ಎಲೆಬೇತೂರಿನಲ್ಲಿ ಹನುಮ ಜಯಂತಿ ವಿಶೇಷ ಪೂಜೆ

ಎಲೆಬೇತೂರಿನಲ್ಲಿ ಹನುಮ ಜಯಂತಿ ವಿಶೇಷ ಪೂಜೆ

ದಾವಣಗೆರೆ, ಏ. 23- ಎಲೆಬೇತೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ  ಹನುಮ ಜಯಂತಿಯ ಪ್ರಯುಕ್ತ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 

ಶ್ರೀ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ ನಂತರ ವಸ್ತ್ರ ಅಲಂಕಾರ, ಗಂಧ, ಪುಷ್ಪ, ತುಳಸಿ, ವೀಳ್ಯೆದೆಲೆ, ಬಿಲ್ವಪತ್ರೆ ಅರ್ಚನೆ, ನೈವೇದ್ಯ ನಂತರ ಮಹಾಮಂಗಳಾರತಿ ನಂತರ ಹಯಗ್ರೀವ ಪ್ರಸಾದ  ವಿತರಿಸಲಾಯಿತು

ಈ ಪೂಜಾ ಕಾರ್ಯಕ್ರಮದ ವ್ಯವಸ್ಥೆಯನ್ನು ಬಿ.ಪಿ. ನಾಗರಾಜ್ ರಾವ್ ನೇತೃತ್ವದಲ್ಲಿ ಹಾಗೂ ನಾಗರಾಜ್ ಶಾನ್‌ಭೋಗ್ ಪೌರೋಹಿತ್ಯ ನಡೆಯಿತು. 

error: Content is protected !!