ನೇಹಾ ಹತ್ಯೆ ಖಂಡಿಸಿ ಹರಿಹರದಲ್ಲಿ ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ

ನೇಹಾ ಹತ್ಯೆ ಖಂಡಿಸಿ ಹರಿಹರದಲ್ಲಿ  ಹಿಂದೂ ಜಾಗರಣಾ ವೇದಿಕೆ ಪ್ರತಿಭಟನೆ

ಹರಿಹರ, ಏ.23- ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಅವರ ಹತ್ಯೆ ಖಂಡಿಸಿ ನಗರದಲ್ಲಿ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ ನಡೆಸಿ, ತಹಶೀ ಲ್ದಾರ್ ಗುರು ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು. 

ಮೆರವಣಿಗೆಯು ಮಾಜೇನಹಳ್ಳಿ ಶ್ರೀ ಗ್ರಾಮದೇವತೆ ದೇವಸ್ಥಾನದಿಂದ ಆರಂಭಗೊಂಡು ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಹರಪನಹಳ್ಳಿ ವೃತ್ತದವರೆಗೆ ಪ್ರತಿಭಟನಾ ಜಾಥಾ ಹೊರಟು ನಂತರ ತಹಶೀಲ್ದಾರ್ ಕಚೇರಿ ತಲುಪಿತು.

ಈ ವೇಳೆ ಶಾಸಕ ಬಿ.ಪಿ. ಹರೀಶ್, ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ಸತೀಶ್ ಪೂಜಾರ್. ಎಚ್‌. ದಿನೇಶ್, ಟಿ. ಕಾರ್ತಿಕ್, ಚಂದ್ರಕಾಂತ್ ಗೌಡ, ಶಿವು, ಬಿಜೆಪಿ ಮುಖಂಡರಾದ ಹಲಸಬಾಳು ಶಿವಾನಂದಪ್ಪ,  ಬಾತಿ ಚಂದ್ರಶೇಖರ್, ರಾಜು ರೋಖಡೆ, ಪರಶುರಾಮ ಕಾಟ್ವೆ, ಲಿಂಗರಾಜ್ ಹಿಂಡಸಗಟ್ಟ, ನಾಗರಾಜ್ ಭಂಡಾರೆ, ರೂಪ ಕಾಟ್ವೆ, ಅಂಬುಜಾ ಬಾಯಿ ರಾಜೋಳಿ, ಗುರುಬಸವರಾಜ್ ಮತ್ತು ಇತರರು ಭಾಗವಹಿಸಿದ್ದರು.

error: Content is protected !!