ರಂಗಿನಲಿ ಮಿಂದೆದ್ದ ರಾಣೇಬೆನ್ನೂರು

ರಂಗಿನಲಿ ಮಿಂದೆದ್ದ ರಾಣೇಬೆನ್ನೂರು

ರಾಣೇಬೆನ್ನೂರು, ಮಾ. 8-  ಪ್ರತಿ ವರ್ಷ ತಮ್ಮ ಮಕ್ಕಳು ಮರಿಗಳೊಂದಿಗೆ ಮನೆ ಮುಂದೆಯೇ ಬಣ್ಣ ಎರಚಿಕೊಂಡು ಸಂಭ್ರಮದಲ್ಲಿ ಮಿಂದೇಳುತ್ತಿದ್ದ ಅನೇಕ ಯುವತಿಯರು ಈ ಬಾರಿ ನಗರದಾದ್ಯಂತ ಸಂಚರಿಸಿದ್ದು ಕಂಡು ಬಂದಿತು. 

ಕಂಕುಳಲ್ಲಿ ಮಕ್ಕಳನ್ನೆತ್ತಿಕೊಂಡು ಕುಣಿದು ಕುಪ್ಪಳಿಸಿದ ನೋಟ ಬಹಳಷ್ಟು ಆಕರ್ಷಣೀಯವಾಗಿತ್ತು. ಬೆಳಿಗ್ಗೆ 7 ಗಂಟೆಗೆ ಗಲ್ಲಿ ಗಲ್ಲಿಗಳಲ್ಲಿ ಪೋರ-ಪೋರಿಯರ  ಎರಚಾಟ ಪ್ರಾರಂಭಗೊಂಡಿದ್ದು,  ಬಿಸಿಲೇರಿದಂತೆ  ನಗರದಾದ್ಯಂತ ಪಸರಿಸಿತು.  

ಅಲ್ಲಲ್ಲಿ ಕಾಂಗ್ರೆಸ್ ನ ಪ್ರಕಾಶ ಕೋಳಿವಾಡ, ಜೆಡಿಎಸ್ ನ ಮಂಜುನಾಥ ಗೌಡ ಶಿವಣ್ಣನವರ,  ನವಯುಗದ ಸಂತೋಷ ಪಾಟೀಲ, ನಗರಸಭೆಯ ಅನೇಕ ಸದಸ್ಯರು, ಕೃಷಿ ಪದವೀಧರ ಸಂಘದವರು, ವರ್ತಕರು, ನೇಕಾರರು,   ಯುವಕರ ಪಡೆ ಹೀಗೆ  ಎಲ್ಲರೂ   ತಮ್ಮ ತಮ್ಮ ಸಮಭಾವದ, ಸಮಚಿತ್ತದವರೊಂದಿಗೆ  ಸಂಚರಿಸಿದ ಸಂಭ್ರಮ 12 ಗಂಟೆಗೆ ಕಾಮಣ್ಣನಿಗೆ ಅಗ್ನಿ ಸ್ಪರ್ಶ ಮಾಡುವುದರೊಂದಿಗೆ ಮಧ್ಯಾಹ್ನ ಎರಡು ಗಂಟೆಗೆ ಕೊನೆಗೊಂಡಿತು.

error: Content is protected !!