ಗೊಲ್ಲರಹಳ್ಳಿಯಲ್ಲಿ ನಾಡಿದ್ದು ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

ಗೊಲ್ಲರಹಳ್ಳಿಯಲ್ಲಿ ನಾಡಿದ್ದು ಶ್ರೀ ಲಕ್ಷ್ಮಿ ವೆಂಕಟೇಶ್ವರ  ಸ್ವಾಮಿ ಬ್ರಹ್ಮರಥೋತ್ಸವ

ದಾವಣಗೆರೆ, ಏ. 14 – ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ  ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೆಂಕಟೇಶ್ವರ ಸ್ವಾಮಿಯ  ಬ್ರಹ್ಮ ರಥೋತ್ಸವ ಇದೇ ದಿನಾಂಕ 17 ರಂದು ಸಂಜೆ  4ಕ್ಕೆ ಜರುಗಲಿದೆ.

ನಾಳೆ ದಿನಾಂಕ 15ರ ಸೋಮವಾರ ಸಂಜೆ 6ಕ್ಕೆ ಗಣಪತಿ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ರಾತ್ರಿ 7.15ಕ್ಕೆ ಕಂಕಣ ಧಾರಣೆ, ಗಜೋತ್ಸವ, ಬನ್ನಿ ಪೂಜೆ ನಡೆಯಲಿವೆ. ದಿನಾಂಕ 16ರಂದು ಸಂಜೆ 6ಕ್ಕೆ ಸರ್ಪೋತ್ಸವ ಪೂಜೆ, ಬನ್ನಿ ಪೂಜೆ ಹಾಗೂ ಗಂಗಾಪೂಜೆ ನಡೆಯಲಿವೆ. ದಿನಾಂಕ 17 ರಂದು ಬೆಳಿಗ್ಗೆ  11.15ಕ್ಕೆ ರಥಕ್ಕೆ ಕಳಸ ಪ್ರತಿಷ್ಠಾಪನೆ, ರಥಕ್ಕೆ ಅರಿಶಿನ ಸೇವೆ ಹಾಗೂ ಕುಂಕುಮ ಪೂಜೆ ನಡೆಯಲಿವೆ. ಬೆಳಿಗ್ಗೆ 11.45 ಕ್ಕೆ ತಿರುಪತಿ ಮಾದರಿಯಲ್ಲಿ ಅನ್ನ ಸಂತರ್ಪಣೆ, ಸಂಜೆ 4ಕ್ಕೆ ಸ್ವಾಮಿ ರಥೋತ್ಸವ ನಡೆಯಲಿದೆ. ದಿನಾಂಕ 18 ರಂದು ಬೆಳಗ್ಗೆ ಓಕುಳಿ ಕಾರ್ಯಕ್ರಮ, ಬನ್ನಿ ಪೂಜೆ ನಡೆಯಲಿದೆ.

error: Content is protected !!