ಹರಿಹರದಲ್ಲಿ ಇಂದು ಕದಳಿ ಮಹಿಳಾ ವೇದಿಕೆಯಿಂದ ಮಹಿಳಾ ದಿನಾಚರಣೆ

ಹರಿಹರ ತಾಲ್ಲೂಕು ಕದಳಿ ಮಹಿಳಾ ವೇದಿಕೆಯ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಎಚ್‌.ಕೆ.ವಿ. ಸಮುದಾಯ ಭವನದಲ್ಲಿ ಸಂಜೆ 4 ಕ್ಕೆ ಇಂದು ನಡೆಯಲಿದೆ. 

ಲಿಂ. ಶಾಂತಮ್ಮ ನಿಂಗಪ್ಪ ಮತ್ತು ಲಿಂ. ನಿಂಗಪ್ಪ ನಾರವ್ವರ ದತ್ತಿ ದಾನಿಗಳಾದ ಹರಿಹರದ ಶ್ರೀಮತಿ ಮಂಜುಳ ನಾರಪ್ಪ ನಡೆಸಿಕೊಡಲಿದ್ದಾರೆ.

ಕೆ.ಬಿ. ಪರಮೇಶ್ವರಪ್ಪ ಉದ್ಘಾಟಿಸುವರು. ಹುಲಿಕಟ್ಟೆ ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸುಮತಿ ಜಯ್ಯಪ್ಪ ವಚನ ಸಾಹಿತ್ಯದಲ್ಲಿ ಮಹಿಳಾ ಅಸ್ಮಿತೆ ವಿಷಯ ಕುರಿತು ಮಾತನಾಡುವರು. ಗಾಯತ್ರಿ ವಸ್ತ್ರದ್‌ ಸೇವಾ ದೀಕ್ಷೆ ಬೋಧಿಸುವರು. ಹರಿಹರ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ರೂಪಾ ನಾಗರಾಜ್‌ ಕುರುವತ್ತಿ ಸೇವಾ ದೀಕ್ಷೆ ಸ್ವೀಕಾರ, ಹೆಚ್‌.ಕೆ. ಅನುಸೂಯ ಶಿವಣ್ಣ ಅವರಿಂದ ಸನ್ಮಾನ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಮಮತ ನಾಗರಾಜ್‌, ಡಾ. ಪ್ರತಿಮಾ ನಿಜಗುಣ ಶಿವಯೋಗಿ, ಅಂಬಿಕ ಬಿ.ಎಸ್‌., ಗೌರಮ್ಮ ಶ್ರೀನಿವಾಸ್‌ ಕೆ.ಆರ್‌. ಮತ್ತು ಹರಿಹರ ತಾಲ್ಲೂಕು ಕದಳಿ ಮಹಿಳಾ ವೇದಿಕೆ ಸದಸ್ಯರಿಂದ ವಚನ ಗಾಯನ ನಡೆಯಲಿದೆ.

error: Content is protected !!