ಹರಳಹಳ್ಳಿ : ನೂತನ ರಥಕ್ಕೆ ಕಳಸಾರೋಹಣ, ಇಂದು ರಥೋತ್ಸವ

ಹರಳಹಳ್ಳಿ : ನೂತನ ರಥಕ್ಕೆ ಕಳಸಾರೋಹಣ, ಇಂದು ರಥೋತ್ಸವ

ಮಲೇಬೆನ್ನೂರು, ಏ.16- ಸಮೀಪದ ಹರಳಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ರಥಕ್ಕೆ ಮಂಗಳವಾರ ಬೆಳಗ್ಗೆ ಕಣ್ವಕುಪ್ಪೆ ಗವಿಮಠದ ಶ್ರೀ ಡಾ. ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಳಸಾರೋಹಣ ಸಂಭ್ರಮದಿಂದ ನಡೆಯಿತು. ರಾತ್ರಿ ಚಿಗರಿ ಉತ್ಸವ ಜರುಗಿತು.

ಇಂದು ತೇರು : ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿಯ ರಥೋತ್ಸವವು ಇಂದು ತಡ ರಾತ್ರಿ (ಗುರುವಾರ ಬೆಳಗಿನ ಜಾವ) ವೈಭವದೊಂದಿಗೆ ಜರುಗಲಿದೆ.

ರಥೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ 8 ಗಂಟೆಗೆ ಗಜೋತ್ಸವ, ಗಂಡುಗತ್ತಿ ಹಾಯುವುದು. ಮಧ್ಯಾಹ್ನ 12.30ಕ್ಕೆ ಭಕ್ತರು ದೇವಸ್ಥಾನಕ್ಕೆ ಅಕ್ಕಿಪಡಿ ಹಾಕುವ ಸೇವಾ ಕಾರ್ಯಕ್ರಮ ನಡೆಯಲಿದೆ.

error: Content is protected !!