ರಾಣೇಬೆನ್ನೂರು, ಏ.21- ಇಲ್ಲಿನ ಖನ್ನೂರ ವಿದ್ಯಾನಿಕೇತನ ಸ್ಕೂಲ್ನಲ್ಲಿ, ದಿವಂಗತ ಮಹಾದೇವಪ್ಪ ಎಂ. ಖನ್ನೂರ ಇವರ ಸ್ಮರಣಾರ್ಥವಾಗಿ ಭಾನುವಾರದಂದು 2ನೇ ಓಪನ್ ರಾಪಿಡ್ ಚೆಸ್ ಟೂರ್ನಮೆಂಟ್ ಯಶಸ್ವಿಯಾಗಿ ನಡೆಯಿತು.
ಜೆಎಸ್ಎಸ್ ಮೆಡಿಕಲ್ ಕಾಲೇಜಿನ ಪ್ರಜ್ವಲ್ (ಪ್ರಥಮ), ಆಂಧ್ರಪ್ರದೇಶದ ದುಲಿಪಾಲ್ ಚಂದ್ರಪ್ರಸಾದ (ದ್ವಿತೀಯ), ಶಿವಮೊಗ್ಗದ ಚಿರಂತ್ (ತೃತೀಯ) ಸ್ಥಾನ ಪಡೆದಿದ್ದಾರೆ.
ಬೆಸ್ಟ್ ಹಾವೇರಿ ವಿಭಾಗದಲ್ಲಿ ಎನ್.ಸಿ. ಮಹಾಲಿಂಗಪ್ಪ ಹಾಗೂ ಜೆ. ಮಹೇಶ್ ಆಯ್ಕೆಯಾಗಿದ್ದಾರೆ ಮತ್ತು ಬೆಸ್ಟ್ ರಾಣೇಬೆನ್ನೂರು ವಿಭಾಗದಲ್ಲಿ ಎಂ.ಕೆ. ಚೇತನ್ ಹಾಗೂ ಶ್ರೇಯಸ್ ಶೀಲವಂತರ ಆಯ್ಕೆಯಾಗಿದ್ದಾರೆ.