಾರವಾಗಿದೆ. ಇಂತಹ ನರಹಂತಕನಿಗೆ ಯಾವುದೇ ಕೋರ್ಟ್ ಜಾಮೀನು ನೀಡದೇ ಗಲ್ಲು ಶಿಕ್ಷೆಯನ್ನು ವಿಧಿಸಿದರೆ ದೇಶದಲ್ಲಿ ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸುವುದಿಲ್ಲ. ಕೂಡಲೇ ಇವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಮೂಹಿಕವಾಗಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಯುವ ಮುಖಂಡ ಹನುಮಂತಾಪುರದ ಬರ್ಕತ್ ಆಲಿ, ಗ್ರಾಪಂ ಮಾಜಿ ಉಪಾಧ್ಯಕ್ಷ ನಜೀರ್ ಅಹಮ್ಮದ್, ಕೋಳಿ ಮುಸ್ತಫಾ, ಷಫೀವುಲ್ಲಾ, ಖಲೀಲ್ ವುಲ್ಲಾ ಖಾನ್, ಹೊನ್ನುರಾಲಿ, ಮಹಾಬುಬ್ ಆಲಿ, ಶೌಕತ್‌ಆಲಿ, ಖಲಂದರ್ ಸಾಬ್, ಜಲೀಲ್ ಬಾಷಾ, ಇನಾಯತ್, ತೌಸೀಫ್, ನೌಷಾದ್ ಆಲಿ, ಯೂಸೂಫ್, ಜಾಕೀರ್, ವಾಸಿಂ, ಬಾಬುಜಾನ್,   ಜೆ. ಮಹಾಲಿಂಗಪ್ಪ, ಸತೀಶ್. ಧನ್ಯಕುಮಾರ್ ಸೇರಿದಂತೆ ಮತ್ತಿತರರಿದ್ದರು.

error: Content is protected !!