ಕೆಎಸ್ಸಾರ್ಟಿಸಿಯಲ್ಲಿ ಅಂಬೇಡ್ಕರ್ ಜಯಂತಿ

ಕೆಎಸ್ಸಾರ್ಟಿಸಿಯಲ್ಲಿ ಅಂಬೇಡ್ಕರ್ ಜಯಂತಿ

ದಾವಣಗೆರೆ, ಏ. 16- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದಾವಣಗೆರೆ ವಿಭಾಗದ ಘಟಕ -1ರಲ್ಲಿ 133 ನೇ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಮೂರ್ತಿ  ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

 ವಿಭಾಗದ ಡಿಟಿಒ, ಏಒ., ಅಕೌಂಟ್ಸ್ ಆಫೀಸರ್ ಚೆಲುವೇಗೌಡ, ವಿಭಾಗೀಯ ಭದ್ರತಾಧಿಕಾರಿ ಜಗದೀಶ್, ಘಟಕ ವ್ಯವಸ್ಥಾಪಕ ರಾಮಚಂದ್ರಪ್ಪ, ಮುಖಂಡರುಗಳಾದ ಅಂಜನಪ್ಪ, ಓಂಕಾರಪ್ಪ, ಕೃಷ್ಣ, ಮೈಲಾರಪ್ಪ ಮತ್ತು ಕೆ.ಎಂ. ಪ್ರಕಾಶ್‌ಸ್ವಾಮಿ, ಗುರುಲಿಂಗಪ್ಪ, ಪುಷ್ಪಾ ಭಜಂತ್ರಿ,  ಲಿಂಗರಾಜು, ತಿಪ್ಪೇಸ್ವಾಮಿ, ಪ್ರದೀಪ, ಶಿವಕುಮಾರ, ಕರಿಬಸವ, ಸ್ವಾಮಿ, ಕೆ.ಎಂ. ವೀರಯ್ಯ ಹಾಗೂ ಘಟಕದ ಹಲವಾರು ಸಿಬ್ಬಂದಿ ವರ್ಗದವರು  ಹಾಜರಿದ್ದರು.

error: Content is protected !!