ಹರಿಹರ, ಏ, 18- ನಗರದಲ್ಲಿ ಶ್ರೀ ಕಾಳಿಕಾದೇವಿ ರಥೋತ್ಸವ ಶ್ರದ್ಧಾ – ಭಕ್ತಿ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಸಹಸ್ರಾ ರ್ಜುನ ವೃತ್ತದಲ್ಲಿರುವ ಕಾಳಿಕಾದೇವಿ ದೇವಸ್ಥಾನದಲ್ಲಿ ದೇವಿಗೆ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನಡೆದು, ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಹಿಳೆಯರು ಆರತಿ ಹಿಡಿದು ಸಾಗಿದರು. ಸಮಾಳ, ಬ್ಯಾಂಡ್ ಸೆಟ್, ಡ್ರಮ್ ಸೆಟ್ ಸೇರಿದಂತೆ ವಿವಿಧ ಕಲಾಮೇಳಗಳು ಭಾಗವಹಿಸಿ ರಥೋತ್ಸವಕ್ಕೆ ಮೆರಗು ನೀಡಿದವು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಶಂಕರ್ ಖಟಾವ್ಕರ್, ಮೌನೇಶ್ವರ ಆಚಾರ್, ಯಶವಂತ್ ಆಚಾರ್, ನಾಗರಾಜ್ ಆಚಾರ್, ಜನಾರ್ದನ ಆಚಾರ್, ಓಂಕಾರ ಆಚಾರ್, ಗೋಪಾಲ ಆಚಾರ್, ಬಸವರಾಜ್ ಆಚಾರ್, ತಿಪ್ಪೇಶ್ ಆಚಾರ್, ವಿಜಯ ಕುಮಾರ್, ಸುನಂದಾ ಆಚಾರ್, ಇಂದ್ರಮ್ಮ ಆಚಾರ್, ಗೀತಾ ಆಚಾರ್, ಲಕ್ಷ್ಮಿ ಆಚಾರ್ ಹಾಗೂ ವಿಶ್ವಕರ್ಮ ಸಮಾಜದ ಭಕ್ತರು ಹಾಜರಿದ್ದರು.