ದಾವಣಗೆರೆ, ಏ. 16- ಪಕ್ಷೇತರನಾಗಿ ಕಣಕ್ಕಿಳಿದಿರುವ ನಾನು ದಾವಣಗೆರೆ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಬಡ ಮಕ್ಕಳು, ವಿದ್ಯಾವಂತರು, ಹಿರಿಯರು ಸೇರಿದಂತೆ ಎಲ್ಲಾ ವರ್ಗದವರಿಗೆ ನೆರವು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ನೀವೆಲ್ಲರೂ ಬೆಂಬಲಿಸಿ. ಸ್ವಾಭಿಮಾನದ ಹೋರಾಟಕ್ಕೆ ಮನ್ನಣೆ ನೀಡಿ ಮತ ನೀಡಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ಕುಮಾರ್ ಮನವಿ ಮಾಡಿದರು. ನಗರದ ಪಾರ್ಕ್, ಬೀದಿ ಬದಿ ವ್ಯಾಪಾರಿಗಳು, ಮಾರುಕಟ್ಟೆ ವರ್ತಕರು, ಪಾರ್ಕ್, ಕಾಫಿ ಬಾರ್ಗಳು, ಜನಸಂದಣಿ ಪ್ರದೇಶಗಳಲ್ಲಿ ಜನರನ್ನು ಭೇಟಿಯಾದ ವಿನಯ್ ಕುಮಾರ್ ಅವರು ಪಕ್ಷೇತರರಾಗಿ ಕಣಕ್ಕಿಳಿಯುತ್ತಿರುವುದು ಯಾಕೆ ಎಂಬ ಕುರಿತಂತೆ ವಿನಿಮಯ ಮಾಡಿಕೊಂಡರು.
ನಂತರ ಶ್ರೀಮತಿ ಗಂಗೂಬಾಯಿ ಹಾನಗಲ್ ಅವರ ಉದ್ಯಾನವನದಲ್ಲಿ ಬೆಳಗಿನ ವಾಯುವಿಹಾರ ಮಾಡುತ್ತಿದ್ದ ಅಧಿಕಾರಿಗಳನ್ನು ಭೇಟಿ ಮಾಡಿ ಬೆಂಬಲಿಸುವಂತೆ ಕೋರಿದರು.