ದಾವಣಗೆರೆ, ಮಾ. 26- ಕೊಪ್ಪದಾಂಬ ಸೇವಾ ಟ್ರಸ್ಟ್ ವತಿಯಿಂದ ನಗರದ ಹದಡಿ ರಸ್ತೆಯ ಕೊಂಡಜ್ಜಿ ಬಸಪ್ಪ ವೃತ್ತದ ಬಳಿಯ ಪುಣ್ಯಕ್ಷೇತ್ರ ನವ ಸ್ಥಾನದಲ್ಲಿ ಇತ್ತೀಚೆಗೆ ಶ್ರೀ ಮಹಾ ಪ್ರತ್ಯಂಗಿರಾ ಹೋಮ, ಶನೇಶ್ವರ ಸ್ವಾಮಿ ಮಹಾಯಾಗ ಶ್ರದ್ಧಾ ಭಕ್ತಿಯಿಂದ ಜರುಗಿತು.
ಎರಡು ದಿನಗಳ ಕಾಲ ನಡೆದ 28ನೇ ವಾರ್ಷಿಕೋತ್ಸವದಲ್ಲಿ ನವಗ್ರಹ ಪೂಜೆ, ರಕ್ಷಾಬಂಧನ, ಕಳಸ ಸ್ಥಾಪನೆ, ಗಣಪತಿ ಹೋಮ, ನವಗ್ರಹ ಹೋಮ, ಅಭಿಷೇಕ ಸೇವೆಯ ಜತೆಗೆ ಪೂರ್ಣಾಹುತಿಯನ್ನು ಪ್ರಧಾನ ಅರ್ಚಕ ಮಂಜುನಾಥ್ ಸಮರ್ಪಣೆ ಮಾಡಿದರು.