ನಗರದಲ್ಲಿ ಇಂದು ಡಾ.ರಂಗನಾಥನ್ ಭಾವಚಿತ್ರ ಅನಾವರಣ

ಬಿಇಎ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಇಂದು ಮಧ್ಯಾಹ್ನ 3 ಗಂಟೆಗೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾರತದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್  ಅವರ ಭಾವಚಿತ್ರ ಅನಾವರಣ, ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ.

ದಾವಣಗೆರೆ ವಿವಿ ಪ್ರಭಾರಿ ಗ್ರಂಥಪಾಲಕರಾದ ಡಾ.ಜಿ.ನೀಲಮ್ಮ ಭಾವಚಿತ್ರ ಅನಾವರಣ ಮಾಡಿ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಬಿಇಎ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಗ್ರಂಥಪಾಲಕ ವೈ.ಎಂ. ದಯಾನಂದಸ್ವಾಮಿ,  ಐಕ್ಯೂಎಸಿ ಘಟಕದ ಸಂಯೋಜಕ ಕೆ.ಮುರುಗೇಶಿ ಭಾಗವಹಿಸಲಿದ್ದಾರೆ. ಕಾಲೇಜಿನ ಪ್ರಾಚಾರ್ಯರಾದ ಡಾ. ಎ.ಜೆ. ನೀತಾ ಅಧ್ಯಕ್ಷತೆ ವಹಿಸಲಿದ್ದಾರೆ.

error: Content is protected !!