ನಾಳೆಯಿಂದ ಹರಿಹರ ತಾ.ನಲ್ಲಿ ಬಿಜೆಪಿ – ಜೆಡಿಎಸ್ ಜಂಟಿ ಪ್ರಚಾರ

ನಾಳೆಯಿಂದ ಹರಿಹರ ತಾ.ನಲ್ಲಿ ಬಿಜೆಪಿ – ಜೆಡಿಎಸ್ ಜಂಟಿ ಪ್ರಚಾರ

ಮಲೇಬೆನ್ನೂರು, ಏ.12- ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಹರಿಹರ ತಾಲ್ಲೂಕಿನಲ್ಲಿ ನಾಳೆ ದಿನಾಂಕ 14 ರಿಂದ 18 ರವರೆಗೆ ಬಿಜೆಪಿ – ಜೆಡಿಎಸ್ ನಾಯಕರು ಜಂಟಿ ಪ್ರಚಾರ ನಡೆಸಲಿದ್ದಾರೆ.

ದಿನಾಂಕ 14ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಉಕ್ಕಡಗಾತ್ರಿಯಿಂದ ಪ್ರಾರಂಭವಾಗುವ ಜಂಟಿ ಪ್ರಚಾರವು ನಂತರ ನಂದಿಗುಡಿ, ವಾಸನ, ನಂದೀಶ್ವರ ಕ್ಯಾಂಪ್, ಕೆ.ಎನ್.ಹಳ್ಳಿ, ಕೊಕ್ಕನೂರು, ಹಿಂಡಸಘಟ್ಟ, ಗೋವಿನಹಾಳ್, ಮೂಗಿನಗೊಂದಿ, ಜಿ.ಟಿ.ಕಟ್ಟಿ, ಕಂಭತ್ತನಹಳ್ಳಿ, ಹಳ್ಳಿಹಾಳ್, ಜಿ.ಬೇವಿನಹಳ್ಳಿ, ವ.ಬಸಾಪುರ, ಜಿಗಳಿ, ಯಲವಟ್ಟಿ, ಲಕ್ಕಶೆಟ್ಟಿಹಳ್ಳಿ, ಕಮಲಾಪುರ, ಭಾನುವಳ್ಳಿ, ರಾಮತೀರ್ಥ ಮತ್ತು ನಾಗೇನಹಳ್ಳಿ ಗ್ರಾಮಗಳಲ್ಲಿ ನಡೆಯಲಿದೆ.

ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ತಾ. ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟಿ ಲಿಂಗರಾಜ್, ಅಜಿತ್ ಸಾವಂತ್, ತಾ. ಜೆಡಿಎಸ್ ಅಧ್ಯಕ್ಷರಾದ ಹಳ್ಳಿಹಾಳ್ ಪರಮೇಶ್ವರಪ್ಪ, ಪ್ರೇಮ್‌ಕುಮಾರ್ ಅವರು ಜಂಟಿ ಪ್ರಚಾರ ತಂಡದಲ್ಲಿ ಭಾಗವಹಿಸಲಿದ್ದಾರೆ.

ದಿನಾಂಕ 15, 16, 17 ರಂದು ಕೊಂಡಜ್ಜಿ, ಬೆಳ್ಳೂಡಿ, ಭಾನುವಳ್ಳಿ ಜಿ.ಪಂ. ಕ್ಷೇತ್ರಗಳಲ್ಲಿ ಮತ್ತು ಮಲೇಬೆನ್ನೂರು ಪಟ್ಟಣದಲ್ಲಿ ಹಾಗೂ 18 ರಂದು ಹರಿಹರ ನಗರದಲ್ಲಿ ಪ್ರಚಾರ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!