ಜಾಕ್‌ವೆಲ್‌ ಬಳಿ ನೀರಿಗೆ ಗುಂಡಿ ನಿರ್ಮಾಣ

ಜಾಕ್‌ವೆಲ್‌ ಬಳಿ ನೀರಿಗೆ ಗುಂಡಿ ನಿರ್ಮಾಣ

ಹರಿಹರ, ಏ.17- ಇಲ್ಲಿನ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ನಗರಕ್ಕೆ ನೀರು ಪೂರೈಸುವ ಜಾಕ್‌ವೆಲ್‌ ಬಳಿ ಸಮರ್ಪಕ ನೀರು ನಿಲ್ಲುವಂತೆ ನಗರಸಭೆ ಪೌರಾಯುಕ್ತ ಐಗೂರು ಬಸವರಾಜ್‌ ಮತ್ತು   ಜಲಸಿರಿ ಅಧಿ ಕಾರಿ ನವೀನ್‌ ಕುಮಾರ್‌ ಜೆಸಿಬಿಯಿಂದ ಗುಂಡಿ ತೆಗೆಸಿದರು.

ನದಿಯಲ್ಲಿ ನೀರು ನಿಲ್ಲಿಸಲು ಈಗಾಗಲೇ ಮರಳು ಚೀಲದ ತಡೆಗೋಡೆ ಮಾಡಿದ್ದರೂ, ಕಳೆದ ನಾಲ್ಕು ದಿನದಿಂದ ನೀರು ಸರಬರಾಜು ಮಾಡುವಲ್ಲಿ ತೊಂದರೆಯಾಗುತ್ತಿದೆ. ಮಳೆ ಆಗದಿದ್ದರೆ ನಗರಕ್ಕೆ ಕನಿಷ್ಠ 2 ದಿನಗಳ ಕಾಲ ಸಮರ್ಪಕ ನೀರು ಸರಬರಾಜು ಮಾಡಲು ಸಾಧ್ಯ ಎಂದು ತಿಳಿಸಿದರು.

error: Content is protected !!