ರಾಣೇಬೆನ್ನೂರು : ಈಶ್ವರಾನಂದ ಶ್ರೀಗಳ ಶಾಶ್ವತ ಮೌನಕ್ಕೆ ಭಕ್ತರಲ್ಲಿ ಶೋಕ

ರಾಣೇಬೆನ್ನೂರು : ಈಶ್ವರಾನಂದ ಶ್ರೀಗಳ ಶಾಶ್ವತ ಮೌನಕ್ಕೆ ಭಕ್ತರಲ್ಲಿ ಶೋಕ

ರಾಣೇಬೆನ್ನೂರು ಮಾ. 5- ತಾಲ್ಲೂಕಿನ ಅಂಕಸಾಪುರ ಗ್ರಾಮದ ಶಿವಾನಂದ ಮಠದ ಈಶ್ವರಾನಂದ ಶ್ರೀಗಳು ಶಾಶ್ವತವಾಗಿ ಮೌನಕ್ಕೆ ಶರಣಾಗಿರುವುದು ಸಾವಿರಾರು ಭಕ್ತರಿಗೆ ದುಃಖವುಂಟು ಮಾಡಿದೆ ಎಂದು ರೈತ ಮುಖಂಡ ಎಫ್. ರವೀಂದ್ರಗೌಡ ಪಾಟೀಲ ಹೇಳಿದರು.

ಮಠದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಶ್ರೀಗಳು ಮೌನ ದಿಂದಲೇ ಸಾವಿರಾರು ಭಕ್ತರ ಮನಗೆದ್ದಿದ್ದಾರೆ. ಸದಾ ಭಗವಂತನ ಪೂಜೆಯಲ್ಲಿ ತೊಡಗಿದ ಗುರುಗಳು, ಭಕ್ತರಿಗೆ ಬೆಳ್ಳಿಯಂತಹ ಮಾತುಗಳನ್ನಾಡಿ ಆಶೀರ್ವಚನ ನೀಡುತ್ತಿದ್ದರು ಎಂದರು. ಯಾವುದೇ ಜಾತಿ, ಮತ, ಪಂಥಕ್ಕೆ ಒಳಗಾಗದೇ ಸರ್ವರಿಗೂ ಬೇಕಾಗಿದ್ದರು. ಅಲ್ಪ ಕಾಲಾವಧಿಯಲ್ಲಿ ಮೌನದಿಂದಲೇ ಹೆಚ್ಚು ಸಾಧನೆ ಮಾಡಿದ್ದಾರೆ ಎಂದು ತಿಳಿಸಿದರು. 

 ಹನುಮಂತಪ್ಪ ವೀನಕಟ್ಟಿ, ಸತೀಶ ಬಡಿಗೇರ, ಲಿಂಗರಾಜ ಮಡಿವಾಳರ, ದಿಳ್ಳೆಪ್ಪ ಸತ್ಯಪ್ಪನವರ, ಚಂದ್ರಣ್ಣ ಬೇಡರ, ಪುಟ್ಟಪ್ಪ ತಳವಾರ, ಸಂಜೀವಪ್ಪ ಗುಡಗೂರು, ಶಿವಪ್ಪ ಲಮಾಣಿ, ಮುಖಂಡರು ಮತ್ತು ವಿವಿಧ ಜಿಲ್ಲೆಗಳ ಭಕ್ತರು ಇದ್ದರು.

error: Content is protected !!