ಹರಪನಹಳ್ಳಿ, ಏ. 18- ಪಟ್ಟಣ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಜೋರಾಗಿ ಬೀಸಿದ ಗಾಳಿ- ಮಳೆಗೆ ಮರಗಳು ರಸ್ತೆಗೆ ಉರುಳಿದ ಘಟನೆ ಸಂಭವಿಸಿದೆ.
ಪಟ್ಟಣದ ಐಬಿ ವೃತ್ತ, ಯಲ್ಲಾಪುರದ ರಸ್ತೆ ಹಾಗೂ ನಗರದ ಹಾಲಸ್ವಾಮಿ ಮಠದ ಬಳಿ ಬೃಹತ್ ಬೇವಿನ ಮರ ರಸ್ತೆಗೆ ಉರುಳಿ ಕೆಲ ಕಾಲ ಸಂಚಾರಕ್ಕೆ ಅಡ್ಡಿಯಾದ ದೃಶ್ಯ ಕಂಡು ಬಂದಿದೆ. ಬಾಗಳಿ, ಶೃಂಗಾರತೋಟ, ಕೂಲಹಳ್ಳಿ, ಚಿಕ್ಕಹಳ್ಳಿ, ಯಲ್ಲಾಪುರ ಕಾಯಕದಹಳ್ಳಿ, ಕೋಡಿಹಳ್ಳಿ ಸೇರಿದಂತೆ ಕಸಬಾ ವ್ಯಾಪ್ತಿಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ಉತ್ತಮ ಮಳೆಯಾಗಿದೆ.