ಹಣಕ್ಕಾಗಿ ಮತ ಮಾರಿಕೊಳ್ಳದೆ ನನಗೆ ನೀಡಿ: ಎಂ.ಜಿ. ಶ್ರೀಕಾಂತ್

ಹಣಕ್ಕಾಗಿ ಮತ ಮಾರಿಕೊಳ್ಳದೆ  ನನಗೆ ನೀಡಿ: ಎಂ.ಜಿ. ಶ್ರೀಕಾಂತ್

ದಾವಣಗೆರೆ, ಏ.30- ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನವಭಾರತ ಸೇನಾ ಪಕ್ಷದ ವತಿಯಿಂದ ಸ್ಪರ್ಧಿಸಿದ್ದು, ತಮ್ಮ ಕ್ರಮ ಸಂಖ್ಯೆ 11ರ ಬೆಂಕಿ ಪಟ್ಟಣದ ಗುರುತಿಗೆ ಮತ ನೀಡುವಂತೆ ಅಭ್ಯರ್ಥಿ ಎಂ.ಜಿ. ಶ್ರೀಕಾಂತ್ ಮನವಿ ಮಾಡಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿ.ಬಿ. ರಸ್ತೆ ಅಗಲೀಕರಣ ಸೇರಿದಂತೆ, ಅನೇಕ ಸಮಸ್ಯೆಗಳ ಬಗ್ಗೆ ಸಾಮಾಜಿಕವಾಗಿ ಹೋರಾಟ ಮಾಡಿದ್ದೇನೆ. ಜನರ ಸಮಸ್ಯೆಗಳ ಅರಿವು ತಮಗಿದ್ದು, ಗೆದ್ದು ಸಂಸದನಾದರೆ ಜನರ ಸಮಸ್ಯೆಗಳನ್ನು ಖುದ್ದಾಗಿ ಪರಿಹರಿಸುತ್ತೇನೆ ಎಂದು ಹೇಳಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಾಣ, ಶಿಕ್ಷಣ, ಆರೋಗ್ಯ ಸುಧಾರಣೆ ನನ್ನ ಪ್ರಮುಖ ಆದ್ಯತೆಯಾಗಿದೆ. ಜನರು ತಮ್ಮ ಮತವನ್ನು ಹಣದಾಸೆಗೆ ಮಾರಾಟ ಮಾಡಿಕೊಳ್ಳದೆ ನನಗೆ ನೀಡುವಂತೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಅಡುಗೆ ಕಾರ್ಮಿಕರ ಸಂಘದ ಸದಸ್ಯರಾದ ಭಾಗ್ಯಮ್ಮ, ನ್ಯಾಯಕ್ಕಾಗಿ ಐಕ್ಯ ವೇದಿಕೆಯ ಕೆ.ಎನ್. ರವಿಕುಮಾರ್, ಲಕ್ಷ್ಮಿದೇವಿ, ಹೊನ್ನೂರು ಅಲಿ ಉಪಸ್ಥಿತರಿದ್ದರು.

error: Content is protected !!