`ಆಪ್ತಮಿತ್ರ’ ಸಂಭ್ರಮೋತ್ಸವದಲ್ಲಿ ಭಾಗವಹಿಸಿದ್ದ ದ್ವಾರಕೀಶ್

`ಆಪ್ತಮಿತ್ರ’ ಸಂಭ್ರಮೋತ್ಸವದಲ್ಲಿ ಭಾಗವಹಿಸಿದ್ದ ದ್ವಾರಕೀಶ್

ದಾವಣಗೆರೆ, ಏ. 16- ಕನ್ನಡ ಚಿತ್ರ ರಂಗದ ಜನಪ್ರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರ ನಿಧನಕ್ಕೆ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರೂ, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

2004ರಲ್ಲಿ ದ್ವಾರಕೀಶ್ ಅವರು ನಿರ್ಮಿಸಿದ್ದ ವಿಷ್ಣುವರ್ಧನ್ ಅಭಿನಯದ `ಆಪ್ತಮಿತ್ರ’ ಚಿತ್ರವು ನಗರದ ತ್ರಿಶೂಲ್ ಚಿತ್ರಮಂದಿರದಲ್ಲಿ 200 ದಿನ ಪ್ರದರ್ಶನ ಕಂಡ ಸಂದರ್ಭದಲ್ಲಿ ನಡೆದ ಸಂಭ್ರಮೋತ್ಸವ ಕಾರ್ಯಕ್ರಮದಲ್ಲಿ ದ್ವಾರಕೀಶ್ ಅವರು ಭಾಗವಹಿಸಿದ್ದನ್ನು  ಗೋವಿಂದರಾಜ್ ಸ್ಮರಿಸಿದ್ದಾರೆ.

ದ್ವಾರಕೀಶ್ ಅವರಲ್ಲದೇ, ವಿಷ್ಣುವರ್ಧನ್, ರಮೇಶ್ ಅರವಿಂದ್, ಪ್ರೇಮಾ ಅವರುಗಳಲ್ಲದೇ, ಸಚಿವ ಶಾಮನೂರು ಮಲ್ಲಿಕಾರ್ಜುನ್ ಸೇರಿದಂತೆ, ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ದ್ವಾರಕೀಶ್ ಅವರು ಆಡಿದ ಮಾತುಗಳನ್ನು ಗೋವಿಂದರಾಜ್ ಮೆಲುಕು ಹಾಕಿದ್ದಾರೆ. 

error: Content is protected !!