ಮಲೇಬೆನ್ನೂರು, ಏ.18- ಗುರುವಾರ ಸಂಜೆ ಸಿಡಿಲು ಬಡಿದು ಗರ್ಭವಿದ್ದ ಆಕಳು ಸಾವನ್ನಪ್ಪಿರುವ ಘಟನೆ ಕುಂಬಳೂರಿನಲ್ಲಿ ನಡೆದಿದೆ. ಗ್ರಾಮದ ಮಾಗಾನಹಳ್ಳಿ ಹಾಲಪ್ಪ ಅವರ ದನದ ಕೊಟ್ಟಿಗೆಯಲ್ಲಿ ಈ ಘಟನೆಯಾಗಿದೆ.
ಮಳೆ ಸಿಂಚನ : ಗುರುವಾರ ಸಂಜೆ ಮಲೇಬೆನ್ನೂರು, ಕುಂಬಳೂರು, ಜಿಗಳಿ, ಸಿರಿಗೆರೆ, ಕೊಕ್ಕನೂರು, ದೇವರಬೆಳಕೆರೆ, ಹಾಲಿವಾಣ ಗ್ರಾಮಗಳಲ್ಲಿ ಗಾಳಿ-ಗುಡುಗು-ಸಿಡಿಲಿನೊಂದಿಗೆ ಮಳೆಯ ಸಿಂಚನವಾಗಿದೆ.