ದಾವಣಗೆರೆ, ಏ.21- ಸಂತೇಬೆನ್ನೂರಿಗೆ ಶನಿವಾರ ಸಮರ್ಥ್ ಶಾಮನೂರು ಹಾಗೂ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಸಮಾಲೋಚನೆ ಮಾಡುವಾಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಅವರು ಕೋಟಿಗಟ್ಟಲೆ ಹಣ ಪಡೆದಿದ್ದಾರೆ ಎಂಬ ಆರೋಪ ಮಾಡಿದ್ದೆ ಎಂಬ ಹೇಳಿಕೆ ಸುಳ್ಳು. ಇದು ಸತ್ಯಕ್ಕೆ ದೂರವಾದದ್ದು ಎಂದು ಸಂತೇಬೆನ್ನೂರು ಕಾಂಗ್ರೆಸ್ ಮುಖಂಡ ಸಿದ್ಧಪ್ಪ ಅವರೇ ಸ್ಪಷ್ಟನೆ ನೀಡಿದ್ದಾರೆ.
ಸಮರ್ಥ ಅವರು ನಮ್ಮ ಮನೆಗೆ ಬಂದಿದ್ದರು. ಈ ವೇಳೆ ಸಭೆ ನಡೆಸಿದಾಗ ಮಾತನಾಡಿದ್ದೆ. ಬಿಜೆಪಿಯವರ ಬಳಿ ವಿನಯ್ ಕುಮಾರ್ ಅವರು ಹಣ ತೆಗೆದುಕೊಂಡಿದ್ದೇನೆ ಎಂದಿದ್ದು ತಪ್ಪು ಗ್ರಹಿಕೆ. ಅದು ತಪ್ಪು. ಯಾರೂ ಇದನ್ನು ನಂಬಬಾರದು ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ.