29 ಪ್ರಕರಣಗಳಲ್ಲಿ ಸುಳ್ಳು ಜಾಮೀನು ಪ್ರಮಾಣ ಪತ್ರ ನೀಡಿ ವಂಚನೆ: ಬಂಧನ

ದಾವಣಗೆರೆ, ಫೆ.16- ನಗರದ ವಿವಿಧ ನ್ಯಾಯಾಲಯಗಳಲ್ಲಿ 29 ಪ್ರಕರಣಗಳಲ್ಲಿ ಜಾಮೀನು ಭದ್ರತೆಗಾಗಿ ಆರೋಪಿಗಳಿಗೆ ಸುಳ್ಳು ಜಾಮೀನು  ಪ್ರಮಾಣ ಪತ್ರ ನೀಡಿದ ಹರಪನಹಳ್ಳಿ ತಾಲ್ಲೂಕು ಯಡಿಹಳ್ಳಿ ಗ್ರಾಮದ ಬಸವರಾಜಪ್ಪ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರಕರಣವೊಂದರಲ್ಲಿ ಜಾಮೀನುದಾರರ ವಿಚಾರಣೆ ನಡೆಯುವ ವೇಳೆ ಈತ ಈ ಪ್ರಕರಣಕ್ಕೆ ಮಾತ್ರ ತಾನು ಜಾಮೀನಿಗಾಗಿ ಜಮೀನು ಪಹಣಿಯನ್ನು ಭದ್ರತೆಗಾಗಿ ನೀಡಿರುತ್ತೇನೆ.  ಬೇರಾವುದೇ ನ್ಯಾಯಾಲಯದಲ್ಲಿ ನೀಡಿರುವುದಿಲ್ಲ ಎಂದು ಹೇಳಿಕೆ ನೀಡಿದ್ದ.

ನ್ಯಾಯಾಧೀಶರು  ಶ್ಯೂರಿಟಿ ಸೆಕ್ಯೂರಿಟಿ ಮ್ಯಾನೇಜ್‌ಮಂಟ್ ಅಪ್ಲಿಕೇಶನ್‌ನಲ್ಲಿ ಪರಿಶೀಲಿಸಿದಾಗ, ಈ ವ್ಯಕ್ತಿ 29 ಪ್ರಕರಣಗಳಲ್ಲಿ ಜಾಮೀನು ಭದ್ರತೆಗಾಗಿ ಇದೇ ಪಹಣಿಯನ್ನು ನೀಡಿದ್ದು ಕಂಡು ಬಂದಿದೆ.

ನ್ಯಾಯಾಧೀಶರು ಜಾಮೀನುದಾರ ಬಸವರಾಜ ಅವರನ್ನು ಪೊಲೀಸ್ ವಶಕ್ಕೆ ನೀಡಿ ಕ್ರಮ ಜರುಗಿಸಲು ಸೂಚಿಸಿದ್ದರ ಹಿನ್ನೆಲೆಯಲ್ಲಿ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!