ಜನಹಿತ ಪಕ್ಷದ ಅಭ್ಯರ್ಥಿಯಾಗಿ ದೊಡ್ಡೇಶ್ ಸ್ಪರ್ಧೆ

ದಾವಣಗೆರೆ, ಏ.16- ಜನತಾ ಪರಿವಾರದ ಧ್ಯೇಯ ತತ್ವಗಳನ್ನು ಅನುಸರಿಸುವವನಾಗಿ ಜನತಾ ಪರಿವಾರದ ನೂತನ ವೇದಿಕೆ ಐಡಿಯಾ (ಇಂಡಿಯನ್ ಡೆಮಾಕ್ರಸಿ ಎಂಪವರ್‌ಮೆಂಟ್‌ ಅಲೆಯನ್ಸ್‌ನ ಅಡಿಯಲ್ಲಿ ಕರ್ನಾಟಕದ ಪ್ರಾದೇಶಿಕ ಪಕ್ಷ ಜನಹಿತ ಪಕ್ಷದ ಅಭ್ಯರ್ಥಿಯಾಗಿ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವುದಾಗಿ ಹೆಚ್.ಎಸ್.ದೊಡ್ಡೇಶ್ ಹೇಳಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಕುಟುಂಬ ರಾಜಕಾರಣದ ವಿರುದ್ಧವಾಗಿ ಹೋರಾಡಲು ಜನತಾ ಪರಿವಾರದ ಜನಹಿತ ಪಕ್ಷಕ್ಕೆ ಮಾತ್ರ ಸಾಧ್ಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ವಿ.ಶಿವರಾಮ್, ರೆಹಮಾನ್ ಖಾನ್, ಪರಶುರಾಮ್, ಶಿವರುದ್ರಯ್ಯ ಸ್ವಾಮಿ ಇದ್ದರು.

error: Content is protected !!