ಹರಳಹಳ್ಳಿಯಲ್ಲಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ

ಹರಳಹಳ್ಳಿಯಲ್ಲಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ

ಹರಿಹರ, ಏ.18- ನಗರದ ಹೊರವಲಯದ ಹರಳಹಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಮುಳ್ಳು ಗದ್ದಿಗೆ ಉತ್ಸವಕ್ಕೆ ಟ್ರ್ಯಾಕ್ಟರ್‌ನಲ್ಲಿ ಮುಳ್ಳು ತೆಗೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಟ್ರ್ಯಾಕ್ಟರ್ ಸ್ಟೇರಿಂಗ್ ಕಟ್ ಆಗಿದ್ದರಿಂದ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿ ಆದ ಪರಿಣಾಮ ಟ್ರ್ಯಾಕ್ಟರ್ ನಲ್ಲಿದ್ದ ಹಲವು ಯುವಕರಿಗೆ ಗಾಯಗಳಾಗಿದೆ. 

ಗ್ರಾಮದ ರಸ್ತೆಯ ಮಾರ್ಗವಾಗಿ ಚುನಾವಣೆ ಪ್ರಚಾರಕ್ಕೆ ಹೋಗುತ್ತಿದ್ದ ಜಿ.ಎಂ. ಸಿದ್ದೇಶ್ವರ ಅವರ ಪುತ್ರಿ ಅಶ್ವಿನಿಯವರು ಗಾಯಾಳುಗಳನ್ನು ಹರಿಹರ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ಮುಂದಾಗಿ ಮಾನವೀಯತೆಯನ್ನು ಮೆರೆದಿದ್ದಾರೆ. ನಂತರ ಗ್ರಾಮಸ್ಥರು ಶಾಸಕ ಬಿ.ಪಿ. ಹರೀಶ್ ಅವರ ಗಮನಕ್ಕೆ ತಂದಾಗ, ಹರೀಶ್ ಅವರೂ ಸಹ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಗಾಯಗೊಂಡವರ ಯೋಗಕ್ಷೇಮ ವಿಚಾರಿಸಿದರು. 

ಈ ವೇಳೆ ಮಲ್ಲಿಕಾರ್ಜುನ್ ಮತ್ತು ರಾಜೇಶ್ ಎಂಬುವವರಿಗೆ  ತೀವ್ರತರಹದ ಗಾಯಗಳಾಗಿದ್ದು, ಉಳಿದಂತೆ ಮಂಜುನಾಥ್, ಮಲ್ಲೇಶ್, ಹರೀಶ್, ಅಜ್ಜಯ್ ಮಂಜುನಾಥ್, ಟಿ.ಆನಂದ್, ಮಹಾಂತೇಶ್ ಇತರರಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

error: Content is protected !!