ಚನ್ನಗಿರಿ, ಮಾ. 10 – ತಾಲ್ಲೂಕಿನ ತ್ಯಾವಣಿಗೆ ಸಮೀಪದ ಹರನಹಳ್ಳಿ – ಕೆಂಗಾಪುರ ಶ್ರೀ ರಾಮಲಿಂಗೇಶ್ವರ ಮಠದಲ್ಲಿ ಶ್ರೀ ರಾಮಲಿಂಗೇಶ್ವರ ಮಹಾಸ್ವಾಮಿಗಳ 48 ನೇ ವರ್ಷದ ಮುಳ್ಳು ಗದ್ದಿಗೆ ಉತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವ ಭಕ್ತ ಸಮೂಹದ ನಡುವೆ ಬಹು ವಿಜೃಂಭಣೆಯಿಂದ ಜರುಗಿತು. ನಂತರ ಉಚಿತ ಸಾಮೂಹಿಕ ವಿವಾಹ, ಜವಳ ಇತ್ಯಾದಿ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮವನ್ನು ಬಳ್ಳಾರಿಯ ಮಾಜಿ ಲೋಕಸಭಾ ಸದಸ್ಯರಾದ ವಿ.ಎಸ್. ಉಗ್ರಪ್ಪ ಉದ್ಘಾಟಿಸಿದರು.
ಬ್ರಹ್ಮ ಮಾಲೆ ಗುರು ದೀಕ್ಷೆ, ಸಂಜೆ ನಾಗದುಗ್ಗಳ ಕಾರ್ಯಕ್ರಮ, ಅಥಣಿ ತಾಲೂಕಿನ ಶ್ರೀ ರಾಮಲಿಂಗೇಶ್ವರ ಕಲಾ ತಂಡದಿಂದ ಸಂಗೀತ ಕಾರ್ಯಕ್ರಮ ಹಾಗೂ ಶ್ರೀ ರಾಮಲಿಂಗೇಶ್ವರ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.