ಸಚಿವ ಶಿವರಾಂ ಹೆಬ್ಬಾರ್‌ರಿಂದ ಶ್ರಮಿಕರ ಹಣ ಲೂಟಿ : ಆರೋಪ

ಕಟ್ಟಡ ಕಟ್ಟುವ-ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪ್ರತಿಭಟನೆ

ದಾವಣಗೆರೆ, ಫೆ.27- ಕಟ್ಟಡ ಮತ್ತು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಶ್ರಮಿಕರ ಹಣವನ್ನು ಲೂಟಿ ಹೊಡೆಯಲು ಯತ್ನಿಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾರ್ಮಿಕ ಇಲಾಖೆ ಯಲ್ಲಿನ ಹಗಲು ದರೋಡೆ ತಡೆಗಟ್ಟಬೇ ಕೆಂದು ಆಗ್ರಹಿಸಿ, ನಗರದಲ್ಲಿಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಡಳಿತ ಭವನದ ಮುಂದೆ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಿ. ಉಮೇಶ್ ನೇತೃತ್ವದಲ್ಲಿ ಪ್ರತಿಭಟಿಸಿದ ಪದಾಧಿಕಾರಿಗಳು, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಪಿ.ಕೆ. ಲಿಂಗರಾಜ್, ವಿ.ಲಕ್ಷ್ಮಣ್, ಭೀಮಾರೆಡ್ಡಿ,
ಡಿ. ಷಣ್ಮುಗಂ, ಶಿವಕುಮಾರ್ ಡಿ. ಶೆಟ್ಟರ್, ಸೈಯದ್ ಗೌಸ್ ಪೀರ್, ಫಯಾಜ್ ಸೇರಿದಂತೆ ಇತರರು ಇದ್ದರು.

error: Content is protected !!