ಬಾತಿ ಗ್ರಾಮದಲ್ಲಿ ಶ್ರೀ ವಿಠ್ಠಲ-ರುಕ್ಮಿಣಿ ದಿಂಡಿ ಉತ್ಸವ

ಬಾತಿ ಗ್ರಾಮದಲ್ಲಿ ಶ್ರೀ ವಿಠ್ಠಲ-ರುಕ್ಮಿಣಿ ದಿಂಡಿ ಉತ್ಸವ

ದಾವಣಗೆರೆ, ಫೆ. 16- ದೊಡ್ಡಬಾತಿ ಗ್ರಾಮದಲ್ಲಿ ಶ್ರೀ ವಿಠ್ಠಲ ರುಕ್ಮಿಣಿ ದೇವರ ದಿಂಡಿ ಉತ್ಸವ ಇಂದು ನಡೆಯಿತು.  ಶ್ರೀ ಹ.ಭ.ಪ. ಭಾನುದಾಸ್ ಸರ್ವದೆ ಅವರಿಂದ ಕೀರ್ತನೆಯಲ್ಲಿ ಎಲ್ಲರೂ ದೇವರ ನಾಮಸ್ಮರಣೆ ಮಾಡಬೇಕು.  ಸಾಧು, ಸಂತರು ತುಂಬಾ ಕಠೋರ ಸಾಧನೆ ಮಾಡಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆದುಕೊಂಡು ಹೋದರೆ ಸಾಕು ನಾವು ಧನ್ಯರಾಗುತ್ತೇವೆ ಎಂದು ಶ್ರೀ ಭಾನುದಾಸ್ ಮಹಾರಾಜ ಸ್ವಾಮಿಗಳು ನುಡಿದರು. 

ಭಜನಾ ಕಾರ್ಯಕ್ರಮವು  ಚಂದ್ರಕಾಂತ ವಾದೋನಿ (ದಾವಣಗೆರೆ) ಅವರ ನೇತತ್ವದಲ್ಲಿ ಜರುಗಿತು. ಗ್ರಾ.ಪಂ. ಸದಸ್ಯ ಕೆ.ಜಿ. ಉಮೇಶ್, ಸಿದ್ದಪ್ಪ, ಗಣೇಶ್, ರಾಮಚಂದ್ರ ತೇಲ್ಕರ್, ಮಂಜುನಾಥ್ ಮಾಂಡ್ರೆ, ವಿಠ್ಠಲ್ ವಂಡರ್ಕರ್ ಎಲ್ಲಾ ವಾರಕರಿ ಸದ್ಭಕ್ತರು ಉಪಸ್ಥಿತರಿದ್ದರು.

error: Content is protected !!