ನಗರದಲ್ಲಿ ನಾಳೆ ವೀರಭದ್ರೇಶ್ವರ ಸ್ವಾಮಿ ಗುಗ್ಗಳ

ದಾವಣಗೆರೆ, ಏ.30- ನಗರದ ಶಾಮನೂರು ರಸ್ತೆಯ ಎಸ್.ಎಸ್.ಬಡಾವಣೆ `ಎ’ ಬ್ಲಾಕ್‌ನಲ್ಲಿರುವ ಶ್ರೀ ಮಹಾಗಣಪತಿ, ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಹಾಗೂ ಕೆಂಡಾದರ್ಚನೆ ಕಾರ್ಯಕ್ರಮವು ದಿನಾಂಕ 2ರ ಗುರುವಾರ ಬೆಳಿಗ್ಗೆ ಎಡೆಯೂರು ಕ್ಷೇತ್ರದ ಷ|| ಬ್ರ|| ರೇಣುಕಾ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯುವುವು. ಅಂದು ಬೆಳಿಗ್ಗೆ 5 ಗಂಟೆಗೆ ರುದ್ರಾಭಿಷೇಕ ನಂತರ 7 ಗಂಟೆಗೆ ಮಹಾರಾಜಪೇಟೆಯಿಂದ ಗುಗ್ಗಳ ಹೊರಟು ದೇವಸ್ಥಾನ ತಲುಪಿದ ನಂತರ ಕೆಂಡದಾರ್ಚನೆ ನಡೆಯಲಿದೆ.

error: Content is protected !!