ರಾಣೇಬೆನ್ನೂರು : ಬಿಜೆಪಿಯತ್ತ ವಾಲಿದ ಆರ್. ಶಂಕರ್ ಜನ

ರಾಣೇಬೆನ್ನೂರು : ಬಿಜೆಪಿಯತ್ತ ವಾಲಿದ ಆರ್. ಶಂಕರ್ ಜನ

ರಾಣೇಬೆನ್ನೂರು, ಮಾ. 29 – ಮಾಜಿ ಸಚಿವ ಆರ್. ಶಂಕರ್ ಅಭಿಮಾನಿಗಳು, ಅವರ ಎನ್‌ಸಿಪಿ ಪಕ್ಷದ ಕಾರ್ಯಕರ್ತರು ಇಂದು ಸಾಮೂಹಿಕವಾಗಿ ಬಿಜೆಪಿ ಸೇರುವ ಸಭೆ ಪಕ್ಷದ ಕಾರ್ಯಾಲಯದಲ್ಲಿ ಲೋಕಸಭೆ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಜೆ ನಡೆಯಿತು.

ನಗರಸಭೆ ಸದಸ್ಯರಾದ ನಿಂಗರಾಜ ಕೋಡಿಹಳ್ಳಿ, ರಮೇಶ ಮೆಡ್ಲೇರಿ  ಮುಂತಾದವರ ಹಿರಿತನದಲ್ಲಿ ಮೆಡ್ಲೇರಿ, ಹೀಲದಹಳ್ಳಿ, ಚಂದಾಪೂರ, ಬೇಲೂರು ಗ್ರಾಮಗಳ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು, ಸಾರ್ವಜನಿಕರು,  ರಾಣೇಬೆನ್ನೂರು ನಗರದ ಅನೇಕ ಅಭಿಮಾನಿಗಳು ಸೇರಿದಂತೆ ಶಂಕರ್ ವರ್ತನೆಯಿಂದ ಅವರನ್ನು ತೊರೆದು ಬಿಜೆಪಿ ಸೇರಿದ್ದಾರೆ ಎಂದು ಕೋಡಿಹಳ್ಳಿ ವಿವರಿಸಿದರು.

 ಬಿಜೆಪಿ ಜಿಲ್ಲಾಧ್ಯಕ್ಷ ಅರುಣ
ಪೂಜಾರ ಪರಿಶ್ರಮದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಭೈರತಿ ಬಸವರಾಜ್‌, ಬಿ.ಸಿ.ಪಾಟೀಲ, ಎಸ್.ಎಸ್. ರಾಮಲಿಂಗಣ್ಣನವರ,  ಕೆ. ಶಿವಲಿಂಗಪ್ಪ, ಎ.ಬಿ. ಪಾಟೀಲ,  ಭಾರತಿ ಜಂಬಗಿ, ಭಾರತಿ ಅಳವಂಡಿ, ಪರಮೇಶ ಗೂಳಣ್ಣನವರ, ರಮೇಶ ಗುತ್ತಲ, ಪ್ರಮೋದ ಬದಾಮಿ ಮತ್ತಿತರರಿದ್ದರು.

error: Content is protected !!