ನಗರದಲ್ಲಿ ಇಂದು ಸಿಪಿಐ- ಎಐಟಿಯುಸಿ ನೇತೃತ್ವದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ

ಭಾರತ ಕಮ್ಯುನಿಸ್ಟ್ ಪಕ್ಷ ಮತ್ತು ಎಐಟಿಯುಸಿ ದಾವಣಗೆರೆ ಜಿಲ್ಲಾ ಮಂಡಳಿಗಳ ನೇತೃತ್ವದಲ್ಲಿ ಇಂದು ವಿಶ್ವ ಕಾರ್ಮಿಕ ದಿನಾಚರಣೆ ಆಚರಿಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ತಿಳಿಸಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಪಿ. ಬಸವನಗೌಡ ರಸ್ತೆ (ನಿಟುವಳ್ಳಿ ರಸ್ತೆಯ) ಎಸ್‌ಎಸ್‌ಪಿ. ಕಾಂಪ್ಲೆಕ್ಸ್ ಬಳಿಯಿಂದ ಕಾರ್ಮಿಕರ ಬೃಹತ್ ಮೆರವಣಿಗೆ ಆರಂಭಗೊಂಡು ನಗರದಲ್ಲಿ ಸಂಚರಿಸಿ ನಂತರ ಜಯದೇವ ಸರ್ಕಲ್ ಹತ್ತಿರದ ನಾಟ್ಯಾಚಾರ್ಯ ಕುಲಕರ್ಣಿ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಲಾಗುವುದು.

ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಬಿ. ಅಮ್ಜದ್‌ರವರು ಬಹಿರಂಗ ಸಭೆ ಉದ್ಘಾಟನೆ ನೆರವೇರಿಸಿ ಮಾತನಾಡುವರು. ಸಿಪಿಐ ಹಿರಿಯ ಮುಖಂಡ  ಆನಂದರಾಜ್ ಅಧ್ಯಕ್ಷತೆ ವಹಿಸುವರು.

ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ ನಾಯರಿ, ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಜಿ. ಉಮೇಶ್, ಟಿ.ಎಸ್. ನಾಗರಾಜ್, ಎಂ.ಬಿ. ಶಾರದಮ್ಮ, ರುದ್ರಮ್ಮ ಬೆಳಲಗೆರೆ, ಜಯಪ್ಪ, ವಿ. ಲಕ್ಷ್ಮಣ, ಟಿ.ಹೆಚ್. ನಾಗರಾಜ್, ಮಹಮದ್ ಭಾಷಾ, ಮಹಮ್ಮದ್ ರಫೀಕ್, ಅವರಗೆರೆ ವಾಸು, ಐರಣಿ ಚಂದ್ರು ಇತರರು ವೇದಿಕೆಯಲ್ಲಿರುವರು.

error: Content is protected !!